Showing posts with label ದೇವ ಹನುಮ ಶೆಟ್ಟಿ ರಾಯ ಜಗಜಟ್ಟಿ shyamasundara. Show all posts
Showing posts with label ದೇವ ಹನುಮ ಶೆಟ್ಟಿ ರಾಯ ಜಗಜಟ್ಟಿ shyamasundara. Show all posts

Friday 27 December 2019

ದೇವ ಹನುಮ ಶೆಟ್ಟಿ ರಾಯ ಜಗಜಟ್ಟಿ ankita shyamasundara

ದೇವ ಹನುಮ ಶೆಟ್ಟಿ ರಾಯ ಜಗಜಟ್ಟಿ
ಕಾವೋದು ಭಾವಿ ಪರಮೇಷ್ಠಿ

ಪಾವನ ಚರಿತ ಸಂಜೀವನ ಗಿರಿಧರ
ಪಾವಮಾನಿ ಕರುಣಾವಲೋಕನದಿ
ನೀ ವಲಿಯುತಲಿ ಸದಾವಕಾಲ ತವ
ತಾವರೆ ಪದಯುಗ ಸೇವೆಯ ಕರುಣಿಸು

ವಾನರ ಕುಲ ನಾಯಕ
ಜಾನಕಿ ಶೋಕ ಕಾನನ ತೃಣ ಪಾವಕ
ಹೀನ ಕೌರವ ನಾಶಕ
ಸನ್ಮೌನಿ ತಿಲಕ ಆನಂದತೀರ್ಥ ನಾಮಕ

ಶೋಣಿಯೊಳಗೆ ಎಣೆಗಾಣೆ ನಿನಗೆ ಎನ್ನ
ಮಾಣದೆ ಅನುದಿನ ಪಾಣಿ ಪಿಡಿದು ಪೊರೆ
ಸ್ಥಾಣು ಜನಕ ಗೀರ್ವಾಣ ವಿನುತ ಜಗ-
ತ್ಪ್ರಾಣ ರಮಣ ಕಲ್ಯಾಣ ಮೂರುತಿ

ಮರುತ ನಂದನ ಹನುಮ ಪುರಹರ ರೋಮ
ಪರಮ ಪುರುಷ ಶ್ರೀ ಭೀಮ
ಕರುಣಾಸಾಗರ ಜಿತಕಾಮ ಸದ್ಗುಣಭೌಮ
ಪರವಾದಿ ಮತವ ನಿರ್ನಾಮ

ಗಿರಿಸುತ ಪಾಲಕ ಜರಿಜ ವಿನಾಶಕ
ಹರಿಮತ ಸ್ಥಾಪಕ ದುರಿತ ವಿಮೋಚಕ
ಶರಣು ಜನರ ಸುರತರು ಭಾರತಿವರ
ಮರೆಯದೆ ಪಾಲಿಸು ನಿರುಪಮ ಚರಿತ

ದಿಟ್ಟ ಶ್ರೀ ಶ್ಯಾಮಸುಂದರ ವಿಠ್ಠಲ ಕುವರ
ದುಷ್ಟ ರಾವಣ ಮದಹರ
ಜಿಷ್ಣು ಪೂರ್ವಜ ವೃಕೋದರ ರಣರಂಗ ಶೂರ
ಶಿಷ್ಟ ಜನರ ಉದ್ಧಾರ

ನಿಷ್ಠೆಯಿಂದಲಿ ಮನ ಮುಟ್ಟಿ ನಿನ್ನ ಪದ
ಥಟ್ಟನೆ ಪಾಡುವ ಶ್ರೇಷ್ಠ ಸುಜನರೊಳು
ಇಟ್ಟು ಸಲಹೋ ಸದಾ ಸೃಷ್ಟಿ ಮಂಡಲದಿ
ಪುಟ್ಟ ಗ್ರಾಮ ಬಲ್ಲಟಗಿಯ ವಾಸ
*******