Showing posts with label ರಕ್ಷಿಸೆನ್ನನು ಪಕ್ಷೀ೦ದ್ರನೇ ನೀನು ರಕ್ಷಿಸೆನ್ನನು ಪಕ್ಷಿಪ ಕರುಣಾ shyamasundara. Show all posts
Showing posts with label ರಕ್ಷಿಸೆನ್ನನು ಪಕ್ಷೀ೦ದ್ರನೇ ನೀನು ರಕ್ಷಿಸೆನ್ನನು ಪಕ್ಷಿಪ ಕರುಣಾ shyamasundara. Show all posts

Saturday 1 May 2021

ರಕ್ಷಿಸೆನ್ನನು ಪಕ್ಷೀ೦ದ್ರನೇ ನೀನು ರಕ್ಷಿಸೆನ್ನನು ಪಕ್ಷಿಪ ಕರುಣಾ ankita shyamasundara

 " ಶ್ರೀ ಗರುಡದೇವರ ಸ್ತುತಿ " 

ರಾಗ : ದುರ್ಗಾ ತಾಳ : ತ್ರಿಪುಟ


ರಕ್ಷಿಸೆನ್ನನು ಪಕ್ಷೀ೦ದ್ರನೇ ನೀನು ।। ಪಲ್ಲವಿ ।।


ರಕ್ಷಿಸೆನ್ನನು ಪಕ್ಷಿಪ ಕರುಣಾ । ಕ ।

ಟಾಕ್ಷದಿಂದೀಕ್ಷಿಸು ತೀಕ್ಷಣ ಬಿಡದೆ ।। ಅ ಪ ।।


ತಂದೆಯನುಜ್ಞದಿ 

ಸಿಂಧೂರ ಕೂರ್ಮ ।

ದ್ವಂದ್ವ ಪ್ರಾಣಿಗಳ 

ತಿಂದ ಮಹಾತ್ಮ ।। ಚರಣ ।।

ಅಂದು ಪೀಯೂಷವ 

ತಂದು ಮಾತೆಯ ।

ಬಂಧನ ಬಿಡಿಸಿದ 

ಬಂಧುರ ಮಹಿಮನೆ ।। ಚರಣ ।।

ಗಗನಗಮನ ಪ-

ನ್ನಗವಗೆ ಪ್ರಾರ್ಥಿಪೆ ।

ಮಿಗೆ ಕರುಣದಿ ಎ-

ನ್ನಘ ದೂರೋಡಿಸಿ ।। ಚರಣ ।।

ಧಾರುಣಿಯೊಳವತಾ-

ರ ರಹಿತ । ಶೃಂ ।

ಗಾರವಾದ ಬಂಗಾರ 

ಶರೀರ ।। ಚರಣ ।।

ವಂದಿಪೆ ವಿನುತ 

ನಂದನ । ಶ್ಯಾಮ ।

ಸಂದರ ವಿಠಲನ-

ಸ್ಯ೦ದನ ಶೂರ ।। ಚರಣ ।।

****


ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

" ತಂದೆಯನುಜ್ಞದಿ ಸಿಂಧೂರ ಕೂರ್ಮ ದ್ವಂದ್ವ ಪ್ರಾಣಿಗಳ ತಿಂದ ಮಹಾತ್ಮ "

ಸಮುದ್ರ ಮಧ್ಯದಲ್ಲಿ ಬೃಹದಾಕಾರವಾದ ಆನೆ ಮತ್ತು ಕೂರ್ಮಗಳ ರೂಪದಲ್ಲಿ ನಾವಿಕರನ್ನು ಪೀಡಿಸಿ ತಿನ್ನುತ್ತಿದ್ದ ದೈತ್ಯರನ್ನು ತಂದೆಯ ಆದೇಶದಂತೆ ತನ್ನ ಹಸ್ತ ದ್ವಯಗಳಿಂದ ಎತ್ತಿಕೊಂಡು ಹೋಗಿ ಭಕ್ಷಿಸಿ ಸಜ್ಜನರನ್ನು ರಕ್ಷಿಸಿದರು ಶ್ರೀ ಗರುಡದೇವರು ಎಂದು - ಪದ್ಮಪುರಾಣ, ಹರಿವಂಶ, ಗರುಡಪುರಾಣಗಲ್ಲಿ ಉಲ್ಲೇಖಿಸಲ್ಪಟ್ಟಿದೆ.  

" ಅಂದು ಪೀಯೂಷವ ತಂದು ಮಾತೆಯ ಬಂಧನ ಬಿಡಿಸಿದ "

ಸ್ವರ್ಗ ಲೋಕಕ್ಕೆ ಹೋಗಿ ಅಮೃತ ಕಲಶವನ್ನು ತಂದು ತಾಯಿಯಾದ ವಿನುತೆಯನ್ನು ಮಲತಾಯಿ ಕದ್ರುವಿನ ದಾಸ್ಯದಿಂದ ಬಿಡಿಸಿದನು. 

ಬಂಧುರ ಮಹಿಮ  = ಮಹೋಹರವಾದ ಮಹಿಮಾ ಸಂಪನ್ನರು  

" ಬಂಗಾರ ಶರೀರ "

 ಬಂಗಾರ ವರ್ಣದಿಂದ ಪರಿಶೋಭಿತವಾದ ದೇಹವನ್ನು ಉಳ್ಳವರು

****