Showing posts with label ಈ ವನದೆಡೆಗಳು ಈ ನದಿ rangavittala ankita suladi ಶ್ರೀಕೃಷ್ಣ ಸುಳಾದಿ EE VANADEDEGALU EE NADI SRIKRISHNA SULADI. Show all posts
Showing posts with label ಈ ವನದೆಡೆಗಳು ಈ ನದಿ rangavittala ankita suladi ಶ್ರೀಕೃಷ್ಣ ಸುಳಾದಿ EE VANADEDEGALU EE NADI SRIKRISHNA SULADI. Show all posts

Monday 9 December 2019

ಈ ವನದೆಡೆಗಳು ಈ ನದಿ rangavittala ankita suladi ಶ್ರೀಕೃಷ್ಣ ಸುಳಾದಿ EE VANADEDEGALU EE NADI SRIKRISHNA SULADI

Audio by Mrs. Nandini Sripad

ಶ್ರೀ ಶ್ರೀಪಾದರಾಜ ವಿರಚಿತ  ಶ್ರೀಕೃಷ್ಣ ಸುಳಾದಿ 
  ( ಶ್ರೀಕೃಷ್ಣ ಚಾರಿತ್ರ , ಗೋಪಿಕಾ ವಿರಹ )

 ರಾಗ ಕಾಪಿ 

 ಧ್ರುವತಾಳ 

ಈ ವನದೆಡೆಗಳು ಈ ನದಿ ಪುಲಿನಗಳೀ - 
ಶಶಿ ಶಿಲೆಗಳು ಈ ಸುರತರುವಿನ ನೆಳಿಲು 
ಈ ತರುಲತೆಗಳು ಈ ಶುಕಪಿಕ ರವ
ಯಾಕೆ ಮಾಧವನ ಮರಿಯಲೀಯವೆ ಕೆಳದಿ
ಆ ಮುಗುಳುನಗೆಯ ಆ ಸೊಬಗಾ
ಆ ಸುರತರು ನೆಳಲಲ್ಲಿ ರತಿಯು
ಈ ಸುರತವ ನರುಹಿದಾ (ಆ)ಬಾಲಿಯರಿಗೆ
ಈ ಸುಗುಣಮಯ ರಂಗವಿಠ್ಠಲನೆ ಕೆಳದಿ ॥ 1 ॥

 ಮಠ್ಯತಾಳ 

ಇನ್ನು ರಂಗನ ಸಂಗವ 
ಇನ್ನೆತ್ತಣದು ಗೋಪಿಯರಿಗೆ
ಮಧುರಾಪುರಿಯ ಮಾನಿನಿಯರ 
ಬಲಿಗೆ ಕೃಷ್ಣನೆ ಸಿಲಿಕಿದನಾಗಿ
ರತಿ ವಿದಗ್ಧರಾದ ವಧುಗಳು 
ರಸಿಕ ನಮ್ಮ ರಂಗವಿಠ್ಠಲಾ ॥ 2 ॥

 ರೂಪಕತಾಳ 

ಬಿಡುವಾರು ಅಧಮರರಾ ಗಣಿಕಾ ಸ್ತ್ರೀಯರು ನೆರೆ
ಬಿಡುವವು ವೀತ ಫಲ ತರುಲತೆ ದ್ವಿಜಗಣ
ಬಿಡುವವು ಮೃಗದಾ ದಳ್ಳುರಿಯ ಕಂಡಡವಿಯ
ಬಿಡುವಾನೆ ಜಾರ ಪರಸತಿಯರ ನೆರೆದಿನ್ನು
ಈ ಪರಿ ಕಂಡೆವು ನಮ್ಮ ವಲ್ಲಭನಲ್ಲಿ
ಅಕ್ಕಟ ರಂಗವಿಠ್ಠಲ ಕರುಣಿಯೆ ॥ 3 ॥

 ಝಂಪೆತಾಳ 

ಹೆತ್ತ ತಾಯಿತಂದೆಯರಾ ನೋಡಲೆಂದು
ಇತ್ತಲಟ್ಟಿದನೆ ಉದ್ಧವ ನಿನ್ನ ಗೋವಳಾ
ಮತ್ತಾರು ಉಂಟು ವ್ರಜದೊಳು ತನಗೆ ನೆನವರು
ಹತ್ತಿರಿಕೆ ತನ್ನೀವರಲ್ಲಿ ತಾ ಬಿಡುವನೆ
ಅರ್ಥಕೃತ ಸ್ನೇಹ ನಮ್ಮೊಡನೆ ಮಾಡಿದ ಕೃಷ್ಣ
ಮತ್ತಾಳಿಗೆ ಕುಸುಮದಾನೆಹಾದಂತೆ
ರಕ್ತೀ ಎಮ್ಮೊಳಗುಂಟು ರಂಗವಿಠ್ಠಲಗೆ ॥ 4 ॥

 ತ್ರಿಪುಟತಾಳ 

ಇನ್ಯಾತಕೆ ರಂಗ ಇಲ್ಲಿಗೆ ಬಾಹಾ
ಮಧುಪುರಿಯರ ಅರಸನಾದಾ
ಮಲ್ಲರ ಕೊಂದು ಮಾವನ್ನ ಮರ್ದಿಸಿ 
ಮಧುರಾಪುರಿಗೆ ರಂಗ ಅರಸನಾದಾ
ಅವನ ನೆನಹೆ ಸಾಕು ರಂಗವಿಠ್ಠಲನಾ ॥ 5 ॥

 ಧ್ರುವತಾಳ 

ಕುಂದು ಕುಸುಮ ಶಶಾಂಕ ರಂಜಿತ 
ವೃಂದಾವನದಲ್ಲಿಹಾ 
ಮಂದಮಾರುತ ಬರಲು ನಲುವನರ -
ವಿಂದನಯನ ಹಾ 
ಕಂದಿದೆವು ಕುಂದಿದೆವು ನಾವು
ಕಂದರ್ಪನ ಶರದಟ್ಟೂಳಿಗೆ 
ಇಂದುಮುಖಿಯರ ವೃಂದದೊಡನೆ ಕೃಷ್ಣ
ಅಂದು ನಮ್ಮೊಡನಾಡಿದ ಪರಿಯನು ತಾನು
ಇಂದೊಮ್ಮೆಯಾದರು ನೆನೆವನೆ ಹಾ ॥ 6 ॥

 ರೂಪಕತಾಳ 

ಪೊಂದೇರು ಎಲ್ಲಿಂದ ಬಂದಿದೆ ವ್ರಜದಲ್ಲಿ
ಅಂದನಕ್ರೂರ ತಾ ಮರಳಿ 
ಬಂದನು ನಮ್ಮ ಕರದೊಯ್ಯಬೇಕೆನುತ 
ಕೊಂದುಕೊಳ್ಳಲಿ ತಮ್ಮ ಹಿರಿಯರನು ಹರಲಿಗೆ
ಅಂದೆಮ್ಮನಗಲಿಸಿದ ರಂಗವಿಠ್ಠಲನಾ 
ಅಂದೆಮ್ಮ ಕೊಂದಾ ಇಂದ್ಯಾಕೆ ಕೊಲ್ಲಲಿ ಬಂದಾ ॥ 7 ॥

 ಅಟ್ಟತಾಳ 

ಪರಮ ಸುಖದಾಸೆಯು ಬೇರೆಯಿಲ್ಲವೆಂದು
ವರದಳು ಪಿಂಗಳೆ ಜನರಿಗೆ ಹಿತವನು
ಪರಮ ಸುಖದಾಸೆ ಈತನ ಸೇವೆ ಎಲ್ಲವೆ
ಅರಿದರಿದು ಬಿಡುವ ನಾವು ನರಪಶುಗಳಲ್ಲವೆ
ಸಿರಿರಮಣಿ ಬಿಡಲು ನಮ್ಮ ರಂಗವಿಠ್ಠಲನಾ ॥ 8 ॥

 ಏಕತಾಳ 

ಎಮ್ಮ ತನುಮನ ತನ್ನಾಧೀನವೆಲೆ
ಅನ್ಯವನರಿಯನು ತನ್ನೊಲಿದಂತೆ ಮಾಡಲಿ
ಉನ್ನಂತ ಗುಣನಿಧಿಯೆಂದು ಮೊರೆಹೊಕ್ಕೆನು
ಅನ್ಯವನರಿಯನು ತನ್ನೊಲಿದಂತೆ ಮಾಡಲಿ
ಚೆನ್ನ ರಂಗವಿಠ್ಠಲಗೆ ಸಲ್ಲೆ 
ಮಾರುಹೋದೆನು ಅನ್ಯವನರಿಯೆ ॥ 9 ॥

 ಜತೆ 

ಅವನ ಹಂಬಲವೆನಗೆ ಜೀವನವವ್ವಾ 
ಭುವನಮೋಹನ ರಂಗವಿಠ್ಠಲ ದೇವರದೇವ ॥
**********

sripadaraja kruti  suladi

ಭೈರವಿ ರಾಗ 


( ಧ್ರುವತಾಳ)

ಈ ವನದೆಡೆಗಳು ಈ ಲತೆವನಗಳು
ಈನದಿಪುಳಿನಗಳೀ ಶಶಿಶಿಲೆಗಳು
ಸುರತರು ನೆಳಲು ಶುಕಪಿಕರವ
ಯಾಕೆ ಮಾಧವನ ಮರೆಯಲೀಯದಿವೆ ಕೆಳದಿ
ಆ ಮುಗುಳುನಗೆಯ ಆ ಸೊಬಗ
ಈಸುರತರು ನೆಳಲೀ ರತಿಯ
ಈ ಸುರತವನರಿದ ಬಾಲೆಯರೆಂತೊ
ಈ ಸುಗುಣಮಯ ರಂಗವಿಠಲನೆ ಕೆಳದಿ ೧

(ಮಠ್ಠ್ಯ ತಾಳ)

ಇನ್ನು ರಂಗನಂಗಸಂಗವು ಎತ್ತಣದು ಗೋಪಿಯರಿಗೆ
ಮಧುರೆಯ ಮಾನಿನಿಯರ ಬಲೆಯಲ್ಲಿ ಸಿಲುಕಿದನ
ಮಧುರೆಯ ಮಾನಿನಿಯರು ರತಿವಿದಗ್ಧರಾ
ವಧುಗಳು ರಸಿಕ ನಮ್ಮ ರಂಗವಿಠಲ ೨

(ತ್ರಿಪುಟ ತಾಳ)


ಇನ್ಯಾತಕೆ ರಂಗ ಇಲ್ಲಿಗೆ ಬಾಹಾ

ಮಧುರಾಪುರಿಯರಸನಾದ
ಮಲ್ಲರ ಕೊಂದು ಮಾವನ್ನ ಮಡುಹಿದ
ಮಧುರಾಪುರಿಯರಸನಾದ
ಅವನ ನೆನಹೆ ಸಾಕು ರಂಗವಿಠಲನಾ ೩

(ರೂಪಕತಾಳ)

ಬಿಡುವರು ಅಧನರ ಗಣಿಕೆಯರು ನೆರೆ
ಬಿಡುವವು ವಿಫಲ ತರುವ ದ್ವಿಜಗಣ
ಬಿಡುವವು ಮೃಗ ದಳ್ಳುರಿಗೊಂಡಡವಿಯ
ಬಿಡುವನು ಜಾರ ಪರವಧುವನು ನೆರೆದಿನ್ನು
ಇವು ದಿಟವಾಯಿತು ನಮ್ಮ ವಲ್ಲಭನೊಳು
ಅಕಟಕಟಾ ರಂಗವಿಠಲನ ಕರುಣಿಯೆ ೪

(ಅಟ್ಟತಾಳ)

ಕುಂದಕುಸುಮ ಶಶಾಂಕ ರಂಜಿತ
ವೃಂದಾವನದಲ್ಲಿ ಮಂದಮಾರುತ ಬರಲು ನಲಿದನು ಅರ-
ವಿಂದನಯನನು ಹಾ ಹಾ
ಕಂದಿದೆವು ಕುಂದಿದೆವು ನಾವು
ಕಂದರ್ಪನ ಶರದಟ್ಟುಳಿಗೆ ಹಾ
ಇಂದುಮುಖಿಯರ ವೃಂದದೊಳಗೆ ಕೃಷ್ಣಾ
ಅಂದು ನಮ್ಮೊಡನಾಡಿದ ಪರಿಯನು ತಾನು
ಇಂದೊಮ್ಮೆಯಾದರು ನೆನೆವನೆ ಹಾ ಹಾ
ಎಂದಿಗಾದರು ರಂಗವಿಠಲನಿಲ್ಲಿಗೆ ಬಹನೆ ೫

(ಝಂಪೆತಾಳ)

ಪೊಂದೇರದೆಲ್ಲಿಯದವ್ವಾ ಬಂದಿದೆ ವ್ರಜದೊಳಗೆ
ಅದಿನಕ್ರೂರನೆಂಬ ಕ್ರೂರನು ಮರಳಿ ಬಂದನೊ
ನಮ್ಮ ಕರೆದೊಯ್ಯಲಿಬೇಕೆಂದು
ಅಂದೆಮ್ಮ ಕೊಂದ
ಇಂದ್ಯಾರ ಕೊಲ್ಲಲಿ ಬಂದ
ಕೊಂದು ಕೊಳ್ಳಲಿ ತಮ್ಮ ಹಿರಿಯರನು ಹರಲಿಗ
ಅಂದೆಮ್ಮನಗಲಿಸಿದ ರಂಗವಿಠಲನಾ ೬

(ಏಕತಾಳ)

ಹೆತ್ತ ತಾಯಿ ತಂದೆಯರ ನೋಡಲೆಂದು
ಇತ್ತಲಟ್ಟಿದನೆ ಉದ್ಧವ ನಿನ್ನ ಗೋವಳಾ
ಮತ್ಯಾರುಂಟು ವ್ರಜದಲ್ಲಿ ನೆನೆವರು
ಹತ್ತಿರಕೆ ತನ್ನವರಲ್ಲಿ ತಾ ಬಿಡುವನೆ
ಅರ್ಥಕೃತ ಸ್ನೇಹ ನಮ್ಮೊಡನೆ ಮಾಡಿದ ಕೃಷ್ಣ
ಮತ್ತಳಿಗೆ ಕುಸುಮದ ನೇಹದಂತೆ
ರಕ್ತಿ ಎಮ್ಮೊಳುಂಟು ರಂಗವಿಠಲಗೆ ೭

(ಝಂಪೆತಾಳ)

ಪರಮಸುಖದಾಸೆ ಈತನ ಸೇವೆ ಅಲ್ಲವೆ
ಒರೆದಳೆ ಪಿಂಗಳೆ ಜನರಿಗೆ ಹಿತವನು
ಅರಿದರಿದು ಬಿಡುವ ನಾವು ನರಪಶುಗಳಲ್ಲವೆ
ಸಿರಿರಮಣಿ ಬಿಡಳು ನಮ್ಮ ರಂಗವಿಠಲನ್ನ ೮

(ಏಕತಾಳ)


ಎಮ್ಮ ತನು ಮನ ತನ್ನಧೀನವಲ್ಲೆ

ಅನ್ಯವರಿಯೆವು ತನ್ನರಿದಂತೆ ಮಾಡಲಿ
ಎಮ್ಮಸುವು ತನ್ನಧೀನವಲ್ಲೆ
ಅನ್ಯವರಿಯೆವು ತನ್ನರಿದಂತೆ ಮಾಡಲಿ
ನಮ್ಮ ರಂಗವಿಠಲರೇಯಗೆ
ಇನ್ನು ಸಲೆ ಮಾರುಹೋದೆವೆ ಕೆಳದಿ ೯

(ಜತೆ)

ಅವನ ಹಂಬಲವೆಮಗೆ ಜೀವನವವ್ವಾ
ಭುವನಮೋಹನ ರಂಗವಿಠಲನು ಕರುಣಿಯೆ

****

ಶ್ರೀ ಶ್ರೀಪಾದರಾಜರು 03 ಸುಳಾದಿಗಳನ್ನು ರಚಿಸಿದ್ದಾರೆ. 

" ತಾಳ : ಧ್ರುವ "

ಈ ವನದೆಡೆಗಳು ಈ ನದಿ ಪುಳಿನಗಳೀ । ಶಶಿ ಶಿಲೆಗಳು ಈ ಸುರ ತರುವಿನ ನೆಳಿಲು । ಈ ತರುಲತೆಗಳು ಈ ಶುಕ ಪಿಕ ರವ । ಯಾಕೆ ಮಾಧವನ ಮರಿಯಲೀಯವೇ ಕೆಳದಿ । ಆ ಮುಗುಳು ನಗೆಯು ಆ ಸೊಬಗಾ । ಆ ಸುರತರು ನೆಳಲಲ್ಲಿ ರತಿಯು । ಆ ಸುರತರುವನರುಹಿದಾ ( ಆ ) ಬಲಿಯರಿಗೆ । ಈ ಸುಗುಣಮಯ ರಂಗ ವಿಠ್ಠಲನೆ ಕೆಳದಿ ।। 1।।

ತಾಳ : ಮಠ್ಯ     

ಇನ್ನು ರಂಗನ ಸಂಗವ ಇನ್ನೆತ್ತಣದು ಗೋಪಿಯರಿಗೆ । ಮಧುರಾ ಪುರಿಯ ಮಾನಿನಿಯರ ಬಲಿಗೆ ಕೃಷ್ಣನೆ ಸಿಲುಕಿದನಾಗಿ । ರತಿ ವಿದಗ್ಧರಾದ ವಧುಗಳು । ರಸಿಕ ನಮ್ಮ ರಂಗ ವಿಠ್ಠಲ ।। 2 ।।

ತಾಳ : ರೂಪಕ 

ಬಿಡುವಾರು ಅಧಮರರಾ ಗಣಿಕಾ ಸ್ತ್ರೀಯರು ನೆರೆ । ಬಿಡುವವು ವೀತ ಫಲ ತರುಲತೆ ದ್ವಿಜಗಣ । ಬಿಡುವವು ಮೃಗದಾ ದಳ್ಳುರಿಯ ಕಂದಡವಿಯ । ಬಿಡುವಾನೆ ಜಾರ ಪರ ಸತಿಯರ ನೆರೆದಿನ್ನು ಈ ಪರಿ । ಕಂಡೆವು ನಮ್ಮ ವಲ್ಲಭನಲ್ಲಿ । ಅಕ್ಕಟ ರಂಗ ವಿಠ್ಠಲ ಕರುಣಿಯೇ ।। 3 ।।

ತಾಳ : ಝ೦ಪೆ 

ಹೆತ್ತ ತಾಯಿ ತಂದೆಯರಾ ನೋಡಲೆಂದು । ಇತ್ತಲಟ್ಟಿದನೇ ಉದ್ಧವ ನಿನ್ನ ಗೋವಳಾ । ಮತ್ತಾರು ಉಂಟು ವ್ರಜದೊಳು ತನಗೆ ನೆನವರು । ಹತ್ತಿರಕೆ ತನ್ನೀವರಲ್ಲಿ ತಾ ಬಿಡುವನೇ । ಅರ್ಥಕೃತ ಸ್ನೇಹ ನಮ್ಮೊಡನೆ ಮಾಡಿದ ಕೃಷ್ಣ । ಮತ್ತಾಳಿಗೆ ಕುಸುಮದಾನೆ ಹಾಡಂತೆ । ರಕ್ತೀ ಎಮ್ಮೊಳಗುಂಟು ರಂಗ ವಿಠ್ಠಲಗೆ ।। 4 ।।

ತಾಳ : ತ್ರಿವಿಡಿ 

ಇನ್ಯಾತಕೆ ರಂಗ ಇಲ್ಲಿಗೆ ಬಾಹಾ । ಮಧುಪುರಿಯರ ಅರಸನಾದಾ । ಮಲ್ಲರಕೊಂದು ಮಾವನ್ನ ಮರ್ದಿಸಿ । ಮಧುರಾಪುರಿಗೆ ರಂಗ ಅರಸನಾದಾ । ಅವನ ನೆನಹೇ ಸಾಕು ರಂಗ ವಿಠ್ಠಲನಾ ।। 5 ।।

ತಾಳ : ಧ್ರುವ 

ಕುಂದು ಕುಸುಮ ಶಶಾಂಕ ರಂಜಿತ । ವೃಂದಾವನದಲ್ಲಿಹಾ । ಮಂದ ಮಾರುತ ಬರಲು ನಲುವನರ । ವಿಂದ ನಯನ ಹಾ । ಕಂದಿದೆವು ಕಂದಿದೆವು ನಾವು । ಕಂದರ್ಪನ ಶರ ದಟ್ಟೂಳಿಗೆ । ಇಂದು ಮುಖಿಯರ ವೃಂದದೊಡನೆ ಕೃಷ್ಣ । ಅಂದು ನಮ್ಮೊಡನಾಡಿದ ಪರಿಯನು ತಾನು । ಇಂದೊಮ್ಮೆಯಾದರೂ ನೆನೆವೆನೆ ರಂಗ ವಿಠ್ಠಲನ ಹಾ ।। 6 ।।

ತಾಳ : ರೂಪಕ 

ಪೊಂದೇರು ಯಲ್ಲಿಂದ ಬಂದಿದೆ ವ್ರಜದಲ್ಲಿ ।ಅಂಧನಕ್ರೂರ ತಾ ಮರಳಿ । ಬಂದನು ನಮ್ಮ ಕರೆದೊಯ್ಯಬೇಕೆನುತ । ಕೊಂದುಕೊಳ್ಳಲಿ ತಮ್ಮ ಹಿರಿಯರನ್ನು ಹರಲಿಗೆ । ಅಂದೆಮ್ಮನಗಲಿಸಿದ ರಂಗ ವಿಠ್ಠಲನಾ । ಅಂದೆಮ್ಮ ಕೊಂದಾ ಇಂದ್ಯಾಕೆ ಕೊಲ್ಲಲಿ ಬಂದಾ ।। 7 ।।

ತಾಳ : ಅಟ್ಟ 

ಪರಮ ಸುಖದಾಸೆಯು ಬೇರೆಯಿಲ್ಲವೆಂದು । ವರದಳು ಪಿಂಗಳೆ ಜನರಿಗೆ ಹಿತವನು । ಪರಮ ಸುಖದಾಸೆ ಈತನ ಸೇವೆ ಯಲ್ಲವೇ । ಅರಿದರಿದು ಬಿಡುವ ನಾವು ನರಪಶುಗಳಲ್ಲವೇ । ಸಿರಿ ರಮಣಿ ಬಿಡಲು ನಮ್ಮ  ರಂಗ ವಿಠ್ಠಲನಾ ।। 8 ।।

ತಾಳ : ಏಕ 

ಯಮ್ಮ ತನುಮನ ತನ್ನಾಧೀನವೆಲೆ । ಅನ್ಯವನರಿಯನು ತನ್ನೊಲಿದಂತೆ ಮಾಡಲಿ । ಉನ್ನಂತ ಗುಣನಿಧಿಯಂದು ಮೊರೆಯೊಕ್ಕೆನು । ಅನ್ಯವನರಿಯನು ತನ್ನೊಲಿದಂತೆ ಮಾಡಲಿ । ಚೆನ್ನ ರಂಗ ವಿಠ್ಠಲಗೆ ಸಲ್ಲೆ ಮಾರುಹೋದೆನು ಅನ್ಯವನರಿಯೆ ।। 9 ।।

ಜತೆ :

ಅವನ ಹಂಬಲವೆನಗೆ ಜೀವನವವ್ವಾ । 

ಭುವನ ಮೋಹನ ರಂಗ ವಿಠ್ಠಲ  ದೇವರದೇವ ।। 10 ।।

****