Vijaya daasa kruta ಶ್ರೀಧನ್ವಂತರಿ ಸುಳಾದಿ ಶ್ರೀ ವಿಜಯದಾಸರು ಕೃತ
ಶ್ರೀ ವಿಜಯದಾಸರು ಕೃತ Dhanvantari SuLaadi ಶ್ರೀಧನ್ವಂತರಿ ಸುಳಾದಿ
ರಾಗ ನಾದನಾಮಕ್ರಿಯಾ
ಧ್ರುವತಾಳ
ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವದು
ಕಾಯ ನಿರ್ಮಲಿನ ಕಾರಣವಾಹುದು
ಮಾಯಾ ಹಿಂದಾಗುವದು ನಾನಾ ರೋಗದ ಬೀಜ
ಬೇಯಿಸಿ ಕಳೆವದು ವೇಗದಿಂದ
ನಾಯಿಮೊದಲಾದ ಕುತ್ಸಿತದೇಹ ನೀ -
ಕಾಯವ ತೆತ್ತಿ ದುಷ್ಕರ್ಮದಿಂದ
ಕ್ರೀಯಾಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯ ಸಾಗರದೊಳು ಬಿದ್ದು ಬಳಲೀ
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ
ಬಾಯಲ್ಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ
ರಾಯಾ ರಾಜೌಷಧಿ ನಿಯಾಮಕ ಕರ್ತಾ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನು ಪಾಲಿಪಾ
ಧೇಯಾ ದೇವಾದಿಗಳಿಗೆ ಧರ್ಮಜ್ಞ ಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ -
ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ
ವಾಯುವಂದಿತ ನಿತ್ಯ ವಿಜಯವಿಠ್ಠಲ ರೇಯಾ
ಪ್ರೀಯನು ಕಾಣೊ ನಮಗೆ ಅನಾದಿರೋಗ ಕಳೆವಾ ॥ 1 ॥
ಮಟ್ಟತಾಳ
ಧನ್ವಂತ್ರಿ ಶ್ರೀ ಧನ್ವಂತ್ರಿ ಎಂದು
ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ
ನಿನ್ನವ ನಿನ್ನವನೊ ಘನ್ನತಿಯಲಿ ನೆನೆದ
ಮನ್ನುಜ ಭೂವನದೊಳು ಧನ್ಯನು ಧನ್ಯನೆನ್ನಿ
ಚನ್ನ ಮೂರ್ತಿ ಸುಪ್ರಸನ್ನ ವಿಜಯವಿಠ್ಠಲನ
ಸತ್ಯವೆಂದು ಬಣ್ಣಿಸು ಬಹು ವಿಧದಿ ॥ 2 ॥
ತ್ರಿವಿಡಿತಾಳ
ಶಶಿಕುಲೋದ್ಭವ ಧೀರ್ಘತಮ ನಂದನ ದೇವಾ
ಶಶಿವರ್ನಾ ಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯ ವಂದ್ಯಾ
ಶಶಿಗರ್ಭ ಭೂರುಹ ಲತೆ ಪೊದೆ ತಾಪ
ಓಡಿಸುವೌಷಧ ತುಲಸಿಜನಕ
ಅಸುರ ನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದಲೆ ಮಹೋದಧಿ ಮರ್ದಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷ ಘಟ ಧರಿಸಿ
ಅಸಮ ದೈವನೆ ನಿನ್ನ ಮಹಿಮೆಗೆ ನಮೋ ನಮೋ
ಬಿಸಜ ಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವರೋ
ದಶದಿಶದೊಳು ಮೆರೆವ ವಿಜಯವಿಠ್ಠಲ ಭಿಷ್ಕಾ
ಅಸು ಇಂದ್ರಿಯಂಗಳ ರೋಗ ನಿವಾರಣ ॥ 3 ॥
ಅಟ್ಟತಾಳ
ಶರಣು ಶರಣು ಧನ್ವಂತ್ರಿ ತಮೋಗುಣ ನಾಶಾ
ಶರಣು ಆರ್ತಜನ ಪರಿಪಾಲಕ ದೇವ
ತರುವೆ ಭವ ತಾಪ ಹರಣ ದಿತಿಸುತ
ಹರಣ ಮೋಹಕ ಲೀಲಾ ಪರಮಪೂರ್ಣ ಬ್ರಹ್ಮ
ಉದ್ಧಾರಕ ಉರುಪರಾಕ್ರಮ ಉರಗಶಾಯಿ
ವರ ಕಿರೀಟ ಮಹಾಮಣಿ ಕುಂಡಲ ಕರ್ಣ
ಮಿರುಗುವ ಹಸ್ತಕಂಕಣ ಹಾರಪದಕ ತಾಂ
ಬರ ಕಾಂಚಿ ಪೀತಾಂಬರ ಚರಣಭೂಷಾ
ಸಿರಿವತ್ಸಲಾಂಛನ ವಿಜಯವಿಠ್ಠಲರೇಯಾ
ತರುಣಗಾತುರ ಜ್ಞಾನಮುದ್ರಾಂಕಿತ ಹಸ್ತಾ ॥ 4 ॥
ಆದಿತಾಳ
ಏಳುವಾಗಲಿ ಮತ್ತೆ ತಿರುಗಿ ತಿರುಗುತಲಿ
ಬೀಳುವಾಗಲಿ ನಿಂತು ಕುಳ್ಳಿರುವಾಗಲಿ
ಹೇಳುವಾಗಲಿ ಮಾತು ಕೇಳುವಾಗಲಿ ಕರೆದು
ಪೇಳುವಾಗಲಿ ಪೋಗಿ ಸತ್ಕರ್ಮ ಮಾಡುವಾಗ
ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ -
ಮ್ಮೇಳವಾಗಲಿ ಮೇಲು ಪುತ್ರಾದಿ ಒಡನೊಡನೆ
ಖೇಳವಾಗಿ ಮನುಜ ಮಾರ್ಯಾದೆ ನಿನ್ನಯ
ನಾಲಿಗೆ ಕೊನೆಯಲ್ಲಿ ಧನ್ವಂತ್ರಿ ಎಂದು ಒಮ್ಮೆ
ಕಾಲ ಅಕಾಲದಲ್ಲಿ ಸ್ಮರಿಸಿದರೆ ಅವಗೆ
ವೇಳ್ಯ ವೇಳ್ಯೆಗೆ ಬಾಹ ಭವಬೀಜ ಪರಿಹಾರ
ನೀಲಮೇಘಶ್ಯಾಮ ವಿಜಯವಿಠ್ಠಲರೇಯಾ
ವಾಲಗ ಕೊಡುವನು ಮುಕ್ತರ ಸಂಗದಲಿ ॥ 5 ॥
ಜತೆ
ಧಂ ಧನ್ವಂತ್ರಿ ಎಂದು ಪ್ರಣವ ಪೂರ್ವಕದಿಂದ
ವಂದಿಸಿ ನೆನೆಯಲು ವಿಜಯವಿಠ್ಠಲ ಒಲಿವಾ ॥
***
1st Audio by Mrs. Nandini Sripad
CLCK -> HOME
just scroll down for other devaranama and suladi
ರಾಗ ನಾದನಾಮಕ್ರಿಯಾ
ಧ್ರುವತಾಳ
ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವದು
ಕಾಯ ನಿರ್ಮಲಿನ ಕಾರಣವಾಹುದು
ಮಾಯಾ ಹಿಂದಾಗುವದು ನಾನಾ ರೋಗದ ಬೀಜ
ಬೇಯಿಸಿ ಕಳೆವದು ವೇಗದಿಂದ
ನಾಯಿಮೊದಲಾದ ಕುತ್ಸಿತದೇಹ ನೀ -
ಕಾಯವ ತೆತ್ತಿ ದುಷ್ಕರ್ಮದಿಂದ
ಕ್ರೀಯಾಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯ ಸಾಗರದೊಳು ಬಿದ್ದು ಬಳಲೀ
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ
ಬಾಯಲ್ಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ
ರಾಯಾ ರಾಜೌಷಧಿ ನಿಯಾಮಕ ಕರ್ತಾ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನು ಪಾಲಿಪಾ
ಧೇಯಾ ದೇವಾದಿಗಳಿಗೆ ಧರ್ಮಜ್ಞ ಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ -
ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ
ವಾಯುವಂದಿತ ನಿತ್ಯ ವಿಜಯವಿಠ್ಠಲ ರೇಯಾ
ಪ್ರೀಯನು ಕಾಣೊ ನಮಗೆ ಅನಾದಿರೋಗ ಕಳೆವಾ ॥ 1 ॥
ಮಟ್ಟತಾಳ
ಧನ್ವಂತ್ರಿ ಶ್ರೀ ಧನ್ವಂತ್ರಿ ಎಂದು
ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ
ನಿನ್ನವ ನಿನ್ನವನೊ ಘನ್ನತಿಯಲಿ ನೆನೆದ
ಮನ್ನುಜ ಭೂವನದೊಳು ಧನ್ಯನು ಧನ್ಯನೆನ್ನಿ
ಚನ್ನ ಮೂರ್ತಿ ಸುಪ್ರಸನ್ನ ವಿಜಯವಿಠ್ಠಲನ
ಸತ್ಯವೆಂದು ಬಣ್ಣಿಸು ಬಹು ವಿಧದಿ ॥ 2 ॥
ತ್ರಿವಿಡಿತಾಳ
ಶಶಿಕುಲೋದ್ಭವ ಧೀರ್ಘತಮ ನಂದನ ದೇವಾ
ಶಶಿವರ್ನಾ ಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯ ವಂದ್ಯಾ
ಶಶಿಗರ್ಭ ಭೂರುಹ ಲತೆ ಪೊದೆ ತಾಪ
ಓಡಿಸುವೌಷಧ ತುಲಸಿಜನಕ
ಅಸುರ ನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದಲೆ ಮಹೋದಧಿ ಮರ್ದಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷ ಘಟ ಧರಿಸಿ
ಅಸಮ ದೈವನೆ ನಿನ್ನ ಮಹಿಮೆಗೆ ನಮೋ ನಮೋ
ಬಿಸಜ ಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವರೋ
ದಶದಿಶದೊಳು ಮೆರೆವ ವಿಜಯವಿಠ್ಠಲ ಭಿಷ್ಕಾ
ಅಸು ಇಂದ್ರಿಯಂಗಳ ರೋಗ ನಿವಾರಣ ॥ 3 ॥
ಅಟ್ಟತಾಳ
ಶರಣು ಶರಣು ಧನ್ವಂತ್ರಿ ತಮೋಗುಣ ನಾಶಾ
ಶರಣು ಆರ್ತಜನ ಪರಿಪಾಲಕ ದೇವ
ತರುವೆ ಭವ ತಾಪ ಹರಣ ದಿತಿಸುತ
ಹರಣ ಮೋಹಕ ಲೀಲಾ ಪರಮಪೂರ್ಣ ಬ್ರಹ್ಮ
ಉದ್ಧಾರಕ ಉರುಪರಾಕ್ರಮ ಉರಗಶಾಯಿ
ವರ ಕಿರೀಟ ಮಹಾಮಣಿ ಕುಂಡಲ ಕರ್ಣ
ಮಿರುಗುವ ಹಸ್ತಕಂಕಣ ಹಾರಪದಕ ತಾಂ
ಬರ ಕಾಂಚಿ ಪೀತಾಂಬರ ಚರಣಭೂಷಾ
ಸಿರಿವತ್ಸಲಾಂಛನ ವಿಜಯವಿಠ್ಠಲರೇಯಾ
ತರುಣಗಾತುರ ಜ್ಞಾನಮುದ್ರಾಂಕಿತ ಹಸ್ತಾ ॥ 4 ॥
ಆದಿತಾಳ
ಏಳುವಾಗಲಿ ಮತ್ತೆ ತಿರುಗಿ ತಿರುಗುತಲಿ
ಬೀಳುವಾಗಲಿ ನಿಂತು ಕುಳ್ಳಿರುವಾಗಲಿ
ಹೇಳುವಾಗಲಿ ಮಾತು ಕೇಳುವಾಗಲಿ ಕರೆದು
ಪೇಳುವಾಗಲಿ ಪೋಗಿ ಸತ್ಕರ್ಮ ಮಾಡುವಾಗ
ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ -
ಮ್ಮೇಳವಾಗಲಿ ಮೇಲು ಪುತ್ರಾದಿ ಒಡನೊಡನೆ
ಖೇಳವಾಗಿ ಮನುಜ ಮಾರ್ಯಾದೆ ನಿನ್ನಯ
ನಾಲಿಗೆ ಕೊನೆಯಲ್ಲಿ ಧನ್ವಂತ್ರಿ ಎಂದು ಒಮ್ಮೆ
ಕಾಲ ಅಕಾಲದಲ್ಲಿ ಸ್ಮರಿಸಿದರೆ ಅವಗೆ
ವೇಳ್ಯ ವೇಳ್ಯೆಗೆ ಬಾಹ ಭವಬೀಜ ಪರಿಹಾರ
ನೀಲಮೇಘಶ್ಯಾಮ ವಿಜಯವಿಠ್ಠಲರೇಯಾ
ವಾಲಗ ಕೊಡುವನು ಮುಕ್ತರ ಸಂಗದಲಿ ॥ 5 ॥
ಜತೆ
ಧಂ ಧನ್ವಂತ್ರಿ ಎಂದು ಪ್ರಣವ ಪೂರ್ವಕದಿಂದ
ವಂದಿಸಿ ನೆನೆಯಲು ವಿಜಯವಿಠ್ಠಲ ಒಲಿವಾ ॥
1. Dhruva Tala
Aayu-vruddhiyaagodu shreyassu baruvadu
Kaaya nirmalina kaaranavaahudu
Maayaa hindaaguvadu naanaa rogada beeja
Beyisi kalevadu vegadinda
Naayi-modalaada kutsita-deha nee -
Kaayava tetti dush-karmadinda
Kriyaamaana sanchita bharitavaagidda duhkha
Heya saagaradolu biddu balelee
Noyisikondu nelegaanade omme tanna
Baayalli Vaidyamurti Shri Dhanvantari
Raayaa Raajaushadhi niyaamaka kartaa
Shriyarasanendu tutisilaagi
Taayi odagi bandu baalanna saakidante
Noyagodade nammanu paalipaa
Dheyaa devaadigalige dharmajgna gunasaandra
Shreyassu koduvanu bhajakarige
Maayaa mantradinda jagavella vyaapisi sa -
Nyaayavantanaagi cheshte maalpaa
Vaayuvandita nitya Vijayavithala reyaa
Priyanu kaano namage anaadi-roga kalevaa || 1 ||
2. Matta Tala
Dhanvantari Shri Dhanvantari endu
Sannutisi satata bhinna jgnaanadinda
Ninnavan ninnavano ghannatiyali neneda
Mannuja bhuvanadolu dhanyanu dhanyanenni
Channa murti suprasanna Vijayavithalana
Satyavendu bannisu bahu vidhadi || 2 ||
3. Trivida Tala
Shashi-kulodbhava dheerghatama nandana devaa
Shashivarnaa prakaasha prabhuve vibhuve
Shashi-mandala samsthita kalasha kalasha-paani
Bisaja-lochana Ashwineya vandyaa
Shashi-garbha bhuruha late pode taapa
Odisuvaushadha Tulasi-janaka
Asura nirjara-tati neredu giriya tandu
Misukadale mahodadhi mardisalaagi
Nasunaguta puttide peeyusha ghata dharisi
Asama daivane ninna mahimege namo namo
Bisaja sambhava Rudra modalaada devataa
Rushinikara ninna kondaaduvaro
Dashadishadolu mereva Vijayavithala bhishkaa
Asu indriyangala roga nivaarana || 3 ||
4. Atta Tala
Sharanu sharanu Dhanvantari tamoguna naashaa
Sharanu aarta-jana paripaalaka deva
Taruve bhava taapa harana diti-suta
Harana mohaka leelaa parama-purna Brahma
Uddhaaraka uru-paraakrama uraga-shaayi
Vara kireeta mahaamani kundala karna
Miruguva hasta-kankana haara-padaka taam-
Bara kaanchi peetaambara charana-bhusha
Sirivatsalaanchana Vijayavithala reyaa
Taruna-gaatura jgnaana-mudraankita hasta || 4 ||
5. Adi Tala
Eluvaagali matte tirugi tirugutali
Beeluvaagali nintu kulliruvaagali
Heluvaagali maatu keluvaagali karedu
Peluvaagali pogi satkarma maaduvaaga
Baaluvaagali bhojana naanaa shadrasa sam-
Melavaagali melu putraadi odanodane
Khelavaagali manuja maryaade ninnaya
Naalige koneyalli Dhanvantari endu omme
Kaala akaaladalli smarisidare avage
Velya velyege baaha bhava-beeja parihaara
Neela-megha-shyama Vijayavithala reyaa
Vaalaga koduvanu muktara sangadali || 5 ||
Jate (Conclusion)
Dham Dhanvantari endu pranava purvakadinda
Vandisi neneyalu Vijayavithala oliva ||
***
Quick Pronunciation Guide:
aa: Long 'a' as in Father.
ee: Long 'e' as in See.
uu: Long 'u' as in Moon.
th: Soft 'th' (as in Thai), not hard as in The.
zh/l: The Kannada letter 'ಳ' is represented as 'l' or 'la' in the text above.
***
ಶ್ರೀ ವಿಜಯದಾಸರು ರಚಿಸಿರುವ ಈ ಧನ್ವಂತರಿ ಸುಳಾದಿಯು ಆಧ್ಯಾತ್ಮಿಕ ಮತ್ತು ದೈಹಿಕ ಆರೋಗ್ಯವನ್ನು ಬೇಡುವ ಅತ್ಯಂತ ಶಕ್ತಿಶಾಲಿ ಸ್ತೋತ್ರವಾಗಿದೆ. ಇದರ ಸಾರಾಂಶ ಮತ್ತು ಪ್ರತಿ ಪಾದದ (ಪ್ಯಾರಾವೈಸ್) ಅರ್ಥ ಈ ಕೆಳಗಿನಂತಿದೆ:
ಸಾರಾಂಶ (Summary)
ಈ ಸುಳಾದಿಯಲ್ಲಿ ವಿಜಯದಾಸರು ಶ್ರೀಹರಿಯ ಅವತಾರವಾದ ಧನ್ವಂತರಿಯನ್ನು ವೈದ್ಯರಾಜನಾಗಿ ಕೊಂಡಾಡಿದ್ದಾರೆ. ಮನುಷ್ಯನು ತನ್ನ ಹಳೆಯ ಕರ್ಮಗಳಿಂದ ಅನುಭವಿಸುವ ರೋಗಗಳು ಮತ್ತು ಸಂಸಾರದ ದುಃಖಗಳನ್ನು ಕೇವಲ 'ಧನ್ವಂತರಿ' ಎಂಬ ನಾಮಸ್ಮರಣೆಯಿಂದ ಹೇಗೆ ಗುಣಪಡಿಸಿಕೊಳ್ಳಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಸಮುದ್ರ ಮಥನದ ಸಮಯದಲ್ಲಿ ಅಮೃತ ಕಲಶದೊಂದಿಗೆ ಉದ್ಭವಿಸಿದ ಭಗವಂತನ ರೂಪವನ್ನು ವರ್ಣಿಸುತ್ತಾ, ಏಳುವಾಗ, ಕೂರುವಾಗ, ಉಣ್ಣುವಾಗ ಸದಾ ಆತನನ್ನು ಸ್ಮರಿಸುವುದರಿಂದ ಜನ್ಮಜನ್ಮಾಂತರದ ರೋಗಗಳು ನೀಗಿ, ಮುಕ್ತಿ ದೊರೆಯುತ್ತದೆ ಎಂಬುದು ಈ ಕೃತಿಯ ಮುಖ್ಯ ಸಂದೇಶ.
ಪ್ರತಿ ಪಾದದ ವಿವರಣೆ (Meaning Parawise)
1. ಧ್ರುವತಾಳ: ಆರೋಗ್ಯ ಮತ್ತು ಸುಖದ ಮೂಲ
ಧನ್ವಂತರಿ ನಾಮಸ್ಮರಣೆಯಿಂದ ಆಯುಷ್ಯ ವೃದ್ಧಿಯಾಗುತ್ತದೆ ಮತ್ತು ಮಂಗಳ ಉಂಟಾಗುತ್ತದೆ. ನಮ್ಮ ದೇಹವು ಪವಿತ್ರವಾಗಲು ಇದು ಕಾರಣವಾಗುತ್ತದೆ. ಅಜ್ಞಾನವೆಂಬ ಮಾಯೆಯು ದೂರ ಸರಿದು, ನಾನಾ ರೋಗಗಳಿಗೆ ಕಾರಣವಾದ ಪಾಪದ ಬೀಜಗಳನ್ನು ಈ ನಾಮವು ಸುಟ್ಟು ಹಾಕುತ್ತದೆ. ನಾವು ಹಿಂದಿನ ಜನ್ಮದ ದುಷ್ಕರ್ಮಗಳಿಂದ ನಾಯಿ ಮೊದಲಾದ ಕೀಳು ಜನ್ಮಗಳನ್ನು ಎತ್ತಿ, ದುಃಖದ ಸಾಗರದಲ್ಲಿ ಬಿದ್ದು ಬಳಲುತ್ತಿದ್ದೇವೆ. ಇಂತಹ ಸಮಯದಲ್ಲಿ "ವೈದ್ಯಮೂರ್ತಿ ಶ್ರೀಧನ್ವಂತರಿ" ಎಂದು ಒಮ್ಮೆ ಕೂಗಿದರೆ, ತಾಯಿ ಮಗುವನ್ನು ಸಲಹುವಂತೆ ಆತ ನಮ್ಮನ್ನು ಕಾಪಾಡುತ್ತಾನೆ. ದೇವತೆಗಳಿಗೂ ಶ್ರೇಯಸ್ಸು ನೀಡುವ ಆ ವಿಜಯವಿಠ್ಠಲನು ನಮ್ಮ ಅನಾದಿ ರೋಗಗಳನ್ನು (ಜನ್ಮ-ಮರಣದ ರೋಗ) ಕಳೆಯುತ್ತಾನೆ.
2. ಮಟ್ಟತಾಳ: ಧನ್ಯತೆ
ಯಾರು ಸದಾ "ಧನ್ವಂತರಿ, ಧನ್ವಂತರಿ" ಎಂದು ಭಕ್ತಿಯಿಂದ ಮತ್ತು ಜ್ಞಾನಪೂರ್ವಕವಾಗಿ ಸ್ತುತಿಸುತ್ತಾರೋ, ಯಾರು "ನಾನು ನಿನ್ನವನು" ಎಂದು ಸಂಪೂರ್ಣ ಶರಣಾಗುತ್ತಾರೋ, ಅಂತಹ ಮನುಷ್ಯರು ಈ ಭೂಮಿಯ ಮೇಲೆ ಅತ್ಯಂತ ಧನ್ಯರು. ಸುಂದರ ಮೂರ್ತಿಯಾದ ವಿಜಯವಿಠ್ಠಲನ ಕೃಪೆಗೆ ಅವರು ಪಾತ್ರರಾಗುತ್ತಾರೆ ಎಂಬುದು ಸತ್ಯ.
3. ತ್ರಿವಿಡಿತಾಳ: ಅವತಾರ ಮತ್ತು ಮಹಿಮೆ
ಚಂದ್ರವಂಶದಲ್ಲಿ ದೀರ್ಘತಮನ ಪುತ್ರನಾಗಿ ಬಂದವನೇ, ಚಂದ್ರನಂತೆ ಪ್ರಕಾಶಿಸುವ ಪ್ರಭುವೇ! ಅಮೃತ ಕಲಶವನ್ನು ಕೈಯಲ್ಲಿ ಹಿಡಿದು ಕಮಲದಂತಹ ಕಣ್ಣುಳ್ಳವನೇ ನಿನಗೆ ನಮಸ್ಕಾರ. ಸಮುದ್ರ ಮಥನದ ಸಮಯದಲ್ಲಿ ದೇವತೆಗಳು ಮತ್ತು ಅಸುರರು ಮಂದರ ಪರ್ವತವನ್ನು ತಂದು ಕಡಿಯುತ್ತಿರುವಾಗ, ನೀನು ಅಮೃತದ ಪಾತ್ರೆಯನ್ನು ಹಿಡಿದು ಮಂದಹಾಸದಿಂದ ಉದ್ಭವಿಸಿದೆ. ಬ್ರಹ್ಮ, ರುದ್ರ ಮೊದಲಾದ ದೇವತೆಗಳು ನಿನ್ನನ್ನು ಕೊಂಡಾಡುತ್ತಾರೆ. ಹತ್ತು ದಿಕ್ಕುಗಳಲ್ಲಿ ಬೆಳಗುವ ವೈದ್ಯರಾಜ ವಿಜಯವಿಠ್ಠಲನೇ, ನಮ್ಮ ಇಂದ್ರಿಯಗಳ ರೋಗವನ್ನು ಗುಣಪಡಿಸು.
4. ಅಟ್ಟತಾಳ: ಸ್ವರೂಪ ವರ್ಣನೆ
ಅಜ್ಞಾನ ಮತ್ತು ತಮೋಗುಣವನ್ನು ನಾಶಮಾಡುವ ಧನ್ವಂತರಿಯೇ ನಿನಗೆ ಶರಣು. ಸಂಸಾರದ ತಾಪವನ್ನು ಹರಿಸುವವನೇ, ಪೂರ್ಣಬ್ರಹ್ಮನೇ ನಿನಗೆ ಶರಣು. ಶೇಷಶಾಯಿಯಾದ ನಿನ್ನ ತಲೆಯ ಮೇಲಿರುವ ಕಿರೀಟ, ಕಿವಿಯ ಕುಂಡಲಗಳು, ಕೈಯ ಕಂಕಣಗಳು ಮತ್ತು ಪೀತಾಂಬರವು ಮಿನುಗುತ್ತಿವೆ. ಜ್ಞಾನಮುದ್ರೆಯನ್ನು ಧರಿಸಿದ ನಿನ್ನ ಹಸ್ತಗಳು ನಮ್ಮನ್ನು ಉದ್ಧರಿಸಲಿ.
5. ಆದಿತಾಳ: ಸದಾ ಸ್ಮರಣೆಯ ಫಲ
ಮನುಷ್ಯನು ಏಳುವಾಗ, ತಿರುಗುವಾಗ, ಬೀಳುವಾಗ, ಕುಳಿತುಕೊಳ್ಳುವಾಗ, ಮಾತನಾಡವಾಗ ಅಥವಾ ಕೆಲಸ ಮಾಡುವಾಗ ಸದಾ ನಿನ್ನನ್ನೇ ಸ್ಮರಿಸಬೇಕು. ಷಡ್ರಸ ಅನ್ನವನ್ನು ಉಣ್ಣುವಾಗಲಿ, ಮಕ್ಕಳೊಂದಿಗೆ ಆಟವಾಡುವಾಗಲಿ ನಾಲಿಗೆಯ ತುದಿಯಲ್ಲಿ "ಧನ್ವಂತರಿ" ಎಂಬ ನಾಮವಿರಲಿ. ಕಾಲ-ಅಕಾಲ ಎನ್ನದೆ ಯಾರು ಸ್ಮರಿಸುತ್ತಾರೋ, ಅವರಿಗೆ ಕಾಲಕಾಲಕ್ಕೆ ಬರುವ ಸಂಸಾರದ ತೊಂದರೆಗಳು ನೀಗುತ್ತವೆ. ಮೇಘಶ್ಯಾಮನಾದ ವಿಜಯವಿಠ್ಠಲನು ಅಂತಹ ಭಕ್ತರಿಗೆ ಮುಕ್ತರ ಸಂಘವನ್ನು (ಮೋಕ್ಷವನ್ನು) ನೀಡುತ್ತಾನೆ.
ಜತೆ: ಮುಕ್ತಾಯ
ಓಂಕಾರ ಪೂರ್ವಕವಾಗಿ (ಪ್ರಣವ ಪೂರ್ವಕ) "ಧಂ ಧನ್ವಂತರಿ" ಎಂದು ಯಾರೂ ವಂದಿಸಿ ನೆನೆಯುತ್ತಾರೋ, ಅವರಿಗೆ ಶ್ರೀ ವಿಜಯವಿಠ್ಠಲನು ಒಲಿಯುತ್ತಾನೆ.
***
This Dhanvantari Suladi, composed by the great saint Shri Vijaya Dasa, is a powerful prayer for both spiritual and physical well-being. Here is the summary and the verse-by-verse (para-wise) English translation:
Summary
In this Suladi, Vijaya Dasa extols Lord Dhanvantari (an incarnation of Lord Vishnu) as the Supreme Physician. The hymn explains how the seeds of various diseases, rooted in one's past karma and the sorrows of worldly existence (Samsara), can be eradicated simply by chanting the name "Dhanvantari." Describing the Lord’s emergence during the churning of the ocean with the pot of nectar (Amrita), the poet emphasizes that remembering Him while eating, walking, or resting ensures the destruction of the cycle of birth and death, leading to ultimate liberation.
English Meaning (Para-wise)
1. Dhruva Tala: The Source of Longevity and Purity
Chanting the name of Dhanvantari increases one's lifespan and brings auspiciousness (Shreyas). It is the primary cause for the purification of the body. This divine name swiftly burns away the seeds of various diseases and pushes back the veil of Maya (illusion). We have suffered in the ocean of misery, taking lowly births (like that of a dog) due to past bad deeds (Dushkarma). In such a state, if one calls out to the Supreme Physician, Shri Dhanvantari, the Lord protects us just as a mother rushes to care for her child. He is the one who grants well-being even to the gods. May that Vijayavitthala, worshipped by the Wind-god (Vayu), destroy our eternal disease of worldly attachment.
2. Matta Tala: The State of Blessedness
Continuously praise Him with the knowledge of His supremacy. Those who remember Him with the firm conviction, "I am Yours, I am Yours," are the truly blessed ones in this world. One must describe the glory of the beautiful and graceful Vijayavitthala in various ways, for He is the ultimate Truth.
3. Trivida Tala: The Incarnation and Glory
O Lord, born in the lunar dynasty as the son of Dirghatamas! O moon-colored, radiant Master! You reside in the orb of the moon, holding the Kalasha (pot of nectar) in Your hand. O lotus-eyed one, worshipped by the Ashwini Kumaras (the celestial physicians)! When the gods and demons gathered to churn the great ocean using the Mandara mountain, You emerged with a gentle smile, carrying the pot of nectar (Piyusha). O peerless God, sages like Brahma and Rudra sing Your praises. O Vijayavitthala, the Great Physician who shines in all ten directions, cure the ailments of our life-force (Asu) and senses.
4. Atta Tala: Description of the Divine Form
I surrender to You, O Dhanvantari, the destroyer of the quality of ignorance (Tamas). I surrender to the protector of those in distress. You are the one who removes the heat of worldly existence and the illusion caused by the demons. You are the Supreme Brahman, the Valiant Upholder, reclining on the serpent Shesha. You are adorned with a magnificent crown, gem-studded earrings, shimmering bracelets, and necklaces. Clad in golden yellow silk (Pitambara) with the Srivatsa mark on Your chest, Your hand is held in the Jnana Mudra (the gesture of knowledge).
5. Adi Tala: The Power of Constant Remembrance
Whether you are waking up, moving around, falling, standing, or sitting; whether you are speaking, listening, or performing your daily duties; whether you are living your life or enjoying a meal of six flavors with your family—let the name "Dhanvantari" be on the tip of your tongue. If one remembers Him at all times, the seeds of the cycle of birth and death are destroyed. The cloud-complexioned Vijayavitthala will grant such a person the company of liberated souls (Muktas) in His divine court.
Jate: Conclusion
By saluting and remembering the Lord with the sacred syllable "Om" (Pranava) followed by "Dham Dhanvantariye Namaha," Shri Vijayavitthala is easily pleased and showers His grace.
***
ರಾಗ – ಭೈರವಿ ತಾಳ – ಧ್ರುವ
ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದು
ಕಾಯಾ ನಿರ್ಮಲಿನಾ ಕಾರಣವಾಹದೋ
ಮಾಯಾ ಹಿಂದಾಗುವದು ನಾನಾ ರೋಗದ ಬೀಜ
ಬೇಯಿಸಿ ಕಳೆವದು ವೇಗದಿಂದ
ನಾಯಿ ಮೊದಲಾದ ಕುತ್ಸಿತ ದೇಹ ನಿ-
ಕಾಯವಾ ತೆತ್ತು ದುಷ್ಕರ್ಮದಿಂದ
ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯ ಸಾಗರದೊಳು ಬಿದ್ದು ಬಳಲೀ
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ
ಬಾಯಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ
ರಾಯಾ ರಾಜೌಷಧಿ ನಿಯಾಮಕಕರ್ತ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನ್ನು ಪಾಲಿಪಾ-
ಧ್ಯೇಯಾ ದೇವಾದಿಗಳಿಗೆ ಧರ್ಮಜ ಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ-
ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ
ವಾಯುವಂದಿತ ನಿತ್ಯ ವಿಜಯ ವಿಟ್ಠಲರೇಯಾ
ಪ್ರಿಯನು ಕಾಣೋ ನಮಗೆ ಅನಾದಿ ರೋಗ ಕಳೆವಾ || 1 ||
ತಾಳ – ಮಟ್ಟ
ಧನ್ವಂತ್ರಿ ಶ್ರೀಧನ್ವಂತ್ರಿ ಎಂದು
ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ
ನಿನ್ನವ ನಿನ್ನವನೋ ಘನ್ನತಿಯಲಿ ನೆನೆದ
ಮನ್ನೂಜ ಭುವನದೊಳು ಧನ್ಯನು ಧನ್ಯನೆನ್ನಿ
ಚೆನ್ನಮೂರುತಿ ಸುಪ್ರಸನ್ನ ವಿಜಯ ವಿಠ್ಠ-
ಲನ್ನಸತ್ಯವೆಂದು ಬಣ್ಣಿಸು ಬಹು ವಿಧದಿ || 2 ||
ತಾಳ – ತ್ರಿವಿಡಿ
ಶಶಿಕುಲೋದ್ಭವ ದೀರ್ಘತಮ ನಂದನ ದೇವಾ
ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯ ವಂದ್ಯಾ
ಶಶಿಗರ್ಭ ಭೂರುಹ ಲತೆ ಪೂದೆ ತಾಪ ಓ-
ಡಿಸುವೌಷಧಿ ತುಲಸಿ ಜನಕ
ಅಸುರ ನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದಲೆ ಮಹೋದಧಿ ಮರ್ದಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷ ಘಟ ಧರಿಸಿ
ಅಸಮ ದೈವನೆ ನಿನ್ನ ಮಹಿಮೆಗೆ ನಮೋ
ಬಿಸಜ ಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವರೊ
ದಶದಿಶದೊಳು ಮೆರೆವ ವಿಜಯವಿಠ್ಠಲ ಭಿಷ್ಕಾ
ಅಸು ಇಂದ್ರಿಯಂಗಳ ರೋಗ ನಿವಾರಣ || 3 ||
ತಾಳ – ಆಟ
ಶರಣು ಶರಣು ಧನ್ವಂತರಿ ತಮೋಗುಣ ನಾಶಾ
ಶರಣು ಆರ್ತಜನ ಪರಿಪಾಲಕ ದೇವಾ
ತರುವೆ ಭವ ತಾಪ ತರುಣ ದಿತಿಸುತ
ಹರಣ ಮೋಹಕ ಲೀಲಾ ಪರಮ
ಪೂರ್ಣ ಬ್ರಹ್ಮಬ್ರಹ್ಮ ಉದ್ಧಾರಕ
ಉರುಪರಾಕ್ರಮ ಉರಗಶಾಯಿ
ವರಕಿರೀಟ ಮಹಾಮಣಿ ಕುಂಡಲಕರ್ಣ
ಮಿರುಗುವ ಹಸ್ತ ಕಂಕಣ ಹಾರಪದಕ ತಾಂ-
ಬರ ಕಾಂಚಿ ಪೀತಾಂಬರ ಚರಣಭೂಷಾ
ಸಿರಿವತ್ಸಲಾಂಛನ ವಿಜಯ ವಿಟ್ಠಲರೇಯಾ
ತರುಣಗಾತರ ಜ್ಞಾನ ಮುದ್ರಾಂಕಿತ ಹಸ್ತಾ || 4 ||
ತಾಳ – ಆದಿ
ಏಳುವಾಗಲಿ ಮತ್ತೆ ತಿರುಗಿ ತಿರುಗುತಲಿ
ಬೀಳುವಾಗಲಿ ನಿಂತು ಕುಳಿತಿರುವಾಗಲಿ
ಹೇಳುವಾಗಲಿ ಮಾತು ಕೇಳುವಾಗಲಿ ಕರೆದು
ಪೇಳುವಾಗಲಿ ಪೋಗಿ ಸತ್ಕರ್ಮ ಮಾಡುವಾಗ
ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ-
ಮ್ಮೇಳವಾಗಲಿ ಮೇಲು ಪುತ್ರಾದಿ ಒಡೆಯೊಡನೆ
ಖೇಳವಾಗಿ ಮನುಜ ಮರ್ಯಾದೆ ನಿನ್ನಯ
ನಾಲಿಗೆ ಕೊನೆಯಲ್ಲಿ ಧನ್ವಂತರಿ ಎಂದು ಒಮ್ಮೆ
ಕಾಲ ಅಕಾಲದಲ್ಲಿ ಸ್ಮರಿಸಿದರೆ ಅವಗೆ
ವ್ಯಾಳಿ ವ್ಯಾಳಿಗೆ ಬಾಹ ಭವಬೀಜ ಪರಿಹಾರ
ನೀಲಮೇಘಶ್ಯಾಮ ವಿಜಯ ವಿಠ್ಠಲರೇಯಾ
ವಾಲಗ ಕೊಡುವನು ಮುಕ್ತರ ಸಂಗದಲ್ಲಿ || 5 ||
ಜತೆ
ಧಂ ಧನ್ವಂತರಿ ಎಂದು ಪ್ರಣವ ಪೂರ್ವಕದಿಂದ
ವಂದಿಸಿ ನೆನೆಯಲು ವಿಜಯವಿಠ್ಠಲವೊಲಿವಾ || 6 ||
******
ಲಘುಟಿಪ್ಪಣಿ :
ಧ್ರುವತಾಳ :
ಕಾಯನಿರ್ಮಲಿನ = ಶರೀರದ ಶುದ್ಧಿಗೆ ;
ನಿಕಾಯ = ಗುಂಪು ;
ಓಷಧಿನಿಯಾಮಕ = ಸ ಜ್ಯಾಯಾನ್ ಸರ್ವಭೂತೇಭ್ಯಸ್ತಸ್ಮಾತ್ಸರ್ವೌಷಧಂ ಸ್ಮೃತಃ । ಸಂಸಾರೇ ದಹ್ಯಮಾನಾನಾಮಾಶ್ರಯತ್ವಾತ್ಸ ಔಷಧಮ್ ॥
ಶ್ರೀಹರಿಯು ಸರ್ವಭೂತಗಳಲ್ಲಿಯೂ ಶ್ರೇಷ್ಠನಾದುದರಿಂದ " ಸರ್ವೌಷಧ "ನೆಂದು ಪ್ರಸಿದ್ಧನಾಗಿದ್ದಾನೆ. ಸಂಸಾರತಾಪದಿಂದ ಸುಟ್ಟು ಬಳಲುವವರಿಗೆ ಅತ್ಯಂತ ಆಶ್ರಯನಾದುದರಿಂದಲೂ ಆತನು " ಔಷಧ " ರೂಪನಾಗಿದ್ದಾನೆ. (ತೈತ್ತರೀಯಭಾಷ್ಯ)
ರಾಜೌಷಧಿನಿಯಾಮಕ = ಚಂದ್ರನ ಅಂತರ್ಯಾಮಿಯಾಗಿದ್ದು , ಔಷಧಿಗಳಿಗೆ ನಿಯಾಮಕ ;
ಮಾಯಾಮಂತ್ರದಿಂದ = ಆಭಿಚಾರಿಕ ಕೃತ್ಯಗಳಿಂದ ;
ಸನ್ಯಾಯವಂತನಾಗಿ = ಸುಜನರಿಗೆ ಬಾಧೆಯಾಗದಂತೆ ;
ತ್ರಿವಿಡಿತಾಳ :
ಕಲಶ ಕಲಶಪಾಣಿ = ನೀರು ಬಡಿಸುವ ಒಂದು ಕಲಶ . ಇನ್ನೊಂದು ಅಮೃತಪೂರಿತ ಕಲಶ ಉಳ್ಳವ ;
ಅಶ್ವಿನೇಯ = ಅಶ್ವಿನೀದೇವತೆಗಳು ;
ಭಿಷ್ಕ = ಭಿಷಕ್ = ವೈದ್ಯ ;
ಅಸು ಇಂದ್ರಿಯಗಳ = ಪ್ರಾಣೇಂದ್ರಿಯಗಳ;
ಅಟ್ಟತಾಳ :
ಬ್ರಹ್ಮಉದ್ಧಾರಕ = ಬ್ರಹ್ಮ - ವೇದ ಅಂದರೆ ಆಯುರ್ವೇದ(ಉಪವೇದ) ಅಂತ ಅಭಿಪ್ರಾಯ ; ವೇದಸ್ತತ್ವಂ ತಪೋ ಬ್ರಹ್ಮ - ಅಮರಕೋಶ.
ಆದಿತಾಳ :
ಖೇಳ = ಮಾತುಕಥೆ - ವಿನೋದಗೋಷ್ಠಿ ;
ವಾಲಗ = ಸೇವೆ ;
ಬಾಳುವಾಗಲಿ =
(1) ಹರಕೆಯನ್ನು ಹೊತ್ತು ಅದನ್ನು ಪೂರೈಸಲೋಸುಗ ತಿರುಪತಿಯ ಶ್ರೀನಿವಾಸನ ದರ್ಶನಕ್ಕೆ ಹೋಗುವಾಗ ಸತ್ಪಾತ್ರರಿಗೆ ಕೊಡುವ ಭೋಜನಕ್ಕೆ ' ಬಾಳು ' ಎಂದು ಹೆಸರು.
(2) ಸಾರ್ಥಕವಾದ ದೀರ್ಘಾಯುಷ್ಯವುಳ್ಳವನಾಗಿ ' ಬಾಳು ' ಎಂದು ಆಶೀರ್ವಾದ ಮಾಡುವಾಗ ;
ವಿವರಣೆ :
ಹರಿದಾಸರತ್ನಂ ಶ್ರೀಗೋಪಾಲದಾಸರು
*******
************
ಧನ್ವಂತರಿ ಸುಳಾದಿ
ರಚನೆ - ವಿಜಯದಾಸರು
ಧ್ರುವ ತಾಳ
/-b/>
ಆಯುವೃದ್ದಿಯಾಗುವುದು ಶ್ರೇಯಸ್ಸು ಬರುವುದು
ಕಾರ್ಯನಿರ್ಮಲಿನ ಕಾರಣವಾಗುವುದು.
ಮಾಯಾ ಹಿಂದಾಗುವುದು ನಾನಾ ರೋಗದ ಬೀಜ
ಬೇಯಿಸಿ ಕಳೆವುದು ವೇಗದಿಂದ
ನಾಯಿ ಮೊದಲಾದ ಕುತ್ಸಿತ ದೇಹ ನಿ-
ಕಾಯವಾಯಿತು ದುಷ್ಕರ್ಮದಿಂದ
ಕ್ರಿಯಾಮಾಣಸಂಚಿತ ಭರಿತವಾಗಿದ್ದ ದುಃಖ
ಹೇಯಸಾಗರದೊಳು ಬಿದ್ದು ಬಳಲಿ,
ನೋಯಿಸಿಕೊಂಡು, ನೆಲೆಗಾಣದೆ, ಒಮ್ಮೆ ತನ್ನ
ಬಾಯಲ್ಲಿ ವೈದ್ಯಮೂರ್ತಿ ಧನ್ವಂತರಿ
ರಾಯರಾ ಔಷಧಿ ನಿಯಮಕರ್ತಾ
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನು ಪಾಲಿಪ-
ನಯ್ಯ, ದೇವಾದಿಗಳಿಗೆ ಧರ್ಮಜ್ಞಗುಣ ಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ.
ಮಾಯಾಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ-
ನ್ನ್ಯಾಯವಂತನಾಗಿ ಚೇಷ್ಟೆ ಮಾಳ್ಪ-
ವಾಯುವಂದಿತ ನಿತ್ಯ ವಿಜಯವಿಠಲರೇಯ
ಪ್ರೀಯನು ಕಾಣೋ ನಮಗೆ ಅನಾದಿರೋಗ ಕಳೆವ ||೧||
ಮಟ್ಟ ತಾಳ/-b/>
ಧನ್ವಂತರಿ ಶ್ರೀ ಧನ್ವಂತರಿ ಎಂದು
ಸನ್ನುತಿಸಿ ಸತತಾವಿಚ್ಚಿನ್ನ ಜ್ಞಾನದಿಂದ
ನಿನ್ನವ ನಿನ್ನವನೆಂದು ಘನತೆಯಲಿ ನೆನೆವ
ಮನುಜ ಭುವನದೊಳು ಧನ್ಯನು ಧನ್ಯನೆನ್ನಿ
ಘನ್ನ ಮೂರುತಿ ಒಲಿವ ವಿಜಯವಿಠಲ ಸುಪ್ರ
ಸನ್ನ ಸತ್ಯನೆಂದು ಬಣ್ಣಿಸು ಬಹುವಿಧದಿ ||೨||
ತ್ರಿಪುಟ ತಾಳ /-b/>
ಶಶಿಕುಲೋದ್ಭವ ದೀರ್ಘಾತಮ ನಂದನ ದೇವ,
ಶಶಿವರ್ಣಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯವಂದ್ಯ
ಶಶಿಗರ್ಭ ಭೂರುಹ ಲತೆ ತಾಪ ಓಡಿಸುವ
ಔಷಧಿ ತುಳಸಿಜನಕ ವಾಸುದೇವ
ಅಸುರ ನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದೆ ಮಹೋದಧಿ ಮಥಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷಘಟ ಧರಿಸಿ.
ಅಸಮದೈವವೆ ನಿನ್ನ ಮಹಿಮೆಗೆ ನಮೋ ನಮೋ
ಬಿಸಜಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವುದು
ದಶದಿಶದಲಿ ಮೆರೆವ ವಿಜಯವಿಠಲ ಭಿಷಕು
ಅಸು ಇಂದ್ರಿಯಂಗಳ ರೋಗನಿವಾರಣ ||೩||
ಅಟ್ಟತಾಳ /-b/>
ಶರಣು ಶರಣು ಧನ್ವಂತರಿ ತಮೋಗುಣನಾಶ,
ಶರಣು ಆರ್ತಜನಪರಿಪಾಲಕ, ದೇವ
ತರುವೇ, ಭವತಾಪಹರಣ, ದಿತಿಸುತ
ಹರಣ ಮೋಹಕಲೀಲಾ ಪರಮ
ಪೂರಣ ಬ್ರಹ್ಮ, ಬ್ರಹ್ಮ ಉದ್ಧಾರಕ
ಉರುಪರಾಕ್ರಮ ಉರುಕ್ರಮ ಉರಗಶಾಯಿ
ವರಕಿರೀಟ, ಮಹಾಮಣಿ ಕುಂಡಲಕರ್ಣ,
ಮಿರುಗುವ ಹಸ್ತಕಂಕಣ, ಹಾರಪದಕ,
ವರಗಾಂಚಿಪೀತಾಂಬರ, ಚರಣಭೂಷಾ,
ಸಿರಿವತ್ಸಲಾಂಛನ ವಿಜಯವಿಟಲರೇಯ
ತರಣಿಗಾತರ, ಜ್ಞಾನಮುದ್ರಾಂಕಿತಹಸ್ತ ||೪||
ಆದಿತಾಳ/-b/>
ಏಳುವಾಗಲಿ, ಮತ್ತೆ ತಿರುಗುವಾಗಲಿ,
ಬೀಳುವಾಗಲಿ ನಿಂದು ಕುಳ್ಳಿರುವಾಗಲಿ
ಹೇಳುವಾಗಲಿ, ಪೋಗಿ ಸತ್ಕರ್ಮ ಮಾಡುವಾಗಲಿ,
ಬಾಳುವಾಗಲಿ, ಭೋಜನ ನಾನಾ ಷಡ್ರಸ ಸ
ಮ್ಮೇಳವಾಗಲಿ, ಮತ್ತೆ ಪುತ್ರಾದಿಗಳೊಡನೆ
ಖೇಳವಾಗಲಿ ಮನುಜ ಮರೆಯದೆ ಒಮ್ಮೆ ತನ್ನ
ನಾಲಗೆ ಕೊನೆಯಲ್ಲಿ ಧನ್ವಂತರಿ ಎಂದು
ಕಾಲ ಅಕಾಲದಲ್ಲಿ ಸ್ಮರಿಸದರೆ ಅವಗೆ
ವ್ಯಾಳೆವ್ಯಾಳೆಗೆ ಬಾಹೋ ಭವಬೀಜ ಪರಿಹಾರ
ವಾಲಗ ಕೊಡುವನು ಮುಕ್ತರ ಸಂಗದಲ್ಲಿ ||೫||
ಜೊತೆ/-b/>
ಧಂ ಧನ್ವಂತರಿ ಎಂದು ಪ್ರಣವಪೂರ್ವಕದಿಂದ
ವಂದಿಸಿ ನೆನೆಯಲು ಸಿರಿ ವಿಜಯವಿಠಲ ಒಲಿವ ||
*****
just scroll down for other devaranama and suladi
