Showing posts with label ಕರ್ಮ ಸಾಧನ ಮಾಡೊ ಮರ್ಮವ ತಿಳಿಯಲು ಕೂರ್ಮ madhwesha krishna KARMA SAADHANA MAADO MARMAVA TILIYALU KOORMA. Show all posts
Showing posts with label ಕರ್ಮ ಸಾಧನ ಮಾಡೊ ಮರ್ಮವ ತಿಳಿಯಲು ಕೂರ್ಮ madhwesha krishna KARMA SAADHANA MAADO MARMAVA TILIYALU KOORMA. Show all posts

Thursday 2 December 2021

ಕರ್ಮ ಸಾಧನ ಮಾಡೊ ಮರ್ಮವ ತಿಳಿಯಲು ಕೂರ್ಮ ankita madhwesha krishna KARMA SAADHANA MAADO MARMAVA TILIYALU KOORMA



 ಶ್ರೀ  ಕೂರ್ಮ ಜಯಂತಿ ವೈಶಿಷ್ಟ್ಯ 


ಕರ್ಮ ಸಾಧನ ಮಾಡೊ ಮರ್ಮವ ತಿಳಿಯಲು ಕೂರ್ಮ ದೇವರ

 ನೆನೆಯೋ ಧರ್ಮ ಮಾರ್ಗದಿ ನಡೆದು ಸರ್ವ ಸಂಪನ್ನನಾಗಿ ಊರ್ವಿಯೊಳು ಬಾಳೋ||ಪಲ್ಲ||


 ಕೂರ್ಮ ದೇವನ ಭಜಿಸಲು ನರಕದ ಬಾಧೆ ತಪ್ಪುವುದೊ

 ಕೂರ್ಮ ದೇವನ ಸ್ಮರಣೆ ಮಾಡೆ ಪಾಪಗಳು ಪರಿಹಾರ||೧||


 ಪಂಚ ಮಹಾ ಪಾತಕಗಳ ಪಾಪವನ್ನ ಕಳೆಯಲು 

ಪಾಪ ಲೇಪವಾಗದಂತೆ ಕೂರ್ಮದೇವನ ಸ್ಮರಿಸಿರೊ||೨||


 ಅಮೃತ ಮಥನ ಕಾಲದಲ್ಲಿ ಪರ್ವತವು ಮುಳಗುತಿರಲು

 ಕೂರ್ಮರೂಪನಾಗಿ ದೇವ ಬೆನ್ನ ಮೇಲೆ ಎತ್ತಿ ಹಿಡಿದ||೩||


 ಕರ್ಮ ಸಾಧನ ಮಾಡಲು ಕೂರ್ಮನನ್ನ ನೆನೆದು 

ಜ್ಞಾನವೃಧ್ಧಿಯಾಗಲು  ವೆದವ್ಯಾಸರನ್ನ ಭಜಿಸು||೪||


 ವಿಘ್ನಗಳು ಬಾರದಂತೆ ನರಸಿಂಹದೇವರನ್ನ ಸ್ತುತಿಸೆ ನಿ

ರ್ವಿಘ್ನದಿಂದ ನಡೆಸುವ ಮಧ್ವೇಶಕೃಷ್ಣ  ತಾನು||೫||

***