Monday 6 September 2021

ಭಕ್ತಿ ಎಂಬ ಕಾಣಿಕೆ ಸಲ್ಲಿಸಿ ಕ್ಷೇತ್ರಮಂತ್ರಾಲಯ ರಾಯರಿಗೆ ankita pandarinatha vittala

  ankita ಪಂಡರೀನಾಥವಿಠಲ

ರಾಗ: [ಆರಭಿ] ತಾಳ: [ಆದಿ]


ಭಕ್ತಿ ಎಂಬ ಕಾಣಿಕೆ ಸಲ್ಲಿಸಿ ಕ್ಷೇತ್ರಮಂತ್ರಾಲಯ ರಾಯರಿಗೆ


ಚಿತ್ತಜನಯ್ಯನ ಭಕ್ತೋತ್ತಮರಿಗೆ ಅತ್ಯಂತ ಪ್ರೀತಿಲಿ ಪೊರೆಯುವಗೆ ಅ.ಪ


ಖ್ಯಾತ ಪ್ರಹ್ಲಾದನು ತಾನಾಗಿ ಪಿತನಿತ್ತ ಅತ್ಯಂತ ಕಷ್ಟವ ಸಹಿಸಿದಗೆ

ಬತ್ತದೆ ಬಾಗದೆ ಹರಿಸರ್ವೋತ್ತಮ ತತ್ತ್ವವ ಸ್ಥಾಪಿಸಿ ಮೆರೆದವಗೆ 1

ಶೇಷಾವೇಶಿತರಾದ ಶ್ರೀವ್ಯಾಸರಾಯರಪದತಲಕೆ

ಶ್ರೀಶಶ್ರೀಕೃಷ್ಣನ ಚರಣಾಬ್ಜಭೃಂಗಗೆ ಆಶೆಲಿ ಸುಜನರ ಪೋಷಿಪಗೆ 2

ಕಾಶಿಯಲಿಪ್ಪನ ಗುರುಗಳ ಹಂಪೆಲಿ ಸೂಸಿ ಪ್ರತಿಷ್ಠಿಸಿ ಮೆರೆದವಗೆ

ರಾಶಿದೋಷವ ಭಸ್ಮವಮಾಡ್ವಶೇಷಶಕ್ತ ಸದ್ಭಕ್ತರಿಗೆ 3

ಕೂಗಿದಾಕ್ಷಣದಲ್ಲೆ ಆಗಮಿಸುವ ಗುರು ರಾಘವೇಂದ್ರರೆಂಬ ದಾಸರಿಗೆ

ಬಾಗಿ ತಾ ವಿನಯದಿ ನಮನವ ಮಾಡಲು ಬೇಗನೆ ಭವಗಳ ಕಳೆಯುವಗೆ 4

ರಾಮ ಕೃಷ್ಣ ನರಹರಿ ಪಂಢರೀನಾಥವಿಠಲ ದಾಸರಿಗೆ

ಕಾಮಿತಗಳನೀವ ಕಾಮಧೇನುವಿಗೆ ಕಡುಕಾರುಣ್ಯ ದಯಾನಿಧಿಗೆ 5

***


No comments:

Post a Comment