Showing posts with label ಅರಿತವರನು ಕಾಣೇ ಕೃಷ್ಣಾ ನಿನ್ನ ಅರಿತವರನು shyamasundara ARITAVARANU KAANE KRISHNA NINNA ARITAVARANU ಮುಂಡಿಗೆ MUNDIGE. Show all posts
Showing posts with label ಅರಿತವರನು ಕಾಣೇ ಕೃಷ್ಣಾ ನಿನ್ನ ಅರಿತವರನು shyamasundara ARITAVARANU KAANE KRISHNA NINNA ARITAVARANU ಮುಂಡಿಗೆ MUNDIGE. Show all posts

Saturday, 28 December 2019

ಅರಿತವರನು ಕಾಣೇ ಕೃಷ್ಣಾ ನಿನ್ನ ಅರಿತವರನು ankita shyamasundara ARITAVARANU KAANE KRISHNA NINNA ARITAVARANU ಮುಂಡಿಗೆ MUNDIGE



RESTART MOBILE IF AUDIO IS NOT PLAYING  
CLICK-> HOME

or just scroll down for other devaranama 

ಅರಿತವರನು ಕಾಣೇ ಕೃಷ್ಣಾ ನಿನ್ನ ಅರಿತವರನು ಕಾಣೇ

ಅರವಿದೂರನೆ ತವ ಮಹಿಮೆಯು ಘನ್ನ

ಬಂಡೀಕಾಲನು ಪಿಡದೇಯಂತೆ 
ಹತ್ತುಬಂಡಿರಾಯಗೆ ಸುತನೀನಾದೆಯಂತೆ
ಬಂಡಿ ಅಸುರನ ಕೊಂದೆಯಂತೆ 
ದುರದಿ ಬಂಡಿ ನಡಿಸಿ ನರನ ಸಲಹಿದೆಯಂತೆ ....

ತಂದೆ ತಂದೆಗೆ ತಂದೇಯಂತೆ 
ಜಗದತಂದೆ ನಿನಗೆ ತಾಯ್ತಂದೆಗಳಂತೆ
ತಂದೆ ವಿಪ್ರಜನ ನೀನಂತೆ 
ಸ್ವಾಮಿ ತಂದೆ ನೃಪಾಲನ ಸುತಗೀಸೆನಂತೇ

ಸಿಂಧೂರ ದ್ವಯ ವರದನಂತೆ 
ಮಧ್ಯಸಿಂಧೂರ ವದನವು ನಿನಗಿಹುವಂತೆ
ಸಿಂಧುಮಂದಿರ ನೀಯಂತೆ 
ಶ್ಯಾಮಸುಂದರವಿಠಲ ನಿನಗೆ ಭಕ್ತರ ಚಿಂತೆ
***

Pallavi
Arithavaranu kāṇē kṛṣṇā ninna arithavaranu kāṇē

Anupallavi
Aravidūrane tava mahimeyu ghanna

Charana 1
Baṇḍīkālanu piḍadēyante
Hattubaṇḍirāyage sutanīnādeyante
Baṇḍi asurana kondeyante
Duradi baṇḍi naḍisi narana salahideyante

Charana 2
Tande tandege tandēyante
Jagadatande ninage tāytandegaḷante
Tande viprajana nīnante
Svāmi tande nṛpālana sutagīsenantē

Charana 3
Sindhūra dvaya varadanante
Madhyasindhūra vadanavu ninagihuvante
Sindhumandira nīyante
Śyāmasundaraviṭhala ninage bhaktara cinte
***

Pronunciation Guide
Vowels: ā, ē, ī are long vowel sounds (e.g., kāṇē sounds like kaa-nay).

Retroflexes: ṇ, ḍ, ṭ, l require curling the tongue to touch the roof of the mouth (e.g., baṇḍi or salahide).

Aspirated/Soft: th and dh are dental sounds (tongue against the teeth); ś is a soft "sh" as in sugar.

Rhythm: Emphasize the double consonants like ṇḍ in baṇḍi or nn in ghanna to maintain the traditional poetic meter.
***

ಈ ಸುಂದರವಾದ ದೇವರನಾಮವನ್ನು ಶ್ರೀ ಶ್ಯಾಮಸುಂದರ ವಿಠಲರು ರಚಿಸಿದ್ದಾರೆ. ಇದರಲ್ಲಿ ಭಗವಂತನ ವಿರೋಧಾಭಾಸದಂತೆ ತೋರುವ ಲೀಲೆಗಳನ್ನು ವರ್ಣಿಸುತ್ತಾ, "ನಿನ್ನನ್ನು ಪೂರ್ಣವಾಗಿ ಅರಿತುಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ" ಎಂಬ ಪರಮ ಸತ್ಯವನ್ನು ದಾಸರು ಇಲ್ಲಿ ಪ್ರಸ್ತುತಪಡಿಸಿದ್ದಾರೆ.

ಸಾರಾಂಶ (Summary)
ಶ್ರೀಕೃಷ್ಣನ ಲೀಲೆಗಳು ತರ್ಕಕ್ಕೆ ನಿಲುಕದವು. ದಾಸರು ಇಲ್ಲಿ ಕೃಷ್ಣನ ಜೀವನದ ವೈವಿಧ್ಯಮಯ ಘಟನೆಗಳನ್ನು ಒಂದಕ್ಕೊಂದು ಹೋಲಿಸಿ ವರ್ಣಿಸುತ್ತಾರೆ. ಒಂದೆಡೆ ಅವನು ಜಗತ್ತಿಗೇ ತಂದೆ, ಆದರೆ ಮತ್ತೊಂದೆಡೆ ಅವನಿಗೆ ತಂದೆ-ತಾಯಿಗಳಿದ್ದಾರೆ! ಅವನು ಪರ್ವತಗಳನ್ನೇ ಎತ್ತುವವನು, ಆದರೆ ಸುಮ್ಮನೆ ಮಲಗಿದ್ದಾಗ ಶಕಟಾಸುರನ ಗಾಲಿಯನ್ನು ಒದ್ದವನು. ಇಂತಹ ಅಚ್ಚರಿಗಳ ಮೂರ್ತಿಯಾದ ನಿನ್ನನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ ಎಂದು ಕವಿ ಭಕ್ತಿಯಿಂದ ಹಾಡಿದ್ದಾರೆ.

ಭಾವಾರ್ಥ (Meaning Parawise)
ಪಲ್ಲವಿ ಹಾಗೂ ಅನುಪಲ್ಲವಿ:

ಅರಿತವರನು ಕಾಣೇ ಕೃಷ್ಣಾ ನಿನ್ನ ಅರಿತವರನು ಕಾಣೇ
ಅರವಿದೂರನೆ ತವ ಮಹಿಮೆಯು ಘನ್ನ
ಅರ್ಥ: ಕೃಷ್ಣಾ, ನಿನ್ನ ಅತಿಶಯವಾದ ಮಹಿಮೆಯನ್ನು ಪೂರ್ಣವಾಗಿ ತಿಳಿದವರು ಯಾರೂ ಇಲ್ಲ. ಶತ್ರುಗಳಿಂದ ದೂರವಿರುವವನೇ (ಅರವಿದೂರ), ನಿನ್ನ ಶಕ್ತಿಯು ಬಹಳ ದೊಡ್ಡದು (ಘನ್ನ).

ಚರಣ ೧:

ಬಂಡೀಕಾಲನು ಪಿಡದೇಯಂತೆ ಹತ್ತುಬಂಡಿರಾಯಗೆ ಸುತನೀನಾದೆಯಂತೆ...
ಅರ್ಥ: ನೀನು ಶಿಶುವಾಗಿದ್ದಾಗ ಮಲಗಿದ್ದಲ್ಲೇ ಕಾಲು ಬಡಿದು ಬಂಡಿಯ ರೂಪದಲ್ಲಿ ಬಂದ ಶಕಟಾಸುರನನ್ನು ಕೊಂದೆ. ಹತ್ತು ರಥಗಳ ಒಡೆಯನಾದ ದಶರಥ ಮಹಾರಾಜನಿಗೆ (ಹತ್ತುಬಂಡಿರಾಯ) ಮಗನಾಗಿ (ರಾಮನಾಗಿ) ಹುಟ್ಟಿದೆ. ಮಹಾಭಾರತದ ಯುದ್ಧದಲ್ಲಿ ಅರ್ಜುನನಿಗಾಗಿ ಬಂಡಿಯನ್ನು (ರಥ) ನಡೆಸಿ ಅವನನ್ನು ಕಾಪಾಡಿದೆ. ಈ ಎಲ್ಲಾ ವಿರೋಧಾಭಾಸದ ಲೀಲೆಗಳನ್ನು ತಿಳಿಯುವುದು ಹೇಗೆ?

ಚರಣ ೨:

ತಂದೆ ತಂದೆಗೆ ತಂದೇಯಂತೆ ಜಗದತಂದೆ ನಿನಗೆ ತಾಯ್ತಂದೆಗಳಂತೆ...
ಅರ್ಥ: ನೀನು ಬ್ರಹ್ಮನ ತಂದೆ (ಜಗತ್ತಿಗೆ ತಂದೆ), ಆದರೆ ನಿನಗೇ ತಂದೆ-ತಾಯಿಗಳಿದ್ದಾರೆ (ವಸುದೇವ-ದೇವಕಿ/ನಂದ-ಯಶೋದೆಯರು). ನೀನೇ ಬ್ರಾಹ್ಮಣೋತ್ತಮನಾಗಿ (ವಾಮನನಾಗಿ) ಬಂದೆ. ಧ್ರುವರಾಜನಂತಹ (ನೃಪಾಲನ ಸುತ) ಭಕ್ತರಿಗೆ ತಂದೆಯಂತೆ ಪ್ರೀತಿ ನೀಡಿ ಸಲಹಿದೆ. ಇಂತಹ ನಿನ್ನ ಗುಣಗಳು ಆಶ್ಚರ್ಯಕರ.

ಚರಣ ೩:

ಸಿಂಧೂರ ದ್ವಯ ವರದನಂತೆ ಮಧ್ಯಸಿಂಧೂರ ವದನವು ನಿನಗಿಹುವಂತೆ...
ಅರ್ಥ: ನೀನು ಆನೆಗೆ (ಗಜೇಂದ್ರನಿಗೆ) ವರವನ್ನು ನೀಡಿದವನು. ನಿನ್ನ ಹೊಟ್ಟೆಯೊಳಗೆ ಸಮುದ್ರವೇ (ಸಿಂಧು) ಮನೆ ಮಾಡಿಕೊಂಡಿದೆ. ಶ್ಯಾಮಸುಂದರ ವಿಠಲನೇ, ನೀನು ಯಾವಾಗಲೂ ನಿನ್ನ ಭಕ್ತರ ಬಗ್ಗೆಯೇ ಚಿಂತಿಸುವವನು ಮತ್ತು ಅವರನ್ನು ಕಾಯುವವನು. ನಿನ್ನ ಈ ಅಪಾರ ಕರುಣೆಯನ್ನು ಅರಿಯುವವರು ಯಾರೂ ಇಲ್ಲ.
***

This soulful Devaranama was composed by Sri Shyamasundara Vitthala. Through this song, the poet presents the profound truth that the Lord's divine plays (Leelas) are so full of contradictions and wonders that no one can ever fully comprehend Him.

Summary
The song explores the inexplicable nature of Lord Krishna. The poet juxtaposes different events from the Lord's incarnations: He is the Father of the Universe, yet He has earthly parents; He is the slayer of mighty demons, yet He acts as a simple charioteer. By highlighting these divine paradoxes, the poet expresses that the Lord is beyond human logic and can only be reached through pure devotion.

Verse-by-Verse Meaning
Pallavi & Anupallavi

"O Krishna, I see no one who has truly understood You. Your glory is magnificent and far beyond the reach of enemies."
Meaning: The poet humbles himself before the Lord, stating that Krishna's greatness (Mahima) is so vast (Ghanna) that even the most learned cannot claim to know Him completely.

Charana 1

"They say You killed the cart-demon (Shakatasura) simply by kicking Your feet while lying down. They say You became the son of the King of Ten Chariots (Dasharatha). And in the great war, You drove the chariot to protect Arjuna (Nara)."
Meaning: The poet marvels at the contrast in His power. As an infant, He effortlessly destroyed a demon; as Rama, He was the son of a great king; and as Krishna, He humbled Himself to be a charioteer to save His devotee. How can one understand such a versatile God?

Charana 2

"You are the Father to the one who is the Father of all (Brahma), yet You have parents of Your own. You appeared as a learned Brahmin (Vamana), and You cared for the son of the King (Dhruva) like a loving father."
Meaning: Although He is the primordial creator of the entire universe, He submitted Himself to the love of earthly parents. He took the form of a small Brahmin boy to humble pride and acted as a protective father figure to His child-devotee, Dhruva.

Charana 3

"You are the one who granted boons to the elephant (Gajendra). It is said the entire ocean resides within You. O Shyamasundara Vitthala, You are always concerned about the welfare of Your devotees."
Meaning: The poet refers to the Gajendra Moksha where the Lord saved the elephant king. He notes the irony that the "Ocean of Mercy" who contains the universe within His belly is always occupied with a very "human" worry—the well-being of those who love Him. No one can truly know the depth of such compassion.
***


ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ

ಶ್ರೀ ಶ್ಯಾಮಸುಂದರ ದಾಸರ ಮುಂಡಿಗೆಯ ಅರ್ಥಾನುಸಂಧಾನ 

ಆರಾಧನಾ ಸೇವಾ ಕುಸುಮ

ಅರ್ಥ

👇🏽👇🏽👇🏽👇🏽

ಹೇ ಶ್ರೀ ಕೃಷ್ಣ  ಪರಮಾತ್ಮನೇ  ನಿನ್ನನ್ನು ನಿನ್ನ ಮಹಿಮೆಗಳನ್ನು ಅರಿಯಲು ನಿನ್ನ ವಕ್ಷಸ್ಥಲ ನಿವಾಸಿನಿ ಆದ ಆ ಮಾಯಾದೇವಿಗೇ ತರವಿಲ್ಲ...
ನೀನು ಗುಣಪರಿಪೂರ್ಣಮಾತ್ರವೇ ಅಲ್ಲ ಅರವಿದೂರನೂ ಸರಿ... ಅಂದರೇ ನಿರ್ದೋಷನಾಗಿರುವೆ. ಇಂತಹಾ ನಿನ್ನ ಮಹಿಮೆಯು ಘನವಾಗಿದೆ ಅಂದರೆ ತಿಳಿಯಲು ಯಾರಿಂದಲೂ ಸಾಧ್ಯವಿಲ್ಲ ಸ್ವಾಮೀ ....

ಬಂಡಿಕಾಲನು ಪಿಡಿದೆಯಂತೆ
ರಥದ ಚಕ್ರವನ್ನು ಶ್ರೀಕೃಷ್ಣನು ಭೀಷ್ಮಾಚಾರ್ಯರಿಗೋಸ್ಕರ ಹಿಡಿದಿದ್ದಾನೆ . ಇದನ್ನು ಎರಡು ಸಲ ಹಿಡಿದು ಭಕ್ತವತ್ಸಲನೆಂಬ ಬಿರುದನ್ನು ಸಾರ್ಥಕಪಡಿಸಿಕೊಂಡಿದ್ದಾನೆ. ಅರ್ಜುನನು ಬಂಧುವಾತ್ಸಲ್ಯದಿಂದ ಸರಿಯಾಗಿ ಯುದ್ಧಮಾಡದಿರುವಾಗ , ಭೀಷ್ಮಾಚಾರ್ಯರು ತಾವು ಪ್ರತಿಜ್ಞೆ ಮಾಡಿದಂತೆ ಹತ್ತುಸಾವಿರ ಪಾಂಡವರ ಸೈನಿಕರನ್ನು ಕೊಲ್ಲುತ್ತಿರುವಾಗ ಅವರನ್ನು ಕೊಲ್ಲಲಿ ಎಂಬಂತೆ  ಚಕ್ರವನ್ನು ಧರಿಸಿದ ಆ ಶ್ರೀ ಕೃಷ್ಣ ಪರಮಾತ್ಮನು....

ಹತ್ತು ಬಂಡಿರಾಯಗೆ ಸುತ ನೀನಾದೆಯಂತೆ ಹತ್ತು ಬಂಡಿರಾಯ ಅಂದರೆ ದಶರಥ ಮಹಾರಾಜ,  ದಶರಥನ ಮಗನಾಗಿ ಶ್ರೀರಾಮನಾಗಿ ಅವತರಿಸಿರಿದೆ ಸ್ವಾಮೀ ...

ಬಂಡಿ ಅಸುರನ ಕೊಂದೆಯಂತೆ ಬಂಡಿ ಅಸುರ ಎಂದರೆ ಶಕಟಾಸುರ. ಇವನು ಶ್ರೀಕೃಷ್ಣನನ್ನು ಕೊಲ್ಲಬೇಕೆಂದು  ಬಂದ ಕಂಸನ ಭೃತ್ಯ.... ಅವನನ್ನು ಎಡಗಾಲಿನ ಹೊಡೆತದಿಂದ ಕೊಂದು ಹಾಕಿದೆ ಶ್ರೀ ಕೃಷ್ಣ. ...

ದುರದಿ ಬಂಡಿ ನಡೆಸಿ ನರನ ಸಲಹಿದೆಯಂತೆ ಕೌರವ-ಪಾಂಡವರ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಅರ್ಜುನನ ಮೇಲೆ ಬೀಳಬಹುದಾದ ಭಗದತ್ತನ ವೈಷ್ಣವಾಸ್ತ್ರ , ಕರ್ಣನ ಸರ್ಪಾಸ್ತ್ರ  ಮೊದಲಾದ ಅಸ್ತ್ರಗಳಿಂದ ರಕ್ಷಿಸಿದ ಶ್ರೀ ಕೃಷ್ಣ ಪರಮಾತ್ಮ ....

ಜಗದ ತಂದೆ ನಿನಗೆ ತಾಯಿ ತಂದೆಗಳಂತೆ ಜಗತ್ತಿಗೆ ತಂದೆಯಾದ ಜಗನ್ನಾಥ ನೀನು. ನಿನಗೆ ವಸುದೇವ-ದೇವಕಿ , ದಶರಥ-ಕೌಸಲ್ಯಾ , ಜಮದಗ್ನಿ-ರೇಣುಕಾ, ಇವರು ನಿನಗೆ ತಂದೆ-ತಾಯಿಗಳಂತೆ ! ಇದು ಅವರ ತಪಸ್ಸಿಗೆ ಮೆಚ್ಚಿ ಮಗನಾದೆ ಅಷ್ಟೇ ಬಿಟ್ಟರೇ  ನಿನಗೆ ಗರ್ಭವಾಸಾದಿ ದುಃಖಗಳಿಲ್ಲ ಎಂದರ್ಥ....

ತಂದೆ ತಂದೆಗೆ ನೀ ತಂದೆಯಂತೆ ತಂದೆ-ಶ್ರೀಕೃಷ್ಣನ ತಂದೆಯಾದ ವಸುದೇವನು ಕಶ್ಯಪನ ಅವತಾರ. ಇವನ ತಂದೆಯಾದ ಮರೀಚಿಗೂ ತಂದೆಯನಿಸಿದವನು ಚತುರ್ಮುಖ ಬ್ರಹ್ಮದೇವರು , ಈ ಚತುರ್ಮುಖ ಬ್ರಹ್ಮದೇವರಿಗೂ ನೀನು ತಂದೆ ಆದೆ ಪರಮಾತ್ಮ ಅಂತ ಅರ್ಥ.....

ತಂದೆ ವಿಪ್ರಜರ ನೀನಂತೆ ಬ್ರಾಹ್ಮಣನ ಮಕ್ಕಳನ್ನು ನಾನು ರಕ್ಷಿಸುವೆ ಎಂದು  ಅರ್ಜುನ  ಪ್ರತಿಜ್ಞೆ ಮಾಡಿದ್ದನು . ಆದರೂ ಮಕ್ಕಳು ಮಾಯವಾದಾಗ ಭಗವಂತನಾದ ಶ್ರೀಕೃಷ್ಣನೇ ಆ ವಿಪ್ರನ ಮಕ್ಕಳನ್ನು ತಂದುಕೊಟ್ಟು ಅರ್ಜುನನು ಬೆಂಕಿಯಲ್ಲಿ ಹಾರದಂತೆ ರಕ್ಷಿಸಿದನು . ( ಇಲ್ಲಿ ತಂದೆ ಎನ್ನುವುದನ್ನು ಕ್ರಿಯಾಪದವಾಗಿ ಬಳಸಿದ್ದಾರೆ ಅಂದರೆ ತೆಗೆದುಕೊಂಡು ಬರುವದು ಅಂತ ಅರ್ಥ)

ತಂದೆ ನೃಪಾಲನ ಸುತೆಗೀಶನಂತೆ ತಂದೆ ನೃಪಾಲ ಎಂದರೆ ಜನಕ ಮಹಾರಾಜರು, ಆ ಜನಕಮಹಾರಾಜರ ಮಗಳು ಸೀತಾದೇವಿಯರು, ಈ ಸೀತಾದೇವಿಯನ್ನು  ಮಂದಜನರ ದೃಷ್ಟಿಯಲ್ಲಿ ವಿವಾಹವಾದನು ಯಾಕೆಂದರೆ ಲಕ್ಷ್ಮೀನಾರಾಯಣರು ಅನಾದಿ ದಂಪತಿಗಳು. ಆದರೆ ಆಯಾ ಅವತಾರಗಳಲ್ಲಿ ಲಕ್ಷ್ಮೀ ದೇವಿಯರನ್ನ ವಿವಾಹ ಮಾಡಿಕೊಳ್ಳುವುದು ಅವರ ಲೇಲೆಯೂ ಹೌದು..  ಹೀಗಾಗಿ  ಜನಕನ ಮಗಳಾದ ಸೀತಾದೇವಿಗೆ ಈಶನಾದ ಶ್ರೀರಾಮ ಅಂತ ಅರ್ಥ .....

 ಸಿಂಧೂರ ವದನವು ನಿನಗಿಹುದಂತೆ ಸಿಂಧೂರ ಎಂದರೆ ಹಿಂದೆ ಹೇಳಿದಂತೆ ಆನೆ‌ . ವದನ ಎಂದರೆ ಮುಖ. ಗಣಪತಿಯು ಹತ್ತೊಂಬತ್ತು ಮುಖಗಳಿರುವ ವಿಶ್ವ ನಾಮಕ ಭಗವಂತನ ಉಪಾಸಕನೆಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಆ ಹತ್ತೊಂಬತ್ತು ಮುಖಗಳಲ್ಲಿ ಮಧ್ಯದ ಮುಖವು ಆನೆಯಂತೆ ಮುಖ ಹೊಂದಿದೆ ‌ . ಇದನ್ನೇ ವಿಶ್ವಂಭರ ಎನ್ನಲಾಗಿದೆ. ಇಂತಹ ಗಜಮುಖವು ನಿನಗೆ ಇದೆ....

 ಸಿಂಧೂರದ್ವಯ ವರದನಂತೆ ಸಿಂಧೂರ ಎಂದರೆ ಆನೆ . ಗಜೇಂದ್ರ ಮೋಕ್ಷದಲ್ಲಿ ಶಾಪದಿಂದ ಆನೆಯಾಗಿ ಹುಟ್ಟಿದ ಇಂದ್ರದ್ಯುಮ್ನ ರಾಜನನ್ನು ಮೊಸಳೆಯಿಂದ ರಕ್ಷಿಸಿದನು . ಇದು ಒಂದು ಬಾರಿ ಆನೆಯ ರಕ್ಷಣೆಯಾದರೆ . ಇನ್ನೊಂದು ಸಲ ಶ್ರೀನಿವಾಸ ಕಲ್ಯಾಣದಲ್ಲಿ ವೆಂಕಪ್ಪ  ಬೇಟೆಗೆ ಹೋದಾಗ ಕಾಡಿನಲ್ಲಿ ಮದೋನ್ಮತ್ತವಾದ ಆನೆ ಬಂದಾಗ ಅದನ್ನು ಬೆನ್ನಟ್ಟಿದ ವೆಂಕಪ್ಪನನ್ನ  ಕಂಡು ಆ ಆನೆಯು ಶರಣಾಗತವಾದಾಗ ಅದನ್ನೂ ರಕ್ಷಿಸಿದನು. ಹೀಗೆ ಎರಡು ಬಾರಿ ಸಿಂಧೂರದ್ವಯಗಳನ್ನು ರಕ್ಷಿಸಿರುವನು.

 ಸಿಂಧುಮಂದಿರ ನೀನಂತೆ ಸಿಂಧು ಎಂದರೆ ಸಮುದ್ರ . ಸಮುದ್ರವೇ ಅಂದರೆ ಕ್ಷೀರಸಾಗರವನ್ನೇ  ಮಂದಿರವನ್ನಾಗಿ ಮಾಡಿಕೊಂಡವನು ನೀನು ಸ್ವಾಮಿ.. .

ಶ್ಯಾಮಸುಂದರವಿಠಲಾ ನಿನಗೆ ಭಕ್ತರ ಚಿಂತೆ ಶ್ಯಾಮಸುಂದರನಾದ ಹೇ ಶ್ರೀಕೃಷ್ಣ ಪರಮಾತ್ಮನೇ... ನಿನಗೆ ಎಂದೆಂದಿಗೂ ನಿನ್ನ ಭಕ್ತರ ಚಿಂತೆ , ಇಲ್ಲಿ ಚಿಂತೆ ಅಂದರೆ ಅವರನ್ನು ರಕ್ಷಿಸುವ ಹೊಣೆ ಹೊತ್ತವನು ಅಂತ ಅರ್ಥ ಬರುತ್ತೆ.. ಹಾಗಂತ  ನಮ್ಮ ಹಾಗೆ ಚಿಂತೆ ಅಂತ ಅರ್ಥ ಅಲ್ಲಾ. ಹೀಗಾಗಿ... ಭಕ್ತಪರಾಧೀನ ನಾದ ಪರಮಾತ್ಮನಿಗೆ ಸದಾ ಭಕ್ತರ ಹೊಣೆ ಇರ್ತದೆ ಎಂದರ್ಥ. ಅದಕ್ಕೆ ನೇ ಶ್ರೀ ವಿಜಯದಾಸಾರ್ಯರು ಭಕುತಜನ ಮುಂದೆ , ನೀನವರ ಹಿಂದೆ ಎಂದು ಗಯಾಗದಾಧರನ ಸ್ತುತಿ ಮಾಡಿದ್ದಾರಲ್ಲವೆ? ದೈತ್ಯನಾದ ಮಾಲಿಯ ಸಂಹಾರದ ಸಮಯದಲ್ಲಿ ಮಾಲಿ ಗರುಡನ ಮೇಲೆ ಪ್ರಹಾರ ಮಾಡಿದಾಗ  ಪರಮಾತ್ಮನು ಅವನ ತಲೆಯನ್ನು ಕತ್ತರಿಸಿ ಹಾಕಿದನು.. ಹಿಗೆಯೇ ಪರಮಾತ್ಮನಿಗೆ ಶರಣಾದ ಎಲ್ಲ ಭಕ್ತರ ಕುರಿತಾದ ಹೊಣೆ ಪರಮಾತ್ಮನಿಗೆ ಇರುವುದರಿಂದ ಆತನ ಭಕ್ತರಲ್ಲಿ ನಾವೂ ಸಣ್ಣ ರೇಣುವಾದರೂ ಸರಿ.. ಇದೇ ವಿಷಯವನ್ನು ..
 ಅನನ್ಯಾಶ್ಚಿಂತಯಂತೋಮಾಮ್ ಯೇ ಜನಾಃ ಪರ್ಯಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಮ್ ಯೋಗಕ್ಷೇಮಂ ವಹಾಮ್ಯಹಂ

ಎನ್ನುವ ಶ್ರೀಮದ್ಭಗವದ್ಗೀತೆಯ ಶ್ಲೋಕದ ತಾತ್ಪರ್ಯವನ್ನೇ  ಇಲ್ಲಿ ನಿನಗೆ ಭಕ್ತರ ಚಿಂತೆ ಅಂತ ಅದ್ಭುತವಾದ ಸಾಹಿತ್ಯವನ್ನು ನಮಗೆ ಶ್ರೀ ಮಾನವಿ ಗುಂಡಾಚಾರ್ಯರು- ಶ್ರೀ ಶ್ಯಾಮಸುಂದರದಾಸರು ರಚನೆ ಮಾಡಿ ನಮಗೆ ನೀಡಿದ್ದಾರೆ....

ಆರಾಧನೆಯ ಪ್ರಯುಕ್ತ ಭಕ್ತರಲ್ಲಿ ವಿಶೇಷ ಸನ್ನಿಧಾನದಿಂದಿರುವ ಶ್ರೀ ವರ್ತುಲಾರ್ಯರಿಗೆ ಕೋಟಿ ಕೋಟಿ ನಮನಗಳೊಂದಿಗೆ....

ಅಸ್ಮದ್ ಪತ್ಯಂತರ್ಗತ 
ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶನ ಪದಪದ್ಮಗಳಲ್ಲಿ ಸಮರ್ಪಣೆ ಮಾಡುತ್ತಾ....

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***