Showing posts with label ರಕ್ಷಿಸೆನ್ನನು ನಿರುತ ನರಮೃತನಾಥ shyamasundara. Show all posts
Showing posts with label ರಕ್ಷಿಸೆನ್ನನು ನಿರುತ ನರಮೃತನಾಥ shyamasundara. Show all posts

Wednesday 1 September 2021

ರಕ್ಷಿಸೆನ್ನನು ನಿರುತ ನರಮೃತನಾಥ ankita shyamasundara

 ..

ನರಸಿಂಹ ದೇವರು


ರಕ್ಷಿಸೆನ್ನನು ನಿರುತ ನರಮೃತನಾಥ ಪ


ರಕ್ಷಿಸೆನ್ನ ಜಗತ್ಕುಕ್ಷಿಯೆ ಕರುಣಾಕ

ಟಾಕ್ಷದಿಂದೀಕ್ಷಿಸಿ ತ್ರ್ಯಕ್ಷಾಂತರ್ಗತದೇವ ಅ.ಪ


ಪತಿತಪಾವನ ಪರಶತ ಮೋದಗತ ಬೇದ

ಚತುರ್ವೇದ ಪಾಲ ಶತಕ್ರತು ಕೃತಿನಾಥ ||

ಯತಿ ತತಿ ಮಾನಸವೃತ ತೇಜ ಭಾಸ್ಕರ

ಸತತ ನಿನ್ನಯ ಪಾದವ | ಸದ್ಭಕುತಿಯಲಿ

ಸ್ತುತಿಪ ದಾಸರ ಸಂಗವ | ಗರೆದು ಭವ

ವ್ಯಥೆಯ ಬಿಡಿಸಿ | ಮಾಧವ ನೀನೊಲಿದತಿ

ಹಿತದಿಂದುಣಿಸು ನಿನ್ನ ಕಥೆ ಸುಧಾರಸವ 1


ಅರಿದರ ಗದಾಪದ್ಮಧರ ಚತುಷ್ಟಯಕರ

ಶರಚರಗಿರಿ ಧೃತ ಧರಣ ತಸ್ಕರ ಹರ

ನರಗಾತ್ರ ಹರಿವಕ್ರ ಸುರಪಾನುಜವಟು

ಪರಶುಪಾಣಿಯೆ ವಾನರ ನರಪಾಲಕವಿgಹಿÀ ತಾಂ

ಬರಕಲ್ಕಿ ಶರಣ ಜನರು ಭಕ್ತಿಪರವಶದಲಿ ಕೂಗಿ

ಕರೆಯಲಾಕ್ಷಣ ಓ ಎಂದು ಭರದಿ ಬಂದು

ಪೊರೆವ ಪ್ರಭು ನೀ ಎಂದು ಬುಧರು ಪೇಳ್ವ

ವರವಾಕ್ಯ ಮನಕೆ ತಂದು ಪ್ರಾರ್ಥಿಪೆ ನಿನ್ನ

ಚರಿತೆ ಪಾಡುವ ಸುಖಗರಿಯೊ ಬಂಧು 2


ಸಿಂಧುರ ವರದಾತ ಸಿಂಧು ಶಯನ ಶಾಮ

ಸುಂದರ ವಿಠಲ ಇಂದಿರಾತ್ಮಕ ತ್ರಯ

ಮಂದಿರ ಕಾರ್ಪರ ಮಂದಿರ ತರುರಾಜ

ಮಂದಿರ ದ್ವಿಜ ಮಧ್ಯ ಮಂದಿರಾತ್ಮಜ ಹೃ

ನ್ಮಂದಿರ ಸದ್ಧಕ್ತ ಮಂದಾರ ಭೂರುಹ3

***