Showing posts with label ವಿಜಯೀಂದ್ರ ಗುರುರಾಯರ ಅನುದಿನ ಪೂಜಿಸಿದೈ ಮುದದಿ varadaraja vijayeendra teertha stutih. Show all posts
Showing posts with label ವಿಜಯೀಂದ್ರ ಗುರುರಾಯರ ಅನುದಿನ ಪೂಜಿಸಿದೈ ಮುದದಿ varadaraja vijayeendra teertha stutih. Show all posts

Thursday 1 July 2021

ವಿಜಯೀಂದ್ರ ಗುರುರಾಯರ ಅನುದಿನ ಪೂಜಿಸಿದೈ ಮುದದಿ ankita varadaraja vijayeendra teertha stutih

 " ವರದರಾಜಾಂಕಿತ " ಶ್ರೀ ತರಂಗಿಣೀ ರಾಮಾಚಾರ್ಯರ ವದನಾರವಿಂದದಲ್ಲಿ ಹೊರಹೊಮ್ಮಿದ - ತಮ್ಮ ವಿದ್ಯಾ ಗುರುಗಳಾದ ಶ್ರೀ ವಿಜಯೀ೦ದ್ರ ತೀರ್ಥರ ಸ್ತೋತ್ರ "

ರಾಗ : ಆನಂದಭೈರವಿ ತಾಳ : ರೂಪಕ


ವಿಜಯೀ೦ದ್ರ ಗುರುರಾಯರ ಅನುದಿನ ।

ಪೂಜಿಸಿದೈ ಮುದದಿ ।। ಪಲ್ಲವಿ ।।


ಯಾಚಕ ಭಕ್ತರ ಕಲ್ಪಭೂಜನಾಗಿ ಪುಟ್ಟಿ ।

ವ್ಯಾಸರಾಯರನುಗ್ರಹ ಪಡೆದು -

ಜಗದಿ ಮೆರೆವ ।। ಅ ಪ ।।


ಮುಂದೆ ಬೊಮ್ಮನಾಗಿ । ಪುಟ್ಟುವಾ ।

ನಂದತೀರ್ಥರ ಗ್ರಂಥಗಳಂದ ।

ಚಂದರೀಕಾಚಾರ್ಯರಿಂದ ತಳಿದು -

ನಲಿದು ಲೋಕದೊಳು ಮೆರೆದು ।

ಸುಂದರಾಂಗ ಶ್ರೀ ಮೂಲರಾಮ -

ಚಂದ್ರನ ಚರಣಾರವಿಂದ ।

ಅಂದದಿಂದ ಭಜಿಸುತ್ತ -

ಬಂದು ಕುಂಭಕೋಣದಿ -

ನಿಂತ ।। ಚರಣ ।।


ಪಂಕಜಧರೋತ್ತಮನೆಂಬೋ- 

ಸುಧಾಮೋದಗಳಿಂದ ।

ಹಿಂಗದೆ ಶಿಷ್ಯರಿಗರುಹುತ -

ಶ್ರುತಿ ಸ್ಮೃತಿಗಳಿಂದ ಕೂಡಿ ।

ಶಂಕಿಸುತ ಬರುವ ಮಾಯಾಮತ -

ಕಿಂಕರರ ಕರಗಳ ।

ಬಿಂಕದಿ ಮಧ್ವಸಿದ್ಧಾಂತ-

ದಂಕುಶದಿಂದ ಸದೆದ ।। ಚರಣ ।।


ಶೀಲ ಭಕ್ತ ಮನ । ಕ ।

ಮಲ ಭಾನುಧೇನುವಾಗಿ ಸೇವಕರ ।

ಪಾಲಿಸಿ ಸಂತಾನ ಕೊಡುವ ನೋಡಿ -

ಬೇಡಿ ಈಡಿಲ್ಲಧಾ೦ಗೆ ।

ಇಳಿಯುತ ಕಾಂಚೀಪುರದಾ -

ನೆಲದಿ ಶೇಷಶಯನನಾದ ।

ಚಲುವ ವರದರಾಜನ ನೋಡಿ -

ನಲಿದು ನಲಿದು -

ಕುಣಿದಾಡುವ ।। ಚರಣ ।।

***