Showing posts with label ನರಸಿಂಹ ಸಲಹಯ್ಯ ನರಸಿಂಹಾ ದುರಿತ ಪರಿಹಾರಕ venkatanatha. Show all posts
Showing posts with label ನರಸಿಂಹ ಸಲಹಯ್ಯ ನರಸಿಂಹಾ ದುರಿತ ಪರಿಹಾರಕ venkatanatha. Show all posts

Saturday 1 May 2021

ನರಸಿಂಹ ಸಲಹಯ್ಯ ನರಸಿಂಹಾ ದುರಿತ ಪರಿಹಾರಕ ankita venkatanatha

ರಚನೇ : ಆಚಾರ್ಯ ನಾಗರಾಜು ಹಾವೇರಿ 

ಮುದ್ರಿಕೆ ವೇಂಕಟನಾಥ 


ನರಸಿಂಹ ಸಲಹಯ್ಯ ನರಸಿಂಹಾ ।

ದುರಿತ ಪರಿಹಾರಕ ನರಸಿಂಹಾ ।। ಪಲ್ಲವಿ ।।


ಕಮಲಾಕ್ಷ ಕಾಮಲಾಂಬಕ - ನರಸಿಂಹಾ ।

ಕಮಲಮಾರ್ಗಣ ಪಿತ - ನರಸಿಂಹಾ ।। ಚರಣ ।।


ಕಮನೀಯ ರೂಪ - ನರಸಿಂಹಾ ।

ಕಮನೀಯ ಗಾತ್ರ - ನರಸಿಂಹಾ ।। ಚರಣ ।।


ಕಮಲಜ ಪಿತ - ನರಸಿಂಹಾ ।

ಕಮಲಜ ಸುತ ಪ್ರಿಯ - ನರಸಿಂಹಾ ।। ಚರಣ ।।


ಚತುರಾಯುಧ ಚತುರಾಸ್ಯ -

ವಂದ್ಯ - ನರಸಿಂಹಾ ।

ಚತುರ್ವಿಧ ಪುರುಷಾರ್ಥ -

ಕೊಡು - ನರಸಿಂಹಾ ।। ಚರಣ ।।


ಚತುರಕುಲಜ ಕೈ -

ಪಿಡಿಯೋ - ನರಸಿಂಹಾ ।

ಚತುರಮೂರ್ತಿ -

ರಕ್ಷಿಸಯ್ಯಾ - ನರಸಿಂಹಾ ।। ಚರಣ ।।


ನಳಿನೋದರ ನರಸಿಂಹಾ ।

ನಳಿನಲೋಚನ ನರಸಿಂಹಾ  ।। ಚರಣ ।।


ನಳಿನನಾಭ ನಾರಸಿಂಹಾ ।

ನಳಿನಜಾಂಡದೊಡೆಯ 

ನರಸಿಂಹಾ ।। ಚರಣ ।।


ಪ್ರಹ್ಲಾದ ಬಾಹ್ಲೀಕ ವ್ಯಾಸರಾಜ -

ರಾಘವೇಂದ್ರ ವರದ ನಾರಸಿಂಹಾ ।

ಸಹ್ಲಾದ ಕಲ್ಹಾದ ಆಹ್ಲಾದ ವರದ -

ವೇಂಕಟನಾಥ ನಾರಸಿಂಹಾ ।।

****



" ಶ್ರೀ ನರಸಿಂಹ ಪಾಲಯಮಾಂ "

ನರಶ್ಚ ಸಿಂಹಶ್ಚ ನರಸಿಂಹೌ ।

ನರಸಿಂಹಯೋರಿದಂ 

ನಾರಸಿಂಹಮ್ ।

ನಾರಸಿಂಹಂ ವಪು: 

ಯಸ್ಯಸಃ ನಾರಸಿಂಹವಪು: ।।

ಭಕ್ತರ ಅನುಗ್ರಹಕ್ಕಾಗಿ ಮನುಷ್ಯ ದೇಹ - ಸಿಂಹದ ತಲೆಯನ್ನುಳ್ಳ ಶರೀರವನ್ನು ಧರಿಸಿರುವನು!!

ವಿವರಣೆ :

ಕಮಲಾಂಬಕ = ಕಮಲದಂಥಾ ಕಣ್ಣುಗಳುಳ್ಳವ 

ಕಮಲಮಾರ್ಗಣ = ಮನ್ಮಥ 

ಕಮನೀಯ ರೂಪ = ಮನೋಹರವಾದ ಸುಂದರ ರೂಪ 

ಕಮನೀಯ ಗಾತ್ರ = ಸುಂದರವಾದ ಶರೀರ ಉಳ್ಳವನು 

ಕಮಲಜ = ಶ್ರೀ ಚತುರ್ಮುಖ ಬ್ರಹ್ಮದೇವರು 

ಕಮಲಜ ಸುತ = ಶ್ರೀ ನಾರದ ಮಹರ್ಷಿಗಳು 

ಚತುರಾಯುಧ = ಶಂಖ - ಚಕ್ರ - ಗದಾ - ಪದ್ಮ 

ಚತುರಾಸ್ಯ = ಶ್ರೀ ಚತುರ್ಮುಖ ಬ್ರಹ್ಮದೇವರು 

ಚತುರಕುಲಜ = ಶ್ರೀ ಕೃಷ್ಣ ಪರಮಾತ್ಮ 

ಚತುರ ಮೂರುತಿ = ಶ್ರೀ ಅನಿರುದ್ಧ - ಶ್ರೀ ಪ್ರದ್ಯುಮ್ನ - ಶ್ರೀ ಸಂಕರ್ಷಣ - ಶ್ರೀ ವಾಸುದೇವ 

ನಳಿನೋದರ = ಹೊಟ್ಟೆಯಲ್ಲಿ ಕಮಲ ಉಳ್ಳವನು ( ಶ್ರೀ ಪದ್ಮನಾಭ )

ನಳಿನಲೋಚನ = ಕಮಲಾಕ್ಷ 

ನಳಿನಜಾಂಡ ಪತಿ = ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ (ಶ್ರೀ ಮಹಾವಿಷ್ಣು)

ಗುರು ವಿಜಯ ಪ್ರತಿಷ್ಠಾನ

*****