Showing posts with label ಹನುಮನ ಮನೆಯವರು ನಾವೆಲ್ಲರೂ venkatanatha. Show all posts
Showing posts with label ಹನುಮನ ಮನೆಯವರು ನಾವೆಲ್ಲರೂ venkatanatha. Show all posts

Saturday 1 May 2021

ಹನುಮನ ಮನೆಯವರು ನಾವೆಲ್ಲರೂ ankita venkatanatha

 " ಶ್ರೀ ಆಂಜನೇಯ ಸ್ತುತಿ "

ರಚನೆ : ಆಚಾರ್ಯ ನಾಗರಾಜು ಹಾವೇರಿ

ಮುದ್ರಿಕೆ : ವೆಂಕಟನಾಥ


ಹನುಮನ ಮನೆಯವರು ನಾವೆಲ್ಲರೂ ।

ಮನಸಿಜನಯ್ಯಗೆ ಸಮ್ಮತವಾದಂಥ ।। ಪಲ್ಲವಿ ।।


ಹನುಮನ ನೆನೆದರೆ ಪಾಪ ಪರಿಹರವು ।

ಹನುಮನು ಒಲಿದರೆ ಶ್ರೀ ರಾಮ ಒಲಿವಾ ।। ಚರಣ ।।


ಭೀಮನ ನೆನೆದರೆ ಭಯವಿಲ್ಲವಯ್ಯಾ ।

ಕಾಮನ ಪಿತ ಕೃಷ್ಣನು ಕಾಮಿತಗಾಳೀವಾ ।। ಚರಣ ।।


ಮಧ್ವರಾಯರ ಪಾದವ ಭಜಿಸಲು ।

ಬಾದರಾಯಣ ವೆಂಕಟನಾಥ ಪೊರೆವಾ ।।

****