Showing posts with label ಮಂಗಳಾರತಿಯ ಪಾಡಿರೇ ರಂಗನಾಥರುಕ್ಮಿಣೀಗೆ ankita narasimhavittala. Show all posts
Showing posts with label ಮಂಗಳಾರತಿಯ ಪಾಡಿರೇ ರಂಗನಾಥರುಕ್ಮಿಣೀಗೆ ankita narasimhavittala. Show all posts

Tuesday 3 August 2021

ಮಂಗಳಾರತಿಯ ಪಾಡಿರೇ ರಂಗನಾಥರುಕ್ಮಿಣೀಗೆ ankita narasimhavittala

 'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+ 


ಮಂಗಲಾರತಿಯ ಪಾಡಿರೇ | ರಂಗನಾಥರುಕ್ಮಿಣೀಗೆ ಪ


ಸಿಂಧು ಸುತೆಗೇ | ಸೀತಾರಾಮಚಂದ್ರಗೇ | ಉಪೇಂದ್ರಗೇ ಅ.ಪ


ನೀರೊಳಾಡಿದಾ ಮತ್ಸ್ಯ ಕೂರ್ಮವರಹಾವತಾರಗೇ

ಕರುಳ ಮಾಲೆಧರಿಸಿದಾ ಲಕ್ಷ್ಮಿನಾರಸಿಂಹಗೇ 1


ಬಲಿಯ ದಾನವನ್ನೇ ಬೇಡಿ ಮಾತೆ ಶಿರವನಳಿದವಗೇ

ಛಲದಿ ದೈತ್ಯನ ಕೊಂದು | ತಾಯಿಗೆ ಬಾಯಲ್ಲಿ

ಜಗವತೋರ್ದವಗೇ 2


ಬೆತ್ತಲಾಗಿ ನಿಂತಿದ್ದ ಉತ್ತಮ ಬೌದ್ಧ ಕಲ್ಕಿಗೇ

ಸೃಷ್ಟಿಗೊಡೆಯ ಬಳ್ಳಾರಿ ಲಕ್ಷ್ಮೀನಾರಸಿಂಹವಿಠಲಗೇ 3

***