Showing posts with label ತಂಬೂರಿ ಹಿಡಿಸಿದನು ಅಂಬುಜಾಕ್ಷನು ದಯದಿ krishnavittala. Show all posts
Showing posts with label ತಂಬೂರಿ ಹಿಡಿಸಿದನು ಅಂಬುಜಾಕ್ಷನು ದಯದಿ krishnavittala. Show all posts

Monday 2 August 2021

ತಂಬೂರಿ ಹಿಡಿಸಿದನು ಅಂಬುಜಾಕ್ಷನು ದಯದಿ ankita krishnavittala

ತಂಬೂರಿ ಹಿಡಿಸಿದನು ಪ

ಅಂಬುಜಾಕ್ಷನು ದಯದಿ ಅ.ಪ


ನಂಬೀದ ಜನರಿಗೆ ಬೆಂಬಲ ತಾನೆಂಬ

ನಂಬಿಕೆ ಹೃದಯದಿ ತುಂಬುತ ತಾನೀಗ 1


ಆಶಾ ಪಾಶಕೆ ಸಿಲುಕಿ ಬೇಸತ್ತು ಬೆಂಡಾಗಿ

ಮೋಸ ಹೋಗುತ್ತಲಿದ್ದೆ ಶ್ರೀಶ ದಯಾಂಬುಧಿ 2


ಹುಟ್ಟಿದ ದಿನದಿಂದ ಕಷ್ಟದಲ್ಲೇ ಬಂದೆ

ಮುಟ್ಟಲಿದನು ಈಗ ಸಂತುಷ್ಟಿಯ ಕಂಡೆನು 3


ಕಾಡಿ ಬೇಡುವರಿಲ್ಲ ನಾಡೆಲ್ಲ ನಮ್ಮದೇನೆ

ನೀಡುವ ದೊರೆ ಒಬ್ಬ ಈಡಿಲ್ಲದವನಾತ 4


ಸ್ಮರಣೆ ಒಂದೇ ವಿಧಿ ವಿಸ್ಮರಣೆ ನಿಷೇಧ

ಹರಿನಾಮ ಸುಧೆಯನ್ನು ಕರೆದು ಕರೆದು ಕುಡಿವೆ5


ತಂಬೂರಿ ಸಿಗುವುದು ತುಂಬ ಭಾಗ್ಯವು ಸತ್ಯ

ಹಂಬಲಂಗಳ ಬಿಡಿಸಿ ತುಂಬುವ ಹರಿ ಮನದಿ6


ಪುಣ್ಯ ರಾಶಿಗಳೆಲ್ಲ ವದಗಿ ಬಂದವೊ ಏನೋ

ಚಿನ್ಮಯ “ಶ್ರೀ ಕೃಷ್ಣವಿಠಲ”ನ ದಾಸನಾದೆ7

****