Showing posts with label ಆದಿಯುಗದಿ ಮಹ ಆದಿತೇಯನೊಬ್ಬ gurujagannatha vittala ಸುಳಾದಿ suladi. Show all posts
Showing posts with label ಆದಿಯುಗದಿ ಮಹ ಆದಿತೇಯನೊಬ್ಬ gurujagannatha vittala ಸುಳಾದಿ suladi. Show all posts

Monday 6 September 2021

ಆದಿಯುಗದಿ ಮಹ ಆದಿತೇಯನೊಬ್ಬ ankita gurujagannatha vittala ಸುಳಾದಿ suladi

 ಸುಳಾದಿ

ರಾಗ: ನಾಟ ತಾಳ: ಧ್ರುವ

ಆದಿಯುಗದಿ ಮಹ ಆದಿತೇಯನೊಬ್ಬ

ಮೇದಿನಿಯೊಳ್ ಸ್ವರ್ಣಕಶ್ಯಪು ನಾಮದಿ

ಸಾಧಿಸಿ ಬಂದವಗೊಬ್ಬ 

ಸೋದರ ಸ್ವರ್ಣಾಂಬಕನೆನಿಸಿ

ಮೇದಿನಿ ಚೋರನಾಗಿ ಹತನಾದನು

ಆದಿಶೇಷಾಂಶನು ವಿಷ್ವಕ್ಸೇನ ವಾಯುತನುಜ ತಾ-

ನಾದ ಪ್ರಹ್ಲಾದ ಮುಖ್ಯ ಪ್ರಾಣಾವೇಶದಿಂದ

ಸೋದರ ಜೀವಾಂಶ ಅಪಾನಾವಿಷ್ಟ ಸ-

ಹ್ಲಾದನಾಮಕ ಮಿತ್ರಾಹ್ವಯ ಸೂರ್ಯನಾದ ಕ-

ಹ್ಲಾದ ವ್ಯಾನಾವೇಶದಿಂದ

ಮೋದದಿ ಸೋಮಾಂಶೋದಾನಾಯುತ ಆ-

ಹ್ಲಾದ ನಾಮಕ ಸಂಭೂತನಾದ 

ಆದಿಗಣಪ ಸಮಾನಾವೇಶದಿಂದ 

ಆದರೈವರೀ ದೈತ್ಯನ ಪುತ್ರರೆನಿಸಿ

ಮೇದಿನಿ ಸುರರುದ್ಧರಿಸಲೋಸುಗ

ಆದಿದೈವ ನಾರಾಯಣನೆ ತಾ ಅ-

ನಾದಿಕಾರಣ ವಿಶ್ವಜನ್ಮಾದಿಕಾರಣ-1

ನಾದ ಸರ್ವಜ್ಞ ಸ್ವತಂತ್ರ ಸುಗುಣಪೂರ್ಣ

ವೇದಪುರುಷಾದಿ ಜಡಾದಿ2 ಜಗಕೆ

ಆಧಾರ ತಾನೊಬ್ಬ ಹರಿ ಎಂಬೊ e್ಞÁನವ

ಬೋಧಿಸಿ ಬೊಮ್ಮಮುಖರು ಹರಿ

ಪಾದಸೇವಕರೆನುತ ತಿಳಿದು

ವಾದದಿ ವಾದಿಗಳ ಜಯಸಿದರಿವರ

ಪಾದಸೇವಿಸಿ ಕರುಣಾ ಪಡೆದು

ಆದಿ ಗುರುಜಗನ್ನಾಥವಿಠಲನ್ನ

ಆದರದಲಿ ಭಜಿಸಿ ಪರಮಸುಖವನೈದ ಬೇಕು

ರಾಗ: ಕಲ್ಯಾಣಿ ತಾಳ: ಮಟ್ಟ

ಅಸುರರ ಜನ್ಮದಿ ಪುಟ್ಟಿದ ಇವರಿಗೆ

ಶ್ವಸನನ ಆವೇಶ ಸುರರಾವೇಶ ಬಲದಿ

ಅಸಮಙÁ್ಞನ ಭಕುತಿ ವಿರಾಗವು

ವಸುಧೆಯ ತಳದಿ ದಿನದಿನದಲ್ಲಿ

ಪಸರಿಪ ಸೂರ್ಯನ ಪ್ರಭೆಯಂದದಲಿ

ಮಿಸುಪದಕಿದೆ ಕಾರಣ ಉಂಟು

ಬಿಸಜಾಂಬಕ ಹರಿ ಪೇಳಿದ ಇವರಿಗೆ

ಅಸುರೇಶ ಹಿರಣ್ಯಕಶಿಪುವಿನಲ್ಲಿ

ಶಿಶುಭಾವದಿಂದ ಜನಿಸಲು ಪೋಗಿರಿ

ಪುಸಿಯಲ್ಲ ಮತ್ಪಾದ ಒಸರದೆ ನೀವು ಪ್ರಹ್ಲಾದಾ-3

ದ್ಯಸಮ ಮಹಿಮರಾಗಿ ಜನಿಸಿರೆಂದು

ಉಸುರಿದ ವಾಕ್ಯವು ಪ್ರಮಾಣ ಸಿದ್ಧವೆನ್ನಿ

ವ್ಯಸನದಲೈವರು ಹರಿಯನೆ/ಹರಿಯಿಂದಲಿ ಮತ್ತೆ

ಬೆಸಗೊಂಡರೀಪರಿ ಅಸುರನ ಪತ್ನಿಯ 

ಬಸಿರೊಳು ಪುಟ್ಟುವುದು ವಶವಲ್ಲವೊ ಸ್ವಾಮಿ

ಕುಸುಮನಾಭನೆ ನಿನ್ನ ಅಸಮಲೋಕದ ಸುಖ 

ಎಸಗದು ಎಸಗದು ವಸುಧಿಯ ತಳದಿ ಎಂದಿನಕಾಲಕ್ಕು

ಮುಸುಕುವದಙÁ್ಞನ ದುಃಖದ ಭವದಲ್ಲಿ

ಕಸವಿಸಿಗೊಳುತ ಙÁ್ಞನವನೀಗಿ

ಬಿಸನಿಲಯನೆ ನಿನ್ನ ದರುಶನವಿಲ್ಲದೆ

ಅಸು ನಿಲ್ಲುವ ಬಗೆ ಯಾವುದು ಪೇಳೊ

ಶಶಿಧರವಂದ್ಯ ಗುರುಜಗನ್ನಾಥವಿಠಲ ನಮ್ಮ

ವ್ಯಸನವನು ಕಳೆದು ಸುಖವನು ಸಲಿಸೊ

ರಾಗ: ಕಾಂಬೋಜಿ ತಾಳ: ತ್ರಿವಿಡಿ/ತ್ರಿಪುಟ

ಭಕುತವಾಕ್ಯವ ಲಾಲಿಸಿ ತಾನಾಗ

ಲಕುಮಿರಮಣನು ಈ ಪರಿ ನುಡಿದನು

ವಿಕಳ ಪೊಂದದೆ ನೀವು ತ್ವರಿತದಿ ಧರೆಯೊಳು

ಸಕಲರು ಜನಿಸಲು ಮುಸಕದಙÁ್ಞನ

ಲಕುಮಿ ಭೂಮಿಯ ಸಹಿತ ಇರುವೆನು ನಿಮ್ಮೊಳು

ವ್ಯಕುತನೆನಿಸಿ ನಿತ್ಯ ಪರಿಪರಿ ಮಹಿಮೆಯ

ಪ್ರಕಟಮಾಡುವೆ ಮುಖ್ಯಪ್ರಾಣನಿಪ್ಪನು ಸತತ

ಕಕುಲಾತಿ ಯಾಕಿನ್ನು ನಡಿರೆಂದು ಹರಿಯೆಂದ

ಉಕುತ ವಾಕ್ಯದಿಂದ ದಿತಿಜನಲ್ಲಿ

ಸುಕೃತಿಗಳೈವರು ಉದಯವೈದಿದರಾಗ

ಮುಕುತಿದಾಯಕ ಗುರುಜಗನ್ನಾಥವಿಠಲನೆಂಬ

ಭಕುತಿ ಪೂರ್ವಕ ಙÁ್ಞನವೃದ್ಧಿಯೈದಿದರು

ರಾಗ: ಆರಭಿ ತಾಳ: ಅಟ

ಪಿರಿಯ ಪ್ರಹ್ಲಾದನ್ನ ಕರೆದು ತೊಡೆಯ ಮೇಲೆ

ಇರಿಸಿ ಪ್ರೇಮದಿ ನಿಮ್ಮ ಗುರುವೇನು ಪೇಳ್ಯಾನೆ

ಮರೆಯದೆ ಎನ್ನಮುಂದೆ ಅರುಹು ಎನಲು ಬಾಲ

ಕಿರಿನಗೆ ಮುಖದಿಂದ ಹರಿಯೇ ಸರ್ವೋತ್ತಮ

ಹರಬೊಮ್ಮಮುಖರೆಲ್ಲ ಪರಿವಾರಭೂತರು

ಅರಿದಿಪ್ಪೆ ಎನ್ನಯ್ಯ ಸರಸಿಜಜಾಂಡಕ್ಕೆ

ಅರಸು ತಾನಾಗಿದ್ದು ಇರುವದೀ ಚೇತನ

ತರುವಾಯ ಜಡಮಯ ಸರ್ವಸ್ಥಳದಲ್ಲಿ

ನಿರುತದಿ ವ್ಯಾಪಿಸಿ ಇರುತಿಹ ಹರಿ ಎಂದು

ಅರಿತ ಮಾನವÀÀನಿಗೆ ದೊರೆವೋನು ನಿಶ್ಚಯ

ಅರಿಯೆಂದು ಪೇಳಿದ ತನ್ನ ತರುಳನ ನುಡಿಕೇಳಿ

ದುರುಳನು ಕ್ರೋಧದಿ ಭರದಿಂದ ಕಂಬವ 

ಕರದಿಂದ ಬಡಿಯಲು ನರಮೃಗಾಕಾರದಿ 

ಹೊರಗೆ ಬಂದು ದೈತ್ಯನುದರವ ಬಗೆದು 

ಕರುಳ (+ಮಾಲೆಯ) ತಾ ಕೊರಳೊಳು ಧರಿಸಿದ ಅನು-

ಚರಜನ ಪರಿಪಾಲ ಬಿರುದು ಬೀರಿದ ನಮ್ಮ ಗುರುಜಗನ್ನಾಥವಿಠಲ

ಶರಣರ ಮರೆಯನೋ ಧರಿತಳದೊಳಗೆ

ರಾಗ: ಇಚ್ಛಾ ತಾಳ: ಆದಿ

ಈ ತೆರ ಪ್ರಹ್ಲಾದÀ ಹರಿಪಾದವ ಭಜಿಸಿ

ಪ್ರೀತಿ(+ಯ) ಪಡೆದು ಭೂಸುರಗಣಕೆ

ಭೂತಳದೊಳಗೆ ಯತಿಗಳ ಕುಲಕೆ

ನಾಥನು ವ್ಯಾಸಮುನಿ ಎನಿಸಿ ಮರಳಿ

ಖ್ಯಾತ ಶ್ರೀ ರಾಘವೇಂದ್ರನೆಂದೆನಿಸಿ

ಪ್ರೀತಿಯಿಂದಲಿ ಭಕ್ತರ ಪೊರೆಯಲು

ನೀತಭಾವದಲಿ ಯತಿಯಾಶ್ರಮ ಪೊಂದಿ

ಸೀತಾಪತಿರಾಮ ಯದುನಾಯಕಕೃಷ್ಣ

ಭೀತಿಹರ ನರಸಿಂಹ ವ್ಯಾಸರ ಭಜಿಸಿ

ದೂತರ ಮನೋರಥ ಪೂರ್ತಿಸಿ ಪೊರೆವನು

ದಾತ ಗುರುಜಗನ್ನಾಥವಿಠಲನ್ನ

ನೀತವಿಭೂತಿಯ ಪಡೆದು ನಿರ್ಭೀತನಾಗಿಹನು

ಜತೆ

ದೂತಜನರ ಮಹಾಪಾತಕಹರನೆನ್ನಿ

ಪ್ರೀತ ಗುರುಜಗನ್ನಾಥವಿಠಲನೊಲಿವ

****


1 ಮೋದಾನಂದ ಮೂರುತಿ ಸುಗುಣ | 

ಬೋಧಪೊರ್ಣ ಸರ್ವಜ್ಞ ಸ್ವಾತಂತ್ರ; 

2 ತೃಣ ಜಡ ಚೇತನ; 3 ಪುಸಿಯಲ್ಲ ಮಚ್ಛಾಪ

| ಅಸುರಭಾವ ಪ್ರಹ್ಲಾದಾದ್ಯ| 

ರಸಮಮಹಿಮರಾಗೀ ಜನಿಸಿರೆಂದು - ಪಾಠ

ಆದಿತೇಯ=ಅದಿತಿಯ ಮಕ್ಕಳು (ದೇವತೆ), ಇಲ್ಲಿ ಜಯ;

***