Showing posts with label ಇದನಾ ಬೇಡಿದವನಲ್ಲಾ ಬುಧರಂತರ್ಯಾಮಿ ಲಕುಮಿನಲ್ಲ vijayaramachandra vittala appavara stutih. Show all posts
Showing posts with label ಇದನಾ ಬೇಡಿದವನಲ್ಲಾ ಬುಧರಂತರ್ಯಾಮಿ ಲಕುಮಿನಲ್ಲ vijayaramachandra vittala appavara stutih. Show all posts

Friday 6 August 2021

ಇದನಾ ಬೇಡಿದವನಲ್ಲಾ ಬುಧರಂತರ್ಯಾಮಿ ಲಕುಮಿನಲ್ಲ ankita vijayaramachandra vittala appavara stutih

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 

ರಾಗ : ಕಾಂಬೋಧಿ ತಾಳ : ಝ೦ಪೆ


ಇದನಾ ಬೇಡಿದವನಲ್ಲಾ

ಬುಧರಂತರ್ಯಾಮಿ ಲಕುಮಿನಲ್ಲ ಪ


ಪಾಪ ಕಾರ್ಯದ ಪಾಪ ವ್ಯಾಪಿಸಿ ದೇಹದಿ

ಲೋಪಗೈಸೋದು ಸತ್ಕರ್ಮ

ದೀಪ ನೀನಾಗಿರೆ ಉಪದೇಶಿಸೀ ಭವ

ಕೂಪದಿಂದೆತ್ತೆಂದು ಬೇಡಿದೆನಲ್ಲದೆ 1


ವಿಷಯದೊಳ್ ಸಂಚರಿಪ ದೋಷಕಾರಿ ಮನ

ಆಶೆಯೊಳು ಪೊಕ್ಕು

ನಾಶಗೈಪೋದೆನ್ನ ವಿಶೇಷ ಸಾಧನಗಳ ನೀ

ಪೋಷಿಸು ಎಂದು ಬೇಡಿದೆನಲ್ಲದೇ 2


ಸುಧೆ ತಂದ ವಿಜಯ ರಾಮಚಂದ್ರವಿಠಲ ನಿನ

ಗೆದುರ್ಯಾರೊ ಪೇಳುವರು

ಮುದದಿಂದ ಕೃಷ್ಣಾರ್ಯರೊಳು ಬೇಡಿದೆನಲ್ಲದೇ 3

***

ರಾಗ : ಕಾಂಬೋಧಿ ತಾಳ : ಝ೦ಪೆ

ಇದನಾ ಬೇಡಿದವನಲ್ಲಾ ।

ಬುಧರಂತರ್ಯಾಮಿ -

ಲಕುಮೀ ನಲ್ಲಾ ।। ಪಲ್ಲವಿ ।।

ಪಾಪ ಕಾರ್ಯದ ಪಾಪ -

ವ್ಯಾಪಿಸಿ ದೇಹದಿ ।

ಲೋಪಗೈಸೋದು ಸತ್ಕರ್ಮ ।

ದೀಪ ನೀನಾಗಿರೆ -

ಉಪದೇಶಿಸೀ ಭವ ।

ಕೂಪದಿಂದೆತ್ತೆಂದು -

ಬೇಡಿದೆನಲ್ಲದೆ ।। ಚರಣ ।।

ವಿಷಯದೊಳ್ಸಂಚರಿಪ -

ದೋಷಕಾರಿ ಮನ ।

ಆಶೆಯೊಳು ಪೊಕ್ಕು ।

ನಾಶ ಗೈದೆನ್ನ ವಿ-

ಶೇಷ ಸಾಧನಗಳ । ನೀ ।

ಪೋಷಿಸು ಎಂದು -

ಬೇಡಿದನಲ್ಲದೆ ।। ಚರಣ ।।

ಸುಧೆ ತಂದ ವಿಜಯರಾಮ-

ಚಂದ್ರವಿಠಲ । ನಿನ ।

ಗೆದಿರ್ಯಾರೋ ಪೇಳುವರು ।

ಮುದದಿಂದ ಕೃಷ್ಣಾರ್ಯರೊಳು -

ಬೇಡಿದೆನಲ್ಲದೆ ।। ಚರಣ ।।

***