Showing posts with label ಸಿರಿದೇವಿಯರಸನ ಹಿರಿಯ abhinavapranesha vittala ankita suladi ಸರಸ್ವತಿ ಸುಳಾದಿ SIRIDEVIYARASANA HIRIYA SARAWATI SULADI. Show all posts
Showing posts with label ಸಿರಿದೇವಿಯರಸನ ಹಿರಿಯ abhinavapranesha vittala ankita suladi ಸರಸ್ವತಿ ಸುಳಾದಿ SIRIDEVIYARASANA HIRIYA SARAWATI SULADI. Show all posts

Wednesday 29 September 2021

ಸಿರಿದೇವಿಯರಸನ ಹಿರಿಯ abhinavapranesha vittala ankita suladi ಸರಸ್ವತಿ ಸುಳಾದಿ SIRIDEVIYARASANA HIRIYA SARAWATI SULADI

Audio by Mrs. Nandini Sripad


 ಶ್ರೀ ಅಭಿನವ ಪ್ರಾಣೇಶವಿಠಲದಾಸಾರ್ಯ ವಿರಚಿತ 


 ಶ್ರೀಸರಸ್ವತಿದೇವಿಯರ ಸುಳಾದಿ 


 ರಾಗ ಸಾರಂಗ 


 ಧ್ರುವತಾಳ 


ಸಿರಿದೇವಿಯರಸನ ಹಿರಿಯ ಸೊಸೆಯೇ ವಾಣಿ 

ಸಿರಿದೇವಿ ಉಳಿದನ್ಯ ನಾರಿ ಶಿರೋಮಣಿ 

ಸರಸಿಜ ಸಂಭವ ಬ್ರಹ್ಮದೇವನ ರಾಣಿ 

ಸ್ಮರಿಪ ಸದ್ಭಕ್ತರ ಸುರಧೇನು ಚಿಂತಾಮಣಿ 

ಶರಣರ ಈಪ್ಸಿತ ಸಲಿಸುವ ಕಲ್ಯಾಣಿ 

ಪರಮ ಸುಂದರ ಶ್ರೇಣಿ ಶುಕವಾಣಿ ಫಣಿವೇಣಿ 

ತಿರೋಹಿತವಾಗದ ವಿಮಲ ಸುಜ್ಞಾನಿ 

ಪರಗತಿ ಸಾಧಕ ಸದ್ವಿದ್ಯಾದಾಯಿನಿ 

ಸರ್ವ ವೇದಾಭಿಮಾನಿ ವೀಣಾಪಾಣಿ 

 ಸಿರಿಯರಸಭಿನವ ಪ್ರಾಣೇಶವಿಟ್ಠಲನ 

ಸ್ಮರಿಪ ಸನ್ಮತಿ ನೀಡು ಸಿರಿ ಶಾರದಾಂಬಾ ॥ 1 ॥ 


 ಮಟ್ಟತಾಳ 


ಪುಂಡರೀಕ ನಯನೆ ಪುಂಡರೀಕಗಮನೆ 

ಪುಂಡರೀಕ ವಾಣಿ ಪುಂಡರೀಕ ಪಾಣಿ 

ಅಂಡಜ ಶಿಖರಥಳೆ ಅಂಡಜ ಸುತವಹಳೆ 

ಪಂಢರ ಅಭಿನವ ಪ್ರಾಣೇಶವಿಟ್ಠಲನ 

ಬಂಡುಣಿ ಎನಿಸು ಮದ್ವದನದೊಳು ನೆಲೆಸು ॥ 2 ॥ 


 ತ್ರಿವಿಡಿತಾಳ 


ಎರಡನೆ ಯುಗದಲ್ಲಿ ಖರಕ್ರವ್ಯಾದನು 

ಕರಿಕರ್ಣನು ಘೋರ ತಪವಗೈದು 

ಸರಸಿಜ ಸಂಭವನೊಲಿಸಿ ಮೆಚ್ಚಿಸಿ ತಾನು 

ವರವ ಯಾಚಿಪ ಸಮಯದಿಯವನ 

ಅರಿಯಾಳು ಮಾಡಿದೆ ಮತಿಭ್ರಂಶ ಗೈಸಿದೆ 

ನಿರುತ ನಿದ್ರೆಯ ಬೇಡ್ವ ತೆರ ಮಾಡಿದೆ 

ಸುರ ಸಜ್ಜನರಿಗೆಲ್ಲಾ ಹರುಷವ ಬೀರಿದೆ 

ಪರಮ ಸಮರ್ಥಳೆ ಶರಣು ಶರಣು 

 ಸುರವಂದ್ಯಭಿನವ ಪ್ರಾಣೇಶವಿಟ್ಠಲನ 

ಚರಣ ವಾರಿಜ ಭೃಂಗೆ ದೀನ ದಯಾಪಾಂಗೆ ॥ 3 ॥ 


 ಅಟ್ಟತಾಳ 


ಧರಿಭಾರ ವಿಳುಹಲು ಶಿರಿಯರಸನು ತಾನು 

ವರ ರಘುರಾಮ ನಾಮದಿ ಧರೆಯೊಳು ಪುಟ್ಟಿ 

ಹರಿ ಪೀಠ ಯುವರಾಜ್ಯವೇರುವ ಸಮಯದಿ 

ಸುರರ ಮೊರೆಯ ಕೇಳಿ ಹರಿ ಇಚ್ಛೆಯರಿತು ಮಂ - 

ಥರಿಗೆ ದುರ್ಮತಿ ಇತ್ತು ಸುರಕಾರ್ಯ ಮಾಡಿದೆ 

ಹರಿ ಶಿರಿ ರಾಮರು ವನವಾಸ ಕೈಕೊಂಡು

ಖರ ಕ್ರವ್ಯಾದರ ತರಿದು ಪುರಕೆ ಬಂದು 

ಹರಿ ವಿಷ್ಠರೇರಲು ಪರಮಾನಂದವು

ಸರುವರಿಗಾಗುವ ತೆರ ಮಾಡಿದೆ ತಾಯೇ 

ಕರುಣ ಮಹಾರ್ಣವೇಚಾರಂತೆ ನಮೋ ನಮೋ 

ಕರುಣಾಳು ಅಭಿನವ ಪ್ರಾಣೇಶವಿಟ್ಠಲನ 

ಚರಣ ದಾಸ್ಯವನಿತ್ತು ಪರಿಪಾಲಿಸಮ್ಮ ॥ 5 ॥ 


 ಆದಿತಾಳ 


ಹರಿಸರ್ವೋತ್ತಮನೆಂಬ ಸ್ಥಿರಜ್ಞಾನವಿರಲಮ್ಮ 

ಮರುತ ಜೀವೋತ್ತಮನೆಂಬ ಬುದ್ಧಿಯಿರಲಮ್ಮ 

ಹರ ತಾರಕ ಗುರುವೆಂಬ ಮತಿಯಿರಲಮ್ಮ

ಗುರು ಮಧ್ವಮತದಲ್ಲಿ ಧೃಢ ಭಕ್ತಿಯಿರಲಮ್ಮ

 ಸಿರಿಯರಸಭಿನವ ಪ್ರಾಣೇಶವಿಟ್ಠಲನ 

ಹಿರಿಯ ಸೊಸೆಯೇ ನಿನ್ನ ಕರುಣವಿರಲಮ್ಮ  ॥ 5 ॥ 


 ಜತೆ 


 ವೇದಗಮ್ಯಭಿನವ ಪ್ರಾಣೇಶವಿಟ್ಠಲನ 

ಪಾದ ಧ್ಯಾನವನಿತ್ತು ಮೋದ ಕೊಡು ನಿತ್ಯ ॥

****