Showing posts with label ಸಿರಿ ವಕ್ಷ ಕಮಲದಳಾಕ್ಷ ಕೇಶವ ಪಕ್ಷಿವರಗಮನಾ ರಕ್ಷಿಸೋ ಎನ್ನಾ gurumahipati. Show all posts
Showing posts with label ಸಿರಿ ವಕ್ಷ ಕಮಲದಳಾಕ್ಷ ಕೇಶವ ಪಕ್ಷಿವರಗಮನಾ ರಕ್ಷಿಸೋ ಎನ್ನಾ gurumahipati. Show all posts

Wednesday 1 September 2021

ಸಿರಿ ವಕ್ಷ ಕಮಲದಳಾಕ್ಷ ಕೇಶವ ಪಕ್ಷಿವರಗಮನಾ ರಕ್ಷಿಸೋ ಎನ್ನಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು


ಸಿರಿ | ವಕ್ಷ ಕಮಲದಳಾಕ್ಷ ಕೇಶವ | ಪಕ್ಷಿವರಗಮನಾ ರಕ್ಷಿಸೋ ಎನ್ನಾ ಪ 


ಭಂಗ ಬಿಡಿಸಿದ ವಂಗ ವಿಷಯಕ | ರಂಗ ತಿರುವೆಂಗಳೇಶನೆ | ಇಂಗಿತವನರಿದು | ಭವ ಭಯ | ಹಿಂಗಿಸುವ ಸಾಧು ಸಂಗವನುದಿನ | ಸಂಗಡಿಸು ಎನ್ನಗೆ 1 

ಧ್ಯಾನ ಮೌನಗಳೇನು ಅರಿಯದ | ಹೀನ ನಾನೆಂದು ಅನತಾದ ಮಾನ | ನಿನ್ನದಲೈ | ಖೂನಿಡುವ ಶೃತಿಗೇನು ಗತಿಯಮ್ಮ | ನೀನುದ್ಧರಸದೇ 2 

ನಂದ ಕಂದ ಗೋವಿಂದ ಸಚ್ಚಿದಾ | ನಂದ ಅನಿಮಿತ್ತ ಬಂಧು ಯೆಂಬುವಾ | ನೇಂದ್ರಿಯದ ನೆಲಿಗೇ || ಕುಂದ ಕೊರತೆಯಾ | ಇಂದು ಪಾಲಿಸು | ತಂದೆ ಮಹಿಪತಿ ನಂದನೊಡಿಯ ಮು | ಕುಂದ ಮುನಿವಂದ್ಯನೆ 3

***