Showing posts with label ಕವನ ಪೇಳು ನೀ ಮನವೆ ಆವಾವ ನೆವದಿದಾದ್ದು ಘನವೆ vijayaramachandra vittala. Show all posts
Showing posts with label ಕವನ ಪೇಳು ನೀ ಮನವೆ ಆವಾವ ನೆವದಿದಾದ್ದು ಘನವೆ vijayaramachandra vittala. Show all posts

Friday 6 August 2021

ಕವನ ಪೇಳು ನೀ ಮನವೆ ಆವಾವ ನೆವದಿದಾದ್ದು ಘನವೆ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಕವನ ಪೇಳು ನೀ ಮನವೆ

ಆವಾವ ನೆವದಿದಾದ್ದು ಘನವೆ ಪ


ಭುವನ ಪಾವನ ಲಕ್ಷ್ಮೀ -

ಧವನ ನವಗುಣ ರೂಪ ಕ್ರಿಯವನ್ನೆ ಅ.ಪ


ಸ್ತವನ ಮಾಡಬೇಡÀ ನ್ಯಪನನ್ನು

ನವ ಯುವತೇರ ಮೆಚ್ಚಬೇಡ

ಪವನ ಭವ ಮತ ಬಿಡಬ್ಯಾಡ

ಭವದೊಳು ಮಮತೆ ಕೊಡಬ್ಯಾಡÉ 1


ಹರಿಕಥಾ ಶ್ರವಣ ಬಿಡಬ್ಯಾಡ

ಹರಿದಾಸರೊಳು ಛಲ ಇಡಬ್ಯಾಡ

ದುರುಳ ಮಾಯವಾದಿರ ಸ್ನೇಹ

ಅರಿತು ಮಾಡಲು ಅದು ಮಹಾಮೋಹ 2


ಅಜನಪಿತನ ಸ್ಮರಣೆ ಮರಿಬ್ಯಾಡ

ರುಜುಮಾರ್ಗವ ಬಿಟ್ಟು ನಡಿಬ್ಯಾಡ

ವಿಜಯ ರಾಮಚಂದ್ರವಿಠಲನ ಮರೆದು

ಗೋಜು ಕರ್ಮವ ಮಾಡಲಲ್ಲೇನು ಮಾತು 3

***