Showing posts with label ಬಾರೋ ಹನುಮ ಬಾರೊ ಭೀಮ ಬಾರೊ gopalakrishna vittala BAARO HANUMA BAARO BHEEMA BAARO MADHWACHARYA STUTIH. Show all posts
Showing posts with label ಬಾರೋ ಹನುಮ ಬಾರೊ ಭೀಮ ಬಾರೊ gopalakrishna vittala BAARO HANUMA BAARO BHEEMA BAARO MADHWACHARYA STUTIH. Show all posts

Thursday 2 December 2021

ಬಾರೋ ಹನುಮ ಬಾರೊ ಭೀಮ ಬಾರೊ ankita gopalakrishna vittala BAARO HANUMA BAARO BHEEMA BAARO MADHWACHARYA STUTIH



ಬಾರೊ ಹನುಮ ಬಾರೊ ಭೀಮ ಬಾರೊ ಮಧ್ವಮುನಿಪ ಪ.


ಬಾರೊ ರಾಮಕೃಷ್ಣ ವೇದವ್ಯಾಸರ ಪ್ರಿಯ ಭಕ್ತ ಅ.ಪ.


ಅಂಜನೇಯ ಸುತನು ಆಗಿ

ಸಂಜೀವನ ಗಿರಿಯ ತಂದೆ

ಕಂಜಲೋಚನೆಯ ವಾರ್ತೆ

ಮಂಜುಭಾಷಣ ರಾಮನಿಗರುಹಿದೆ 1


ಪಾಪಿ ಕೌರವ ಕುಲವ ಕೊಂದು

ದ್ರೌಪದಿಯ ಕಾಯ್ದ ಮಹಿಮ

ಶ್ರೀಪತಿ ಶ್ರೀ ಕೃಷ್ಣನ ಭಜಿಸಿದ

ಭೂಪ ಭೀಮಸೇನ ಬೇಗ 2


ಭೂಸುರ ಜನ್ಮದಲಿ ಬಂದು

ಆಸೆಯಿಂದ ಆಶ್ರಮ ಕೊಂಡು

ದೋಷಿ ಅನ್ಯಮತವ ಮುರಿದು

ಭೂಸುರರ ಕಾಯ್ದ ಮಧ್ವ 3


ಸಕಲ ಸುಜನರ ಸೇವೆ ಕೊಂಡು

ಮುಕುತಿಮಾರ್ಗಪ್ರದ ನೀನಾಗಿ

ಭಕುತಿಮಾರ್ಗವ ತೋರಿ ಎನ್ನ

ಹೃತ್ಕಮಲ ಮಧ್ಯದಲಿ ನಿಲ್ಲೊ 4


ಗೋಪಾಲಕೃಷ್ಣವಿಠ್ಠಲನ

ರೂಪ ನೋಡುವ ಕೃಪೆಯ ಮಾಡೊ

ಶ್ರೀಪತಿ ಶ್ರೀ ಶ್ರೀನಿವಾಸಗೆ

ನೀ ಪ್ರೀತಿಕರನೆಂದು ನಮಿಪೆ 5

****