Showing posts with label ಭಕ್ತಿ ಎಂಬ ಕಾಣಿಕೆ ಸಲ್ಲಿಸಿ ಕ್ಷೇತ್ರಮಂತ್ರಾಲಯ ರಾಯರಿಗೆ pandarinatha vittala. Show all posts
Showing posts with label ಭಕ್ತಿ ಎಂಬ ಕಾಣಿಕೆ ಸಲ್ಲಿಸಿ ಕ್ಷೇತ್ರಮಂತ್ರಾಲಯ ರಾಯರಿಗೆ pandarinatha vittala. Show all posts

Monday 6 September 2021

ಭಕ್ತಿ ಎಂಬ ಕಾಣಿಕೆ ಸಲ್ಲಿಸಿ ಕ್ಷೇತ್ರಮಂತ್ರಾಲಯ ರಾಯರಿಗೆ ankita pandarinatha vittala

  ankita ಪಂಡರೀನಾಥವಿಠಲ

ರಾಗ: [ಆರಭಿ] ತಾಳ: [ಆದಿ]


ಭಕ್ತಿ ಎಂಬ ಕಾಣಿಕೆ ಸಲ್ಲಿಸಿ ಕ್ಷೇತ್ರಮಂತ್ರಾಲಯ ರಾಯರಿಗೆ


ಚಿತ್ತಜನಯ್ಯನ ಭಕ್ತೋತ್ತಮರಿಗೆ ಅತ್ಯಂತ ಪ್ರೀತಿಲಿ ಪೊರೆಯುವಗೆ ಅ.ಪ


ಖ್ಯಾತ ಪ್ರಹ್ಲಾದನು ತಾನಾಗಿ ಪಿತನಿತ್ತ ಅತ್ಯಂತ ಕಷ್ಟವ ಸಹಿಸಿದಗೆ

ಬತ್ತದೆ ಬಾಗದೆ ಹರಿಸರ್ವೋತ್ತಮ ತತ್ತ್ವವ ಸ್ಥಾಪಿಸಿ ಮೆರೆದವಗೆ 1

ಶೇಷಾವೇಶಿತರಾದ ಶ್ರೀವ್ಯಾಸರಾಯರಪದತಲಕೆ

ಶ್ರೀಶಶ್ರೀಕೃಷ್ಣನ ಚರಣಾಬ್ಜಭೃಂಗಗೆ ಆಶೆಲಿ ಸುಜನರ ಪೋಷಿಪಗೆ 2

ಕಾಶಿಯಲಿಪ್ಪನ ಗುರುಗಳ ಹಂಪೆಲಿ ಸೂಸಿ ಪ್ರತಿಷ್ಠಿಸಿ ಮೆರೆದವಗೆ

ರಾಶಿದೋಷವ ಭಸ್ಮವಮಾಡ್ವಶೇಷಶಕ್ತ ಸದ್ಭಕ್ತರಿಗೆ 3

ಕೂಗಿದಾಕ್ಷಣದಲ್ಲೆ ಆಗಮಿಸುವ ಗುರು ರಾಘವೇಂದ್ರರೆಂಬ ದಾಸರಿಗೆ

ಬಾಗಿ ತಾ ವಿನಯದಿ ನಮನವ ಮಾಡಲು ಬೇಗನೆ ಭವಗಳ ಕಳೆಯುವಗೆ 4

ರಾಮ ಕೃಷ್ಣ ನರಹರಿ ಪಂಢರೀನಾಥವಿಠಲ ದಾಸರಿಗೆ

ಕಾಮಿತಗಳನೀವ ಕಾಮಧೇನುವಿಗೆ ಕಡುಕಾರುಣ್ಯ ದಯಾನಿಧಿಗೆ 5

***