Showing posts with label ಬಿಟ್ಟರೆ ಕೆಟ್ಟೆ ಧಿಟ್ಟಗುರು ಕೃಷ್ಣಾರ್ಯರ ಪಾದ vijayaramachandra appavara stutih. Show all posts
Showing posts with label ಬಿಟ್ಟರೆ ಕೆಟ್ಟೆ ಧಿಟ್ಟಗುರು ಕೃಷ್ಣಾರ್ಯರ ಪಾದ vijayaramachandra appavara stutih. Show all posts

Sunday, 23 May 2021

ಬಿಟ್ಟರೆ ಕೆಟ್ಟೆ ಧಿಟ್ಟಗುರು ಕೃಷ್ಣಾರ್ಯರ ಪಾದ ankita vijayaramachandra appavara stutih

ಶ್ರೀ ವಿಜಯರಾಮಚಂದ್ರವಿಠಲರ ಕೃತಿ 


ರಾಗ ಮೋಹನ      ಖಂಡಛಾಪುತಾಳ


ಬಿಟ್ಟರೆ ಕೆಟ್ಟೆ ಧಿಟ್ಟಗುರು ಕೃಷ್ಣಾರ್ಯರ ಪಾದ ॥ ಪ ॥

ಎಷ್ಟು ಜನ್ಮದ ಫಲರಾಶಿ ಕಟ್ಟಿರಿಸಿತೋ ।

ದೃಷ್ಟಿಯಿಂದಲಿ ನೋಡಿ ಧನ್ಯನಾದೆ ॥ ಅ ಪ ॥


ಕಾಶಿ ಸೇತೂ ಗಯಾ ವಾಸಮಾಡಿದ ಫಲ ಅ - ।

ಶೇಷ ಮಾಡಿರ್ಪುದ ಫಲ ॥

ಆಸೆ ಎಂಬ ಮತ್ತಗಜಕೆ ಕೇಸರಿಯಂತಿರುವ , ಹರಿ - ।

ದಾಸೋತ್ತಮನ ಸಂಗ ಬರಲು ॥ 1 ॥


ಆವ ಯೋಗಿಯೋ ಮತ್ತಾವ ಸುರೋತ್ತಮರೋ ।

ಆವನು ಬಲ್ಲರಿವರನು ॥

ಭೂವಲಯದೊಳು ಸಾವಧಾನ ಹೂಡಿದರೂ ।

ಇವರ ಪೋಲುವ ಕರುಣಿ ನಾ ಕಾಣೆ ॥ 2 ॥


ದೇಶದೇಶದಿಂದ ಬರುವ ದಾಸಥಂಡಗಳ ।

ಆಸರೆ ಹೇಳಿ ಕೇಳಿ ॥

ಕ್ಷೇಶ ಪರಿಹರಿಸಿ ಆಸೆ ಪೂರೈಸಿದ ।

ದಾಸೋತ್ತಮರಾ ಕೃಷ್ಣಾರ್ಯರಾ ॥ 3 ॥


ಕೆಟ್ಟ ಸಂಸಾರದೊಳಿದ್ದು ಕಟ್ಟಕಡೆ ಕಾಣದೆ ಕಷ್ಟ ಪಡುತಾ।

ಇಷ್ಟ ನಿನ್ನ ಪಾದ ॥

ಘಟ್ಯಾಗಿ ನಂಬಿ ಬೇಡ್ವೆ ಸುಟ್ಟು ಅವರ ಘೋರಾರಿ ।

ಇಷ್ಟರಾ ತೃಪ್ತಿಪಡಿಸುವ ಗುರುಗಳಾ ॥ 4 ॥


ಪುರುಷೋತ್ತಮರ ಉದಾರಮಹಿಮೆ ।

ನರಾಧಮ ನಾ ಪೇಳಲರಿಯೆ ॥

ಭೂಸುರರು ಕೊಂಡಾಡುವರು ನಿತ್ಯ ವರ ವಿಜಯರಾಮಚಂದ್ರ -

ವಿಠಲ ನ್ನ ಭಜಿಸುವಂತೆ ಪದಾರ್ಥಕೊಟ್ಟ ಗುರುಗಳಾ ॥ 5 ॥

***