Showing posts with label ಸೇತುಮಧ್ಯದಲ್ಲಿ vijaya vittala ankita suladi ಸೇತು ಧನಸ್ಸುಕೋಟಿ ಸುಳಾದಿ SETUMADHYADALLI SETU DHANASSUKOTI SULADI. Show all posts
Showing posts with label ಸೇತುಮಧ್ಯದಲ್ಲಿ vijaya vittala ankita suladi ಸೇತು ಧನಸ್ಸುಕೋಟಿ ಸುಳಾದಿ SETUMADHYADALLI SETU DHANASSUKOTI SULADI. Show all posts

Monday 9 November 2020

ಸೇತುಮಧ್ಯದಲ್ಲಿ vijaya vittala ankita suladi ಸೇತು ಧನಸ್ಸುಕೋಟಿ ಸುಳಾದಿ SETUMADHYADALLI SETU DHANASSUKOTI SULADI

 

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ಸೇತು ಧನಸ್ಸುಕೋಟಿ ಮಹಿಮೆ ಸುಳಾದಿ 


 ರಾಗ : ಸುರುಟಿ 

 ಧ್ರುವತಾಳ 


ಸೇತುಮಧ್ಯದಲ್ಲಿ ಒಪ್ಪುತ ಪೊಳೆದನಾಗ

ಸೀತಾರಾಮನು ಬಂದು ಸೇತು ಬಂಧಿಸಿ ಖಳರಾ 

ಕೋತಿಗಳಿಂದಲಿ ಘಾತಮಾಡಿಸಿ 

ಪಾತಕ ರಾವಣನ್ನ ಯಾತನಿಗೆ ಕಳುಹಿ 

ಚಾತುರ್ಯದಲ್ಲಿ ಸುರವ್ರಾತವನು ಪಾಲಿಸಿ 

ಭೂತನಾಥನ ಇಲ್ಲಿ ಪ್ರೀತಿಯಿಂದ ಪ್ರತಿಷ್ಟಿ -

ಸಿ ತಾನು ಪೆಸರಾದ ಭೂತಳದೊಳಗೆಲ್ಲ ಭೂತ ಪ್ರಮಥ 

ಮಥ ಪೇತಾವೃತಗಳಿಂದ ಜಾತವೇದಸನ ಮನ 

ಭೂತಳಾಧಿಪ ರಘುನಾಥನ ಚರಣಾಂಬುಜ 

ತಾ ತುತಿಸುತಿರೆ ಪೀತಾಂಬರಧರ ಶ್ರೀ ವಿಜಯವಿಠಲರೇಯಾ ll1ll


 ಮಟ್ಟತಾಳ 


ಮಾಧವನು ಗಂಧ ಮಾಧನಗಿರಿಯಲ್ಲಿ 

ವೇದಗಳು ತುತಿಸೆ ವೇಧನು ಕೊಂಡಾಡೆ 

ವೇದ ಪುರುಷಾ ಲವಣೋದಧಿ ಮಧ್ಯದಲ್ಲಿ 

ಸಾಧುಸಜ್ಜನರೊಡನೆ ಮೋದವಾಲಗವಾದನು ಹರುಷದಲಿ 

ಶ್ರೀದೇವಿಯರಸಾ ವಿಜಯವಿಠಲ ರಾಮಾ 

ಕ್ರೋಧರಸದೆ ಒಡೆದು ತ್ರಿಧರೆಯೊಳು ಮೆರೆದಾ ll2ll


 ರೂಪಕತಾಳ 


ಈ ಪರಿಯಲಿ ವಾಲಗ ಪರಮಪುರುಷ 

ಆ ಪಾರ ಬಗೆಯಲಿ ತಾ ಪ್ರೀತನಾಗಿರೆ 

ಆ ಪತ್ತಿಗೆ ಬಂದು ಶರಣೆಂದು ಮೊರೆಹೊಕ್ಕ 

ಆ ಪನ್ನ ವಿಭೀಷಣಾ ಕರವನ್ನು ಮಗುಚಿ 

ಭೂಪಾರಾ ಶಿರೋರತುನ ಬಿನ್ನಹಾ ಕೇಳೆಂದು 

ಪಾಪರಹಿತ ಭಕ್ತ ಪೊಗಳಿದನೂ 

ಶ್ರೀಪತಿ ರಘುರಾಮಾ ನೀ ಸೇತು ಉಳುಹಿದರೆ 

ಆ ಪತ್ತ ಅಡರುವದು ಧರಿಗೆನಲೂ 

ಚಾಪಧರಾಗ್ರಣಿ ವಿಜಯವಿಠಲ ಲಂಕಾ 

ದ್ವೀಪ ಪತಿಯಾ ಮಾತನ್ನು ಪಾಲಿಸಿದನು ll3ll


 ಝಂಪೆತಾಳ 


ಸೇತುವಿನ ಛೇದಿಸಿ ಮೂರು ಭಾಗವ ಮಾಡಿ 

ಸೇತು ಮಾಡಿದನು ಸುರನರದಾನವ 

ವ್ರಾತಗಳು ಮಿಂದು ಕೃತಾರ್ಥನಾಗುವದಕ್ಕೆ 

ಸೀತಾರಾಮನು ಬಲು ಪ್ರೀತಿಯಲ್ಲಿ 

ಪ್ರಾತರಾ ಮಧ್ಯಾನ್ನಾ ಸಾಯಂಕಾಲದ ಕಾಲಾ-

ತೀತಾಗಗೊಡದೆ ಬಲು ಭಕುತಿಯಲ್ಲೀ 

ಜಾತ ಉತ್ತಮರೆಲ್ಲಿ ನಿತ್ಯನೈಮಿತ್ಯಗಳು 

ಶಾತದಲ್ಲಿ ಮಾಡಲು ಸರ್ವೋತ್ತುಮಾ 

ವಾತ ನಿಜಗುರು ರಘುನಾಥ ವಿಜಯವಿಠಲಾ 

ಸೇತುಯಾತ್ರಿಗೆ ಬರಲು ಪ್ರೀತಿಮಾಡುವನು ll4ll


 ತ್ರಿವಿಡಿತಾಳ 


ರತುನಾಕಾರ ಮಹೋದಧಿ ಸಂಗಮದಲಿ ಅಪಾರ 

ವಿತವಲ್ಲಿ ಮುಖ್ಯರು ವಾಯುಜನ ಸ -

ಹಿತಾ ಶೃತೆನುತೆ ಲಕುಮಿ ಎಂದೆನಿಸುವ ವೈದೇಹಿ 

ರತಿ ಪತಿ ಪಿತ ನಾರಾಯಣನೆ ರಾಮಾ 

ಅತಿಶಯದಿಂದ ತೀರಥದೊಳು ಸನ್ನಿಧ 

ಪ್ರತಿದಿನದಲಿ ಬಿಡದೆ ಇರುತಿಪ್ಪರು 

ಹಿತದಿಂದ ನಿಂದು ವಂದನೆ ಗೈದವರಿಗೆ 

ಮತಿಯಾಗುವದು ಸೌಭಾಗ್ಯ ಮ್ಯಾಲೆ 

ಗತಿಯಾಗುವದಿದಕೆ ಸಂಶಯ ಲೇಶವಿಲ್ಲ 

ಚತುರಾತರು ಕೇಳಿ ಸಂತೋಷರಾಗಿ 

ಸತುದೈವ ರಾಘವ ವಿಜಯವಿಠಲರೇಯಾ 

ಪತಿಯಾಗಿಪ್ಪನು ಇಲ್ಲಿ ಪಿತಮಹಾದ್ಯರಿಗೆಲ್ಲಾ ll5ll


 ಅಟ್ಟತಾಳ 


ಹತ್ತು ಸಾವಿರ ವಿಪ್ರವಧೆ ಕನಕಸ್ತೇಹ

ಮತ್ತೆ ಇದರಷ್ಟು ಸುರಾಪಾನಾ ಗುರುತಲ್ಪಾ 

ಇತ್ತಂಡಾದಲಿ ಸಂಸರ್ಗಿಕೋಟಿ ಇರೆ 

ಎತ್ತಲಾದರು ಏನು ನರರು ಒಮ್ಮೆ ಬಂದು 

ಚಿತ್ತಶುದ್ಧನಾಗಿ ನಿಂದು ತುತಿಸಿದಾರು 

ಸೋತ್ತುಮನಾಗುವ ಸರ್ವಕಾಲದಲ್ಲಿ 

ಕತ್ತಲೆ ಹರ ನಮ್ಮ ವಿಜಯವಿಠಲ ದೇ -

ವೋತ್ತುಮಾನೊಲಿದು ಮುಕ್ತಿಯನೀವನು ll6ll


 ಆದಿತಾಳ 


ಪುಸಿ ಎನ್ನದಿರಿ ಧನುಸ್ಸುಕೋಟಿ ಮಹಿಮೆ ಪ -

ಠಿಸಿ ಕೇಳಿದವಗೆ ಲಾಲಿಸಿ ಪೇಳಿದವಗೆ 

ವಿಷಯಾದಿಗಳ ಮಹಾಪ್ರಸರವಳಿದು ಯಮನ 

ಘಸಣಿಗೆ ತಪ್ಪಿಸಿ ಗತಿಗೇರಿಸುವುದು ಶುಭದಿಂದ 

ವಸುಧಿಯೊಳಾವ ಮಾನಿಸನಾದರು ಸೇ -

ವಿಸಿದರು ಪುಣ್ಯ ಸಿದ್ಧಿಸುವುದು ವೇಗದಲ್ಲಿ 

ಅಸುರ ವಿರೋಧಿ ರಾಮಾ ವಿಜಯವಿಠಲರೇಯ 

ಪೆಸರಾದ ಸೇತು ಬಂಧಿಸಿ ಶ್ರುತಿ ಸ್ಮೃತಿಯೊಳು ll7ll


 ಜತೆ 


ಮೊದಲು ನರರು, ಮಧ್ಯಾದೇವಾಂತ್ಯದನುಜರು ತ್ರಿ 

ವಿಧಮಾಡಿದ ರಾಮಾ ವಿಜಯವಿಠಲ ನೊಲಿದು ll8ll

*******