ಶ್ರೀ ವಿಜಯರಾಮಚಂದ್ರವಿಠಲರ ಕೃತಿ
ರಾಗ ಮೋಹನ ಖಂಡಛಾಪುತಾಳ
ಬಿಟ್ಟರೆ ಕೆಟ್ಟೆ ಧಿಟ್ಟಗುರು ಕೃಷ್ಣಾರ್ಯರ ಪಾದ ॥ ಪ ॥
ಎಷ್ಟು ಜನ್ಮದ ಫಲರಾಶಿ ಕಟ್ಟಿರಿಸಿತೋ ।
ದೃಷ್ಟಿಯಿಂದಲಿ ನೋಡಿ ಧನ್ಯನಾದೆ ॥ ಅ ಪ ॥
ಕಾಶಿ ಸೇತೂ ಗಯಾ ವಾಸಮಾಡಿದ ಫಲ ಅ - ।
ಶೇಷ ಮಾಡಿರ್ಪುದ ಫಲ ॥
ಆಸೆ ಎಂಬ ಮತ್ತಗಜಕೆ ಕೇಸರಿಯಂತಿರುವ , ಹರಿ - ।
ದಾಸೋತ್ತಮನ ಸಂಗ ಬರಲು ॥ 1 ॥
ಆವ ಯೋಗಿಯೋ ಮತ್ತಾವ ಸುರೋತ್ತಮರೋ ।
ಆವನು ಬಲ್ಲರಿವರನು ॥
ಭೂವಲಯದೊಳು ಸಾವಧಾನ ಹೂಡಿದರೂ ।
ಇವರ ಪೋಲುವ ಕರುಣಿ ನಾ ಕಾಣೆ ॥ 2 ॥
ದೇಶದೇಶದಿಂದ ಬರುವ ದಾಸಥಂಡಗಳ ।
ಆಸರೆ ಹೇಳಿ ಕೇಳಿ ॥
ಕ್ಷೇಶ ಪರಿಹರಿಸಿ ಆಸೆ ಪೂರೈಸಿದ ।
ದಾಸೋತ್ತಮರಾ ಕೃಷ್ಣಾರ್ಯರಾ ॥ 3 ॥
ಕೆಟ್ಟ ಸಂಸಾರದೊಳಿದ್ದು ಕಟ್ಟಕಡೆ ಕಾಣದೆ ಕಷ್ಟ ಪಡುತಾ।
ಇಷ್ಟ ನಿನ್ನ ಪಾದ ॥
ಘಟ್ಯಾಗಿ ನಂಬಿ ಬೇಡ್ವೆ ಸುಟ್ಟು ಅವರ ಘೋರಾರಿ ।
ಇಷ್ಟರಾ ತೃಪ್ತಿಪಡಿಸುವ ಗುರುಗಳಾ ॥ 4 ॥
ಪುರುಷೋತ್ತಮರ ಉದಾರಮಹಿಮೆ ।
ನರಾಧಮ ನಾ ಪೇಳಲರಿಯೆ ॥
ಭೂಸುರರು ಕೊಂಡಾಡುವರು ನಿತ್ಯ ವರ ವಿಜಯರಾಮಚಂದ್ರ -
ವಿಠಲ ನ್ನ ಭಜಿಸುವಂತೆ ಪದಾರ್ಥಕೊಟ್ಟ ಗುರುಗಳಾ ॥ 5 ॥
***
No comments:
Post a Comment