Showing posts with label ವೀರಮಂಡಿ ಹೂಡಿರುವುದು ಕಾರಣೇನು gopalakrishna vittala. Show all posts
Showing posts with label ವೀರಮಂಡಿ ಹೂಡಿರುವುದು ಕಾರಣೇನು gopalakrishna vittala. Show all posts

Monday 2 August 2021

ವೀರಮಂಡಿ ಹೂಡಿರುವುದು ಕಾರಣೇನು ankita gopalakrishna vittala

ವೀರಮಂಡಿ ಹೂಡಿರುವುದು | ಕಾರಣೇನು

ವೀರ ಹನುಮ ಪೇಳು ನೀನಿದ ಪ.


ರಾಮ ಹೆಗಲ ಏರಲೆನ್ನುತಾ | ಕುಳಿತಿಯೇನೊ

ನೇಮದಿಂದ ದಾಸನಾಗುತ

ಕಾಮಿನಿಯ ಚೋರನನ್ನು

ಧೂಮಕೆಡಹಲೆಂದು ರಾಮ

ಆ ಮಹಾರಣರಂಗದಲ್ಲಿ

ಸ್ವಾಮಿಗೆ ಜಯವಿತ್ತು ಮೆರೆದೆ 1

ದ್ರೌಪದಿಯ ಮುಡಿಯನೆಳೆದನ | ಎದೆಯ ಮೇಲೆ

ಕೋಪದಿಂದ ಕುಳಿತು ಕರುಳಿನ

ಪಾಪಿ ಉರವ ಬಗೆದು ಘೋರ

ರೂಪ ತೋರಿ ಶತ್ರುಗಳಿಗೆ

ಶ್ರೀಪತಿಗೆ ಅರ್ಪಿಸಿದ್ದು

ಈ ಪರಿಯೆ ಪೇಳು ಹನುಮ 2

ಅಭಯಹಸ್ತ ತೋರುತಿರುವುದು | ಭಕ್ತರಿಗೆ

ಉಭಯ ತತ್ವe್ಞÁನ ಕೊಡುವುದು

ಇಭವರದ ಗೋಪಾಲ ಕೃ-

ಷ್ಣವಿಠಲನಂಘ್ರಿ ಕಮಲ

ಶುಭಪ್ರದಾಯ ಕಾವುದೆಂಬ

ದೃಢದ ಬುದ್ಧಿ ಕೊಡುವ ತೆರವೊ 3

****