Showing posts with label ಬಿಟ್ಹ್ಯಾಂಗೆ ಇರಲಿನಾ ಕೃಷ್ಣಾರ್ಯರನು ankita varada venkata vittala BITTYANGE IRALI NA KRISHNAARYARANU APPAVARA STUTIH. Show all posts
Showing posts with label ಬಿಟ್ಹ್ಯಾಂಗೆ ಇರಲಿನಾ ಕೃಷ್ಣಾರ್ಯರನು ankita varada venkata vittala BITTYANGE IRALI NA KRISHNAARYARANU APPAVARA STUTIH. Show all posts

Friday 27 December 2019

ಬಿಟ್ಹ್ಯಾಂಗೆ ಇರಲಿನಾ ಕೃಷ್ಣಾರ್ಯರನು ankita varada venkata vittala BITTYANGE IRALI NA KRISHNAARYARANU APPAVARA STUTIH

Audio by Mrs. Nandini Sripad

ಶ್ರೀ ಅಪ್ಪಾವರ ಮೇಲೆ ಹರಪನಹಳ್ಳಿ ಶ್ರೀ ವೆಂಕಟದಾಸರ ಕೃತಿ

 (ವರದ ವೆಂಕಟವಿಠಲ ಅಂಕಿತರು) 

 ರಾಗ ಆನಂದಭೈರವಿ   ಮಿಶ್ರಛಾಪುತಾಳ 

ಬಿಟ್ಹ್ಯಾಂಗೆ ಇರಲಿನಾ ಕೃಷ್ಣಾರ್ಯರನು ಇ - ।
ನ್ನೆಷ್ಟು ದಿವಸಕೆ ಬಾಹೋನೇ ॥ ಪ ॥
ಇಷ್ಟು ದಿವಸವು ಮಹಿಮೆ ತಿಳಿಯಲಿಲ್ಲವೆ ನಿಂಗೆ ।
ಕಟ್ಟಿ ಹಾಕಿದ ತನ್ನ ಕರುಣಪಾಶದಿ ಸಖಿಯೆ ॥ ಅ ಪ ॥

ಮಂದಗಮನೆ ಕೇಳೆ , ಬಂದು ಊರಿಗೆ ಪ್ರಭೂ ।
ಒಂದೇಳು ದಿನವಾಯಿತೇ ।
ಸಂದೇಹದವಳು ನಾನೆಂದು ತಿಳಿದದಕೆನ್ನ ।
ಸುಂದರಗೇ ಬ್ಯಾಸರಾಯಿತೇ ।
ಒಂದೂ ನುಡಿಯದೆ ದೋಷವೃಂದಗಳೆಣಿಸಿದರೆ ।
ಮಂದಿಯಲಿ ಮಾನ ಹೋಯಿತೇ ॥
ಒಂದೂ ತಿಳಿಯದಲೆ ನಾ ಹೊಂದಿದಾನಂದದಿರೆ ।
ಒಂದಿರುಳೇ ಕಲೆತು ಆನಂದಪಡಿಸಿದ ಸಖನಾ ॥ 1 ॥

ಮನಸಿನೊಳಗಿದ್ದದನು ನೆನೆಸಿಕೊಳ್ಳುತಿರಲು ಅದ - ।
ನನುಸರಿಸಿ ತಾ ನುಡಿದನೇ ।
ಮುನಿಸ್ಯಾಗಬ್ಯಾಡೆಂದು ಮುದ್ದಿಸಿ ಕರಪಿಡಿದು ।
ಘನ ಸುಸೇವಕಳೆಂದನೇ ।
ವನಿತೆ ಕೇಳೆಲೆ ನೀನು , ಮಾಡಿದಪರಾಧಗಳ ।
ಎಣಿಸಿ ಕಳೆದಿಹೆನೆಂದನೇ ॥
ಕನಸಿನಲಿ ಬಂದು ಕಾಣಿಸಿಕೊಂಬೆ ಎಂದು ದು - ।
ಮ್ಮನಸನಾಗ ಬ್ಯಾಡೆಂದು ನುಡಿದಂಥ ಸುಮನಸನಾ ॥ 2 ॥

ಧೀರಗಾಭರಣವನು ಕೇಳಲೇಕಾಂತದಲಿ ।
ಚಾರುವಸ್ತ್ರವನಿತ್ತನೇ ।
ಬಾರಿಬಾರಿಗೆ ಬೇಡಿಕೊಂಡು ನಮೋನಮೋ ಮಾಡೆ ।
ಭೂರಿ ಹರಸುತ ನಿಂದನೇ ।
ಊರಿಗ್ಹೋಗುವೆನೆಂದು ಮೋರೆ ನೋಡುತ ಎನಗೆ ।
ಭಾರಿ ವಸ್ತ್ರವನಿತ್ತನೇ ॥
ಮಾರಪಿತ ವರದವೆಂಕಟವಿಠ್ಠಲನ ದಾಸಾ ।
ಬಾರದಿಪ್ಪೆನೆ ಎಂದು ಬಹುಭಾಷೆ ಕೊಟ್ಟವನಾ ॥ 3 ॥
*********