Showing posts with label ಯಾಯಾ ವರವ ನೀಡಿ ಶ್ರೀ ಮಾಯಾ ರಮಣನ ಭಕುತರಿಗೆ gurupranesha vittala. Show all posts
Showing posts with label ಯಾಯಾ ವರವ ನೀಡಿ ಶ್ರೀ ಮಾಯಾ ರಮಣನ ಭಕುತರಿಗೆ gurupranesha vittala. Show all posts

Thursday 5 August 2021

ಯಾಯಾ ವರವ ನೀಡಿ ಶ್ರೀ ಮಾಯಾ ರಮಣನ ಭಕುತರಿಗೆ ankita gurupranesha vittala

 .. by ಗುರುಪ್ರಾಣೇಶ ವಿಠಲ

ಯಾಯಾ ವರವ ನೀಡಿ ಶ್ರೀ |ಮಾಯಾ ರಮಣನ ಭಕುತರಿಗೆ ಪ


ಅರುಣೋದಯ ಕಾಲದಲೆದ್ದು ಶ್ರೀ |ಹರಿಸ್ಮರಣೆ ಮಾಡುತಲಿದ್ದು ||ಕರಚರಣಾದ್ಯವಯವ ಶುದ್ಧಿ |ವಿರಚಿಸಿ ನಿರ್ಮಲ ಮನವಿ 1

ಆದ್ಯಂತ ಗುರುವಾದ |ಮಧ್ವರಾಯರ ಮತವಪೊದ್ದಿದ ಭಗವದ್ದಾಸರು ಬಂದರೆಇದ್ದಿಲ್ಲವು ಎಂದೆನ ಬ್ಯಾಡಿ2

ಘನ ಮಹಿಮ ನಾರಾಯಣನು ಇವ |ರನು ಕರತಂದಿಹನೆಂದರಿದೂ ||ಮನದಲಿ ಯೋಚಿಸಿ |ಸನುಮಾನವನು ಪಡುತಲಿ 3

ಯಾಚನೆ ಮಾಡುವರೆಲ್ಲಾ ಬಲು |ನಾಚಿಕೆ ಉಳ್ಳವರೆಂದು ||ಖೇಚರ ವಾಹನ ಪ್ರಿಯರು ಶು- |ದ್ಧಾಚರಣೆಯವರೆಂದು 4

ನರರಂತೆ ಇವರಲ್ಲಗುರು ಪ್ರಾಣೇಶ ವಿಠಲನಂಘ್ರಿ ||ಸರಸೀಜ ಧೇನಿಸುತ ಯಮ್ಮರ ಸುತ ಬಂದಿಹರೆಂದೂ 5

****