Showing posts with label ಯಾರು ಒಲಿದರೇನು ನಮಗಿನ್ನಾರು purandara vittala YAARU OLIDARENU NAMAGINNAARU MUNIDARENU. Show all posts
Showing posts with label ಯಾರು ಒಲಿದರೇನು ನಮಗಿನ್ನಾರು purandara vittala YAARU OLIDARENU NAMAGINNAARU MUNIDARENU. Show all posts

Friday 1 October 2021

ಯಾರು ಒಲಿದರೇನು ನಮಗಿನ್ನಾರು purandara vittala YAARU OLIDARENU NAMAGINNAARU MUNIDARENU



ಆರು (ಯಾರು) ಒಲಿದರೇನು , ನಮಗಿ-
-ನ್ನಾರು ಮುನಿದರೇನು ||ಪ||

ಕ್ಷೀರಸಾಗರಶಾಯಿಯಾದವನ
ಸೇರಿದಂಥ ಹರಿದಾಸರಿಗೆ ||ಅ.ಪ||

ಊರನಾಳುವ ದೊರೆಗಳು ನಮ್ಮ ದೂರ ಅಟ್ಟಿದರೇನು
ಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನು
ಮಾರಿ ಹಿಂಡು ಮತ್ತೆ ಮುಸುಕಿದ ದಂಡು ಮೈಗೆ ಮುತ್ತಿದರೇನು
ವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ ||

ಪಡೆದ ತಾಯಿ ನಮ್ಮೊಳು ಅಹಿತ ಮಾಡಿದರೇನು
ಮಡದಿ ಮಕ್ಕಳು ಮನೆಯ ನೆಂಟರು ಮುನಿಸುಗುಟ್ಟಿದರೇನು
ಒಡನಾಡುವ ಗೆಳೆಯರು ನಮ್ಮೊಳಗೆ ವೈರವ ಬೆಳೆಸಿದರೇನು
ಕಡಲಶಯನ ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ ||

ಕಾನನದೊಳ್ಹರಿಯುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕ್ರಿಮಿ ಕೀಟಗಳು ಚರ್ಮಕೆ ಮುತ್ತಿದರೇನು
ಭಾನುನಂದನ ಬುಧ ಮಂಗಳರಾ ಬಲವು ತಪ್ಪಿದರೇನು
ದೀನನಾಥ ಶ್ರೀ ಪುರಂದರವಿಠಲನ ಧ್ಯಾನವುಳ್ಳ ಹರಿದಾಸರಿಗೆ ||
****

ರಾಗ ಆನಂದಭೈರವಿ ಆದಿತಾಳ (raga tala may differ in audio)

pallavi

Aru olidarEnu namaginnAru munidarEnu

anupallavi

kSIra sAgara shAyi yAdavana sEridantha haridAsarige

caraNam 1

UranALuva doregaLu nammanu dUra aTTidarEnu
ghOrAraNyadi tiruguva mrgagaLu aDDa kaTTidarEnu
mari hiNDu matte musukina daNDu maigai muttidarEnu
vArijanAbhana vasudEva sutana sAruvantha haridAsarige

caraNam 2

paDeda tAyi tande nammoLu ahita mADidarEnu
maDadi makkaLu maneya neNTaru munisuguTTidarEnu
oDanADuva gauyaru nammoLage vairava beLesidarEnu
kaDala shayana karuNAnidhi nAmavu oDaloLagiha haridAsarige

caraNam 3

kAnanadoLa haridADuva sarpavu kAlige suttidarEnu
jEninandadi kITa krimigaLu carmake muttidarEnu
bhAnu nandana budha mangaLarA balavu tappidarEnu
dInanAtha shrI purandara viTTalana dhyAnavuLLa haridAsarige
***

ಆರು ಒಲಿದರೇನು ನಮಗಿನ್ನಾರು ಮುನಿದರೇನು
ಕ್ಷೀರಸಾಗರ ಶೇಷಶಯನನ ಒಲುಮೆಯುಳ್ಳ ಹರಿದಾಸರಿಗೆ ಪ.

ಪಡೆದ ತಾಯಿ - ತಂದೆ ನಮ್ಮೊಳು ಅಹಿತವ ಮಾಡಿದರೇನು
ಮಡದಿ ಮಕ್ಕಳು ನೆಂಟರಿಷ್ಟರುಮುನಿಸು ಮಾಡಿದರೇನು
ಒಡೆನೆ ತಿರುಗುವ ಗೆಳೆಯರು ನಮ್ಮೊಳು ವೈರವ ಬೆಳಸಿದರೇನು
ಕಡಲ ಶಯನನ ಕರುಣಾಂಬುಧಿಯ ಒಲುಮೆಯುಳ್ಳ ಹರಿದಾಸರಿಗೆ 1

ಊರನಾಳುವ ದೊರೆಗಳು ನಮ್ಮನು ಹೊರಗೆ ನೂಕಿದರೇನು
ಮಾರಿಯಹಿಂಡು ಮುಸಲರ ದಂಡು ಮೈಗೆ ಮುತ್ತಿದರೇನು ||
ಅರಣ್ಯದಿ ಹರಿದಾಡುವ ಮೃಗಗಳು ಅಡ್ಡಗಟ್ಟಿದರೇನು
ವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ 2

ಕಾನನದೊಳು ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕ್ರೀಮಿಕೀಟಂಗಳು ಚರ್ಮಕೆ ಮುತ್ತಿದರೇನು ||
ಭಾನು ಮಂಗಳಬುಧ ಶುಕ್ರಂಗಳ ಬಲುವು ತಪ್ಪಿದರೇನು
ಮಾಣದೆಭಜಿಸುವ ಪುರಂದರವಿಠಲನ ಒಲುಮೆಯುಳ್ಳ ಹರಿದಾಸರಿಗೆ3
******
ankita siri vittala
ರಾಗ ಶಂಕರಾಭರಣ ಆದಿತಾಳ)

ಆರು ಒಲಿದರೇನು ನಮಗಿನ್ನಾರು ಮುನಿದರೇನು
ಕ್ಷೀರಸಾಗರಶಯನ ಹರಿಯ ಸೇರಿದ ಹರಿದಾಸರಿಗೆ ||ಪ||

ಪಡೆದ ತಾಯಿಯು ತಂದೆಯು ನಮ್ಮೊಳಗೆ ಅಹಿತರು ಆದರೇನು
ಮಡದಿ ಮಕ್ಕಳು ಮನೆಗಳು ನೆಂಟರು ಮುನಿಸುಗುಟ್ಟಿದರೇನು
ಒಡನೆ ತಿರುಗುವ ಆ ಗೆಳೆಯನು ಮನದೊಳು ವೈರವ ಬೆಳೆಸಿದರೇನು
ಕಡಲಶಯನನ ಕರುಣಾರೂಪನ ಒಲುಮೆಯುಳ್ಳ ಹರಿದಾಸರಿಗೆ ||೧||

ಊರನು ಆಳುವ ದೊರೆಯು ನಮ್ಮನು ಹೊರಗೆ ಹಾಕಿದರೇನು
ಘೋರಾರಣ್ಯದೊಳು ಆಡುವ ಮೃಗಗಳು ಅಡ್ಡಗಟ್ಟೀದರೇನು
ಮಾರಿ ಹಿಂಡು ಮುಸುಕಿದ ದಂಡು ಮೈಗೆ ಮುತ್ತಿದರೇನು
ವಾರಿಜನಾಭನ ವಸುದೇವಸುತನ ಒಲುಮೆಯುಳ್ಳ ಹರಿದಾಸರಿಗೆ ||೨||

ಕಾನನದೊಳು ಹರಿದಾಡುವ ಉರಗವು ಕಾಲಿಗೆ ಸುತ್ತಿದರೇನು
ಜೇನಿನ ಅಂದದಿ ಕ್ರಿಮಿಕೀಟಂಗಳು ಚರ್ಮಕೆ ಮುತ್ತಿದರೇನು
ಭಾನುಮಂಡಲ ಭಜಿಸುವ ಭಕ್ತರ ಬಲಗಳು ತಪ್ಪಿದರೇನು

ಮನದಲಿ ಸಿರಿವರ ವಿಠ್ಠಲನ ಒಲುಮೆಯುಳ್ಳ ಹರಿದಾಸರಿಗೆ ||೩
*******