Showing posts with label ಗುರುಶ್ರೀಸುಶಮೀಂದ್ರರ ಚರಣ ಕಮಲ ಭಜಿಪ lakumeesha sushameendra teertha stutih. Show all posts
Showing posts with label ಗುರುಶ್ರೀಸುಶಮೀಂದ್ರರ ಚರಣ ಕಮಲ ಭಜಿಪ lakumeesha sushameendra teertha stutih. Show all posts

Saturday 1 May 2021

ಗುರು ಶ್ರೀ ಸುಶಮೀಂದ್ರರ ಚರಣ ಕಮಲ ಭಜಿಪ ankita lakumeesha sushameendra teertha stutih

sushameendra teertha rayara mutt yati stutih


ಶ್ರೀ ಲಕುಮೀಶಾ೦ಕಿತ ಶ್ರೀ ಕುರುಡಿ ರಾಘವೇಂದ್ರಚಾರ್ಯರು.... 

ರಾಗ : ನಾಟ  ತಾಳ : ರೂಪಕ 


ಗುರು ಶ್ರೀ ಸುಶಮೀಂದ್ರರ -

ಚರಣ ಕಮಲ ಭಜಿಪ ।

ನರನೆ ಧರೆಯೊಳು ಧನ್ಯನೋ ।। ಪಲ್ಲವಿ ।।


ಸುಜಯೀಂದ್ರರ ಕರ -

ಸರಸೀಜ ಜಾತ ।

ಧರೆಯಲ್ಲಿ ಮೆರೆಯುವ 

ಪರಮ ಸಾತ್ವಿಕರಾದ ।। ಅ. ಪ ।।


ರಾಜಾ ರಾಜಗೋಪಾಲಾಚಾರ್ಯ -

ಪದ್ಮಾಂಬೆಯಾರ ಜಾತ ।

ತೇಜ ಗುಣದಿ ರಾಜಿತಾ ।

ಮೋಜಿಲಿ ಶ್ರೀ ಸುಯಮೀಂದ್ರರ ಸೇವಿಸಿ ।।

ನೈಜ ಗುನಡಿ ಶ್ರೀ ಸುಜಯೀಂದ್ರರೊಲಿಸಿ ।

ರಾಜಿಲಿಂದ ಸಂನ್ಯಾಸ ವಹಿಸಿ ।

ಈ ಜಗದಲಿ ಮೆರೆದ ಸನ್ಮುನಿ ।। ಚರಣ ।।


ಇಷ್ಟ ಪ್ರದರಾದಂಥ ಶ್ರೇಷ್ಠ 

ಶ್ರೀ ರಾಘವೇಂದ್ರರ ।

ಅಷ್ಟಾಕ್ಷರ ಮಂತ್ರ ಜಪಿಸಿ ।

ನಿಷ್ಠೆಯಲಿ ಮೂಲರಾಮನಂಘ್ರಿಯ ।।

ಪಟ್ಟು ಸಂತತ ಸತತ ಪೂಜಿಸಿ ।

ಕಷ್ಟ ಸುಜನಕೆ ಬಿಡದೆ ಓಡಿಸಿ ।

ಶಿಷ್ಟ ಕವಿಗಳ ಸಂತತ ರಕ್ಷಿಪ ।। ಚರಣ ।।


ದಾನದಲಿ ಕರ್ಣರೆನಿಸಿ 

ಜ್ಞಾನಿ ಸುರಧೇನೆನಿಸಿ ।

ಮೌನೀ ಜನರಲಿ ರಾಜಿಸೀ ।

ಜಾನಕೀಶ ಲಕುಮೀಶನಂಘ್ರಿಯ ।।

ಧ್ಯಾನದಿಂದ ಅನೇಕ ಸ್ಥಳದಲೀ ।

ಮಾನಿತರಾಗಿ ತುಲಾಭಾರಗೊಂಡು ।

ತಾಣ ಮಂತ್ರಾಲಯದಿ ನೆಲಸಿಹ ।। ಚರಣ ।।

****