Showing posts with label ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ vijaya vittala. Show all posts
Showing posts with label ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ vijaya vittala. Show all posts

Wednesday 16 October 2019

ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ ankita vijaya vittala

ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ
ನಿತ್ಯ ಕಲ್ಯಾಣಿ ಪ

ಹರಜಡಿಯಲಿ ಜನಿಸಿ ಹರಿಪಾದ ಜಲವೆನಿಸಿ
ಮುರಹರನ ವರ್ಣ ಪೆಸರವನೇ ಪೊತ್ತು
ಧರೆಯೊಳಗೆ ಮಹಾಬಳೇಶ್ವರದಲ್ಲಿ ನೆಲೆಯಾಗಿ
ಪೊರಿದೆ ಶರಣಾಗತರ ದುರಿತಗಳ ತರಿದೆ 1

ದೋಷರಹಿತಾಥೆರೆಯೊಳು ಸಾಸಿರ ಭಾಗದಲಿ
ಆ ಸಲಿಲ ಬಿಂದು ಪವಮಾನ ಬಂದೂ
ಬೀಸಿದಾ ಸಮಯದಲಿ ಜೀವರಾಸಿಯ ಮೇಲೆ
ಕ್ಲೇಶ ಶೋಕ ವಿನಾಶ 2

ಅಷ್ಟಾರ್ಥಮಾಸ ಕೃಷ್ಣಪಕ್ಷ ಚತುರ್ದಶಿ
ಕೃಷ್ಣವಾರ ವಿಷ್ಣು ತಾರೆಯಲ್ಲೀ
ಕೃಷ್ಣಕೃಷ್ಣಾ ಎಂದು ನಿಷ್ಠೆಯಿಂದಲಿ ಮನ
ಮುಟ್ಟಿ ಸ್ನಾನವ ಮಾಡೆ ಕಷ್ಟ ಪರಿಹರಿಪ 3

ಕಪಟ ಸಂಗಮಛಾಯಾ
ಶ್ರೀ ಶೈಲ ವರ ಚತುಸ್ಥಾನಗಳಲಿ ವಾಸಮಾಡಿ ಇರಲು
ಕ್ತರನು ಮಾಡಿ ಪೊರದೇ 4

ಕಲಿಯುಗದಿ ಕೃಷ್ಣಾ ಸ್ನಾನ ಕೃಷ್ಣ ಸ್ಮರಣಿ ವೆ
ಸತಿ ಪೊಗಳಲು
ಸಿರಿ ವಿಜಯವಿಠ್ಠಲ ಕಾಣಿಸಿದಿಯಾ5
***

jaya kRuShNavENi durjanara ganTalagANi
nI tamataguNa SrENi nitya kalyANi ||pa||

harajaDiyali janisi haripAda jalavenisi
muraharana varNa pesaravanE pottu
dhareyoLage mahAbaLESvaradalli neleyAgi
poride SaraNAgatara duritagaLa taride ||1||

dOSharahitAthereyoLu sAsira BAgadali
A salila biMdu pavamAna bandU
bIsidA samayadali jIvarAsiya mEle
sUsi bILalu klESa SOka vinASa ||2||

aShTArthamAsa kRuShNapakSha caturdaSi
kRuShNavAra viShNu tAreyallI
kRuShNakRuShNA endu niShTheyindali mana
muTTi snAnava mADe kaShTa pariharipa ||3||

sUrapAli kapaTa sangamaCAyA
SrI Saila vara catusthAnagaLali vAsamADi iralu
vAraNASiya Palagaredu jIvanmu
ktaranu mADi poradE ||4||

kaliyugadi kRuShNA snAna kRuShNa smaraNi ve
ggaLaveMdu ajana sati pogaLalu
jalanidhiya uBayamuKadali kUDi
Baktarige^^olidu siri vijayaviThThala kANisidiyA||5||
***

ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ
ನೀ ತಮತಗುಣ ಶ್ರೇಣಿ ನಿತ್ಯ ಕಲ್ಯಾಣಿ ||pa||

ಹರಜಡಿಯಲಿ ಜನಿಸಿ ಹರಿಪಾದ ಜಲವೆನಿಸಿ
ಮುರಹರನ ವರ್ಣ ಪೆಸರವನೇ ಪೊತ್ತು
ಧರೆಯೊಳಗೆ ಮಹಾಬಳೇಶ್ವರದಲ್ಲಿ ನೆಲೆಯಾಗಿ
ಪೊರಿದೆ ಶರಣಾಗತರ ದುರಿತಗಳ ತರಿದೆ ||1||

ದೋಷರಹಿತಾಥೆರೆಯೊಳು ಸಾಸಿರ ಭಾಗದಲಿ
ಆ ಸಲಿಲ ಬಿಂದು ಪವಮಾನ ಬಂದೂ
ಬೀಸಿದಾ ಸಮಯದಲಿ ಜೀವರಾಸಿಯ ಮೇಲೆ
ಸೂಸಿ ಬೀಳಲು ಕ್ಲೇಶ ಶೋಕ ವಿನಾಶ ||2||

ಅಷ್ಟಾರ್ಥಮಾಸ ಕೃಷ್ಣಪಕ್ಷ ಚತುರ್ದಶಿ
ಕೃಷ್ಣವಾರ ವಿಷ್ಣು ತಾರೆಯಲ್ಲೀ
ಕೃಷ್ಣಕೃಷ್ಣಾ ಎಂದು ನಿಷ್ಠೆಯಿಂದಲಿ ಮನ
ಮುಟ್ಟಿ ಸ್ನಾನವ ಮಾಡೆ ಕಷ್ಟ ಪರಿಹರಿಪ ||3||

ಸೂರಪಾಲಿ ಕಪಟ ಸಂಗಮಛಾಯಾ
ಶ್ರೀ ಶೈಲ ವರ ಚತುಸ್ಥಾನಗಳಲಿ ವಾಸಮಾಡಿ ಇರಲು
ವಾರಣಾಶಿಯ ಫಲಗರೆದು ಜೀವನ್ಮು
ಕ್ತರನು ಮಾಡಿ ಪೊರದೇ ||4||

ಕಲಿಯುಗದಿ ಕೃಷ್ಣಾ ಸ್ನಾನ ಕೃಷ್ಣ ಸ್ಮರಣಿ ವೆ
ಗ್ಗಳವೆಂದು ಅಜನ ಸತಿ ಪೊಗಳಲು
ಜಲನಿಧಿಯ ಉಭಯಮುಖದಲಿ ಕೂಡಿ
ಭಕ್ತರಿಗೆಒಲಿದು ಸಿರಿ ವಿಜಯವಿಠ್ಠಲ ಕಾಣಿಸಿದಿಯಾ||5||
***