Sunday, 23 May 2021

ಬಿಟ್ಟರೆ ಕೆಟ್ಟೆ ಧಿಟ್ಟಗುರು ಕೃಷ್ಣಾರ್ಯರ ಪಾದ ankita vijayaramachandra appavara stutih

ಶ್ರೀ ವಿಜಯರಾಮಚಂದ್ರವಿಠಲರ ಕೃತಿ 


ರಾಗ ಮೋಹನ      ಖಂಡಛಾಪುತಾಳ


ಬಿಟ್ಟರೆ ಕೆಟ್ಟೆ ಧಿಟ್ಟಗುರು ಕೃಷ್ಣಾರ್ಯರ ಪಾದ ॥ ಪ ॥

ಎಷ್ಟು ಜನ್ಮದ ಫಲರಾಶಿ ಕಟ್ಟಿರಿಸಿತೋ ।

ದೃಷ್ಟಿಯಿಂದಲಿ ನೋಡಿ ಧನ್ಯನಾದೆ ॥ ಅ ಪ ॥


ಕಾಶಿ ಸೇತೂ ಗಯಾ ವಾಸಮಾಡಿದ ಫಲ ಅ - ।

ಶೇಷ ಮಾಡಿರ್ಪುದ ಫಲ ॥

ಆಸೆ ಎಂಬ ಮತ್ತಗಜಕೆ ಕೇಸರಿಯಂತಿರುವ , ಹರಿ - ।

ದಾಸೋತ್ತಮನ ಸಂಗ ಬರಲು ॥ 1 ॥


ಆವ ಯೋಗಿಯೋ ಮತ್ತಾವ ಸುರೋತ್ತಮರೋ ।

ಆವನು ಬಲ್ಲರಿವರನು ॥

ಭೂವಲಯದೊಳು ಸಾವಧಾನ ಹೂಡಿದರೂ ।

ಇವರ ಪೋಲುವ ಕರುಣಿ ನಾ ಕಾಣೆ ॥ 2 ॥


ದೇಶದೇಶದಿಂದ ಬರುವ ದಾಸಥಂಡಗಳ ।

ಆಸರೆ ಹೇಳಿ ಕೇಳಿ ॥

ಕ್ಷೇಶ ಪರಿಹರಿಸಿ ಆಸೆ ಪೂರೈಸಿದ ।

ದಾಸೋತ್ತಮರಾ ಕೃಷ್ಣಾರ್ಯರಾ ॥ 3 ॥


ಕೆಟ್ಟ ಸಂಸಾರದೊಳಿದ್ದು ಕಟ್ಟಕಡೆ ಕಾಣದೆ ಕಷ್ಟ ಪಡುತಾ।

ಇಷ್ಟ ನಿನ್ನ ಪಾದ ॥

ಘಟ್ಯಾಗಿ ನಂಬಿ ಬೇಡ್ವೆ ಸುಟ್ಟು ಅವರ ಘೋರಾರಿ ।

ಇಷ್ಟರಾ ತೃಪ್ತಿಪಡಿಸುವ ಗುರುಗಳಾ ॥ 4 ॥


ಪುರುಷೋತ್ತಮರ ಉದಾರಮಹಿಮೆ ।

ನರಾಧಮ ನಾ ಪೇಳಲರಿಯೆ ॥

ಭೂಸುರರು ಕೊಂಡಾಡುವರು ನಿತ್ಯ ವರ ವಿಜಯರಾಮಚಂದ್ರ -

ವಿಠಲ ನ್ನ ಭಜಿಸುವಂತೆ ಪದಾರ್ಥಕೊಟ್ಟ ಗುರುಗಳಾ ॥ 5 ॥

***

 

No comments:

Post a Comment