Showing posts with label ಹರಿಚರಿತೆ ಶ್ರವಣ ದುರಿತ shree krishna ankita suladi ಹರಿಸೇವೆ ಸುಳಾದಿ HARI CHARITE SHRAVANA DURITA HARISEVE SULADI. Show all posts
Showing posts with label ಹರಿಚರಿತೆ ಶ್ರವಣ ದುರಿತ shree krishna ankita suladi ಹರಿಸೇವೆ ಸುಳಾದಿ HARI CHARITE SHRAVANA DURITA HARISEVE SULADI. Show all posts

Monday 9 December 2019

ಹರಿಚರಿತೆ ಶ್ರವಣ ದುರಿತ shree krishna ankita suladi ಹರಿಸೇವೆ ಸುಳಾದಿ HARI CHARITE SHRAVANA DURITA HARISEVE SULADI

Audio by Mrs. Nandini Sripad

ಶ್ರೀ ವ್ಯಾಸರಾಜ ವಿರಚಿತ  ಶ್ರೀ ಹರಿಸೇವೆ ಸುಳಾದಿ 

 ರಾಗ ಸಾರಂಗ 

 ಧ್ರುವತಾಳ 

ಹರಿ ಚರಿತೆ ಶ್ರವಣ ದುರಿತ ಕುಚ್ಛಾಟನಂ
ಹರಿನಾಮ ಕೀರ್ತನೆ ಭವರೋಗಕ್ಕೆ ಸಿದ್ಧೌಷಧಂ
ಹರಿ ಚರಣ ಸ್ಮರಣ ಮುಕ್ತರೊಳಗರ್ಪಣಂ
ಇಂತು ಹರಿಪಾದ ಸೇವೆ ಅನಂತ ಫಲ ಸಾಧನ
ಇಂತೆಂಬದೊಂದು ಪೇರ್ಮೆಗೆ ಹರಿಸೇವೆ ಫಲರೂಪ
ಶ್ರವಣವೆ ಶುಭದ ಬೆಳಸು ಕೀರ್ತನೆಯ ಲೇಸಿನ ಹೆಚ್ಚಿಗೆ
ಸ್ಮರಣವಚ್ಚಸುಖವೆಂಬ ತೊಟ್ಟಲು 
ಎಂಬವದನುಭವದಸಿದ್ಧಾ
 ಸಿರಿಕೃಷ್ಣನ್ನ ಪಾದಸೇವೆ ಎಲ್ಲದಿಲ್ಲ
ಪಾದಮುಕ್ತಿ ಕನ್ನಿಕೆ ಸೇರುವೆ ॥ 1 ॥

 ಮಠ್ಯತಾಳ 

ನೆನಹಿನ ಲೇಶಮಾತುರದಿಂದ ಮಹಾ
ಘನಸುಖಮಯನಾಗಿ ಇಪ್ಪೇನಾವಾಗ
ತನು ಭಾವವಳಿದು ಮೌನಿಗಳಂತೆ ಮೈಮರೆದು ಕು -
ಜನಾಚಾರವಳಿದು ಸಲೆ ನಿನ ನನವರತ
ನೆನೆವ ಭಕುತರ ಸುಖವಿನ್ನೆಂತೊ ಸಿರಿಕೃಷ್ಣ ॥ 2 ॥

 ತ್ರಿಪುಟತಾಳ 

ಪುತ್ರ ಮಿತ್ರ ಕಳತ್ರ ವರ್ಗದಿಂದ
ದೇಹ ಕರ್ಮಜ್ಞಾನೇಂದ್ರಿಯಗಳಿಂದ
ಚಿತ್ತ ಬುದ್ಧಿ ಮನೋ ಹಮ್ಮುಗಳಿಂದ
ಪ್ರಾಣದಿಂದ ತನ್ನಾತ್ಮದಿಂದ
ನೀನೆ ಪ್ರಿಯನಾಗಿಹೆ ಶ್ರೀಕೃಷ್ಣ 
ನಿನ್ನ ನೆನಹಿಗಿಂತ ಬೇರೆ ಪರಮಸುಖ ಉಂಟೆ ॥ 3 ॥

 ಅಟ್ಟತಾಳ 

ಆ ನಿನ್ನು ಧನ್ಯನಲ್ಲ ಮತ್ತೇನು ಕೊಂಡೆನು ಕೊಂ -
ಡೆನಗೆ ಆರೇನು ಕಾರಣವಯ್ಯಾ
ನಾನಾ ದುರಿತ ತನ್ನಿಂತಾನೆ ನೆನವಿಗೆ ಬಂದನಾಗಿ 
ಶ್ರೀನಾಥಾ ಸಿರಿಕೃಷ್ಣ ತಾನೆ ನೆನವಿಗೆ ಬಂದನಾಗಿ
ನಾನಾ ದುರಿತ ತನ್ನಿಂತಾನೆ ಬೆಂದುದಲ್ಲಾ ॥ 4 ॥

 ಆದಿತಾಳ 

ಮರಹೆ ಎಡರು ಮರಹೆ ಬಡತನ
ಮರಹೆ ಅವಮಾನವು ಮರಹೆ ನಷ್ಟ
ಮರಹೆ ಮೋಸ ಮರಹೆ ಹೆಮ್ಮಾರಿ
ಮರಹೆ ಅಹಂಕಾರ ಮರಹೆ ನರಕ
ಮರಹೆ ಶತ್ರು ಮರಹೆ ಮೃತ್ಯು
ಮರಿಯದೆ ನಿನ್ನ ನೆನವಂತೆ ಮಾಡೋ ಸಿರಿಕೃಷ್ಣ ॥ 5 ॥

 ಜತೆ 

 ಸಿರಿಕೃಷ್ಣ ನೆನಹಿನ ಸುಖವು ಲವಬೇ -
ಕೆಂಬವನೆ ಮುಕುತಿಯ ಸುಖವನೆಂತೇನು ॥
************