Showing posts with label ಶ್ರೀವ್ಯಾಸತತ್ತ್ವಜ್ಞರಡಿದಾವರೆಯ manohara vittala vyasatatwajna teertha stutih. Show all posts
Showing posts with label ಶ್ರೀವ್ಯಾಸತತ್ತ್ವಜ್ಞರಡಿದಾವರೆಯ manohara vittala vyasatatwajna teertha stutih. Show all posts

Saturday 1 May 2021

ಶ್ರೀವ್ಯಾಸತತ್ತ್ವಜ್ಞರಡಿದಾವರೆಯ ankita manohara vittala vyasatatwajna teertha stutih

 ಶ್ರೀ ಮನೋಹರ ವಿಠಲಾಂಕಿತ ಶ್ರೀ ಬೂರಲದಿನ್ನೆ ಮೋನಪ್ಪ [ ಶ್ರೀ ನಾರಾಯಣಪ್ಪ ] ದಾಸರು "... 

ಶ್ರೀವ್ಯಾಸತತ್ತ್ವಜ್ಞರಡಿದಾವರೆಯ ।

ಸೇವಿಸುತ ನುತಿಗಯ್ಯುತಾ ಸತತ ।। ಪಲ್ಲವಿ ।।


ದೇವಾಂಶರಾದಿವರ ಮಹತ್ಮಿಗಳನಿಡನೆಲ್ಲಾ ।

ಭಾವ ಶುದ್ಧಾದಿ ವರ್ಣಿಸುವೆ ಕೇಳಿ ಸುಜನರೂ ।। ಅ ಪ ।।


ಧರೆಯೊಳು ಸದ್ವಂಶ 

ವಿಖ್ಯಾತರುದರದಲಿ ।

ಹರಿಣಾಂಕ ದ್ವಿತಿಯರೆನಿಸಿ । 

ಜನಿಸೀ ।

ಕರುಣಭಾವದಿ ಹರಿಯ 

ಮರೆಯದಲೆ ಜನಕರಿಗೆ । 

ಪರಮ ಹರುಷವನೆ ಬೀರಿ । 

ತೋರೀ ।

ಸ್ಮರನಂತೆ ಸುಂದರದಿ 

ಬಿದಿಗೆ ಚಂದ್ರಮನಂತೆ ।।

ಪರಿವರ್ದಿಸುತ್ತ ಜನಕೆ । 

ಮನಕೆ ।

ಪರಿತೋಷವಿತ್ತತುಳ 

ಬ್ರಹ್ಮಚರ್ಯಾಶ್ರಮವ ।

ಧರಿಸಿ ಸನ್ಮಾರ್ಗದಲ್ಲೀ । 

ಸಲ್ಲೀಸೀ ।

ಶರಧಿ ಮೆಖಳೆಯೊಳಗೆ 

ಸರಿಯಿಲ್ಲಿವರಿಗೆಂದು ।

ತರಳರೊಳು ಸುಜ್ಞಾನ-

ಭರಿತರಾಗುತ ಮೆರೆದ ।। ೧ ।।

*** may be incomplete?