Showing posts with label ಮಹದಾದಿದೇವ ಮಹಧರ್ಮ ವಿವರ್ಧಕ ನಮೋ venkatanatha. Show all posts
Showing posts with label ಮಹದಾದಿದೇವ ಮಹಧರ್ಮ ವಿವರ್ಧಕ ನಮೋ venkatanatha. Show all posts

Wednesday 1 September 2021

ಮಹದಾದಿದೇವ ಮಹಧರ್ಮ ವಿವರ್ಧಕ ನಮೋ ankita venkatanatha


ಆಚಾರ್ಯ ನಾಗರಾಜು ಹಾವೇರಿ ಶಬ್ದಗಳಲ್ಲಿ ಶ್ರೀ ನರಹರಿ "


ಮಹದಾದಿದೇವ ಮಹಧರ್ಮ ವಿವರ್ಧಕ ನಮೋ ।

ಮಹಾತತ್ತ್ವದಯ್ಯನೆ ನಮೋ ನಮೋ ।। ಪಲ್ಲವಿ ।।


ಮಹಾ ಕಾಲ ನಿಯಾಮಕ ।

ಮಹಾ ಮಂತ್ರರಾಜ ನಮೋ ।

ಮಹಾಮಾಯೆ ನಲ್ಲ ।

ಮಹಾ ರೋಗ ನಿವಾರಕ 

ನಮೋ ನಮೋ ।। ಚರಣ ।।


ಮಹೀಸುರರ ಪ್ರಿಯ 

ಮಂತ್ರಗಮ್ಯ ನಮೋ ।

ಮಹಾ ವಟು ಮಹಾ ದುರಿತ 

ನಿವಾರಕ ನಮೋ ನಮೋ ।। ಚರಣ ।।


ಪ್ರಹ್ಲಾದ ಬಾಹ್ಲೀಕ ವ್ಯಾಸ 

ರಾಘವೇಂದ್ರ ವರದಾ ನಮೋ ।

ಆಹ್ಲಾದದಾಯಕ ವೇಂಕಟನಾಥ 

ನಮೋ ನಮೋ ।। ಚರಣ ।।

***


ವಿವರಣೆ :

ಮಹದಾದಿದೇವ = ಶ್ರೀ ನೃಸಿಂಹದೇವರು

" ಮಹಧರ್ಮ ವಿವರ್ಧಕ "

ಶ್ರೇಷ್ಟವಾದ ಧರ್ಮವನ್ನು ವೃದ್ಧೀಕರಿಸುವವನು ( ಸರ್ವೋತ್ತಮನಾದ ಶ್ರೀ ಹರಿ )

" ಮಹತ್ತತ್ತ್ವದಯ್ಯನೆ "

ಶ್ರೀ ವಾಯುದೇವರ ಮತ್ತು ಶ್ರೀ ಚತುರ್ಮುಖ ಬ್ರಹ್ಮದೇವರ ತಂದೆಯಾದ ಶ್ರೀ ಹರಿ

" ಮಹಾ ಕಾಲ ನಿಯಾಮಕ "

ಪ್ರಳಯ - ಸೃಷ್ಟ್ಯಾದಿ ಮಹಾ ಕಾಲಗಳಿಗೆ ನಿಯಾಮಕನು ( ಶ್ರೀಹರಿ )

" ಮಹಾ ಮಂತ್ರರಾಜ "

ಅಷ್ಟಾಕ್ಷರ ಮೊದಲಾದ ಶ್ರೇಷ್ಠ ಮಂತ್ರಗಳ ಸ್ವರೂಪಿ ಶ್ರೀಮನ್ನಾರಾಯಣ

ಮಹಾಮಾಯೆ = ಶ್ರೀ ಮಹಾಲಕ್ಷ್ಮೀಯರು

ಮಹೀಸುರರು = ಬ್ರಾಹ್ಮಣರು

" ಮಂತ್ರಗಮ್ಯ "

ತಂತ್ರಸಾರ ಮತ್ತು ಪುರಾಣಗಳಲ್ಲಿ ಬಂದ 74 ಪರಮ ಶ್ರೇಷ್ಠ ಮಂತ್ರಗಳಿಗೆ ದೊರಕುವವನೂ - ಮಹಾ ಮಹಾತ್ಮರ ರಹಸ್ಯವೋಪದೇಶಗಳಿಂದ ತಿಳಿಯಲ್ಪಡತಕ್ಕವನೂ ಶ್ರೀ ಹರಿ!

ಮಹಾವಟು = ಶ್ರೀ ವಾಮನ ರೂಪಿ ಶ್ರೀಮನ್ನಾರಾಯಣ

" ಶ್ರೀ ಪ್ರಹ್ಲಾದರಾಜರ ಸಂದೇಶ "

ಪ್ರ = ಪ್ರಕೃಷ್ಟವಾದ

ಹ್ಲಾದ = ಸಂತೋಷ

ಶ್ರೀ ಪ್ರಹ್ಲಾದಾರಾಜರ ಅವತಾರಿಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಪಾದ ಪದ್ಮಗಳನ್ನು ಗಟ್ಟಿಯಾಗಿ ಯಾರು ಹಿಡಿಯುತ್ತಾರೋ ಅಂಥಾ ಶ್ರೀ ರಾಯರ ನಿಜ ಭಕ್ತನಿಗೆ ಶ್ರೀ ಹರಿಯು ಪರಮ ಪ್ರಕೃಷ್ಟವಾದ, ನಿತ್ಯ ಸುಖವಾದ " ಮೋಕ್ಷ ಸುಖ " ವನ್ನು ಕರುಣಿಸುತ್ತಾನೆ!!!

***