Friday 6 August 2021

ಕವನ ಪೇಳು ನೀ ಮನವೆ ಆವಾವ ನೆವದಿದಾದ್ದು ಘನವೆ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಕವನ ಪೇಳು ನೀ ಮನವೆ

ಆವಾವ ನೆವದಿದಾದ್ದು ಘನವೆ ಪ


ಭುವನ ಪಾವನ ಲಕ್ಷ್ಮೀ -

ಧವನ ನವಗುಣ ರೂಪ ಕ್ರಿಯವನ್ನೆ ಅ.ಪ


ಸ್ತವನ ಮಾಡಬೇಡÀ ನ್ಯಪನನ್ನು

ನವ ಯುವತೇರ ಮೆಚ್ಚಬೇಡ

ಪವನ ಭವ ಮತ ಬಿಡಬ್ಯಾಡ

ಭವದೊಳು ಮಮತೆ ಕೊಡಬ್ಯಾಡÉ 1


ಹರಿಕಥಾ ಶ್ರವಣ ಬಿಡಬ್ಯಾಡ

ಹರಿದಾಸರೊಳು ಛಲ ಇಡಬ್ಯಾಡ

ದುರುಳ ಮಾಯವಾದಿರ ಸ್ನೇಹ

ಅರಿತು ಮಾಡಲು ಅದು ಮಹಾಮೋಹ 2


ಅಜನಪಿತನ ಸ್ಮರಣೆ ಮರಿಬ್ಯಾಡ

ರುಜುಮಾರ್ಗವ ಬಿಟ್ಟು ನಡಿಬ್ಯಾಡ

ವಿಜಯ ರಾಮಚಂದ್ರವಿಠಲನ ಮರೆದು

ಗೋಜು ಕರ್ಮವ ಮಾಡಲಲ್ಲೇನು ಮಾತು 3

***


No comments:

Post a Comment