ವಿಜಯದಾಸ
ಕಾಂಬೋದಿ / ಝಮ್ಪೆ
ಎಂತಹದೋ ನಿನ್ನ ಸಂದರುಶನ
ಕಂತುವಿನ ಜನಕ ಉಡುಪಿಕೃಷ್ಣರಾಯ ll ಪ ll
ಪರರ ಓದನತಿಂದೇ l ಪರರದ್ರವ್ಯವ ತಂದೆ
ಪರಸತಿಯರಿಗೆ ನೊಂದೆ l ಗುರುಹಿರಿಯರ ನಿಂದೆ-
ಹಿರಿದಾಗಾಡಿದೆ ಮುಂದೆ l ಬರುತಿಪ್ಪ ಪಾಪದಿಂದೆ
ಬರಿದೆ ಪೋಯಿತು ವಂದೆ l ಪರಿಯಾಗಿ ಈ ಬೊಂದೆ
ಅರುಹಿ ತೊರೆದೆ ಬಂದೆ l ಕರುಣಿಸು ಜಗದ ತಂದೆ ll 1 ll
ಸುಜನರ ಗುಣವ ಹಳಿದೆ l ನಿಜಕರ್ಮಗಳ ಹಳಿದೆ
ಕುಜನರ ಸಂಗದಲಿ ಬೆಳೆದೆ l ಭಜನೆಗೆಟ್ಟು ಸುಳಿದೆ
ಪ್ರಜರನ್ನು ಪೊಗಳಿದೆ l ವೃಜಪುಣ್ಯಕೋಶ ಹಳಿದೆ
ಋಜುಮಾರ್ಗವ ತೊರೆದುಳಿದೆ l ರಜನೀಚರಮತಿಗಳಿದೆ
ವಿಜಯವಾರ್ತೆಗೆ ಮುಳಿದೆ l ತ್ರಿಜಗಪತಿ ಕೇಳಿದೆ ll 2 ll
ಹರಿವಾಸರ ಬಿಟ್ಟೆ l ದುರುಳರಿಗೆ ಧನಕೊಟ್ಟೆ
ಹರಿಭಕ್ತರ ತೊರೆದು ಕೆಟ್ಟೆ l ಹರಿಶ್ರವಣ ಬಚ್ಚಿಟ್ಟೆ
ಪರಮ ವ್ರತವ ಮೆಟ್ಟಿ l ಹರುಷದಲ್ಲಿಗೆ ಮನಮುಟ್ಟಿ
ದುರರಸಕೆ ಸುಖಬಿಟ್ಟೆ l ವಿರಕುತಿಯನು ಬಿಟ್ಟೆ
ದುರಿತಕ್ಕೆ ಗುರುತಿಟ್ಟೆ l ಪರಕೆಕಾಣೆನೊ ಬಟ್ಟೆ ll 3 ll
ಜ್ಞಾನವೆಂಬೋದೆ ಇಲ್ಲ l ಏನು ಪೇಳಲಿ ಸೊಲ್ಲ
ನೀನೆಂಬೋದಿಲ್ಲವಲ್ಲ l ಹಾನಿವೃದ್ಧಿಗಳೆಲ್ಲ
ನಾನುಂಬೆ ಎಲ್ಲ ಸಲ್ಲಾ - l ದಾನಾದೆ ಸತತಖುಲ್ಲ
ರಾನುಡಿಗೆ ಸೋತು ಚೆಲ್ಲ- l ರಾನಡತಿ ಸಿರಿನಲ್ಲ
ನಾ ನಡೆದೆ ನೀ ಬಲ್ಲಾ - l ದೇ ನೋಡಪ್ರತಿಮಲ್ಲ ll 4 ll
ಅಪರಾಧಿ ನಾನಯ್ಯ l ಅಪವಾದದವನಯ್ಯ
ಕೃಪಣದಿಂದೆನ್ನಕಾಯಾ l ಉಪಜಯವಾಯಿತು ಪ್ರೀಯ
ಸ್ವಪನದಿ ಪುಣ್ಯಸಹಾಯಾ l ಲಪಮಾಡಿಲಿಲ್ಲ ಜೀಯಾ
ಕೃಪೆಯಲ್ಲಿ ಪಿಡಿಕೈಯಾ l ವಿಜಯವಿಟ್ಠಲರೇಯಾ
ಗುಪುತವಾದುಪಾಯಾ l ತಪಸಿಗಳ ಮನೋ ಜಯ ll 5 ll
* ಶ್ರೀವಿಜಯದಾಸರು.
***
ಎಂತಹದೋ ನಿನ್ನ ಸಂದುರಶನಾ |
ಕಂತುವಿನ ಜನಕ ಉಡಪಿ ಕೃಷ್ಣರಾಯಾ ಪ
ಓದನ ತಿಂದೆ |
ಪರರ ದ್ರವ್ಯದ ತಂದೆ |
ಪರ ಸತಿಯರಿಗೆ ನೊಂದೆ |
ಗುರು ಹಿರಿಯರ ನಿಂದೆ |
ಹಿರದಾಗಾಡಿದೆ ಮುಂದೆ |
ಬರುತಿಪ್ಪ ಪಾಪದಿಂದೆ |
ಪರಿಯಾಗಿ ಈ ಬಂದೆ |
ಅರುಹು ತೊರದೆ ಬಂದೆ |
ಕರುಣಿಸು ಜಗದ ತಂದೆ 1
ಸುಜನರ ಗುಣವ ಹಳಿದೆ |
ಕುಜನರ ಸಂಗದಲಿ ಬೆಳಿದೆ |
ಭಜನೆಗೆÀಟ್ಟು ಸುಳಿದೆ |
ಪ್ರಜರನು ಪೊಗಳಿದೆ |
ವೃಜ ಪುಣ್ಯಕೋಶ ಕಳಿದೆ |
ಋಜುಮಾರ್ಗವ ತೊರದುಳಿದೆ |
ರಜನಿಚರ ಮತಿಗಳಿದೆ |
ವಿಜಯ ವಾರ್ತೆಗೆ ಮುಳಿದೆ |
ತ್ರಿಜಗಪತಿ ಕೇಳಿದೆ 2
ಹರಿವಾಸರವ ಬಿಟ್ಟೆ |
ದುರುಳರಿಗೆ ಧನ ಕೊಟ್ಟೆ |
ಹರಿಭಕ್ತರ ತೊರೆದು ಕೆಟ್ಟೆ |
ಹರಿಶ್ರವಣ ಬಚ್ಚಿಟ್ಟೆ |
ಪರಮ ವ್ರತವ ಮೆಟ್ಟೆ |
ಹರುಷದಲ್ಲಿಗೆ ಮನಮುಟ್ಟಿ |
ಬಟ್ಟೆ |
ವಿರಕುತಿಯನು ಬಿಟ್ಟೆ |
ದುರಿತಕ್ಕೆ ಗುರುತಿಟ್ಟೆ |
ಬಟ್ಟೆ 3
ಜ್ಞಾನವೆಂಬೋದೇ ಇಲ್ಲಾ |
ಏನು ಪೇಳಲಿ ಸೊಲ್ಲಾ |
ನೀನೆಂಬೋದಿಲ್ಲವಲ್ಲಾ |
ಹಾನಿ ವೃದ್ದಿಗಳೆಲ್ಲಾ |
ನಾನುಂಟೆ ಎಲ್ಲ ಸಲ್ಲಾ |
ದಾನಾದೆ ಸತತ ಖುಲ್ಲಾ |
ತಾ ನುಡಿಗೆ ಸೋತು ಚಿಲ್ಲಿ |
ರಾನಡತಿ ಸಿರಿನಲ್ಲಾ |
ನಾ ನಡದೆ ನೀ ಬಲ್ಲಾ |
ದೇ ನೋಡು ಪ್ರತಿ ಮಲ್ಲಾ 4
ಅಪರಾಧಿ ನಾನಯ್ಯ |
ಅಪವಾದದವನಯ್ಯ |
ಕೃಪಣದಿಂದೆನ್ನ ಕಾಯಾ |
ಉಪಜಯವಾಯಿತು ಪ್ರೀಯಾ |
ಸ್ವಪನದಿ ಪುಣ್ಯ ಸಹಾಯಾ |
ಲಪಮಾಡಲಿಲ್ಲ ಜೀಯಾ |
ಕೃಪೆಯಲ್ಲಿ ಪಿಡಿ ಕೈಯಾ |
ವಿಜಯವಿಠ್ಠಲರೇಯಾ |
ಗುಪುತವಾದುದುಪಾಯಾ |
ತಪಸಿಗಳ ಮನೋಜಯಾ 5
**********
ಕಂತುವಿನ ಜನಕ ಉಡಪಿ ಕೃಷ್ಣರಾಯಾ ಪ
ಓದನ ತಿಂದೆ |
ಪರರ ದ್ರವ್ಯದ ತಂದೆ |
ಪರ ಸತಿಯರಿಗೆ ನೊಂದೆ |
ಗುರು ಹಿರಿಯರ ನಿಂದೆ |
ಹಿರದಾಗಾಡಿದೆ ಮುಂದೆ |
ಬರುತಿಪ್ಪ ಪಾಪದಿಂದೆ |
ಪರಿಯಾಗಿ ಈ ಬಂದೆ |
ಅರುಹು ತೊರದೆ ಬಂದೆ |
ಕರುಣಿಸು ಜಗದ ತಂದೆ 1
ಸುಜನರ ಗುಣವ ಹಳಿದೆ |
ಕುಜನರ ಸಂಗದಲಿ ಬೆಳಿದೆ |
ಭಜನೆಗೆÀಟ್ಟು ಸುಳಿದೆ |
ಪ್ರಜರನು ಪೊಗಳಿದೆ |
ವೃಜ ಪುಣ್ಯಕೋಶ ಕಳಿದೆ |
ಋಜುಮಾರ್ಗವ ತೊರದುಳಿದೆ |
ರಜನಿಚರ ಮತಿಗಳಿದೆ |
ವಿಜಯ ವಾರ್ತೆಗೆ ಮುಳಿದೆ |
ತ್ರಿಜಗಪತಿ ಕೇಳಿದೆ 2
ಹರಿವಾಸರವ ಬಿಟ್ಟೆ |
ದುರುಳರಿಗೆ ಧನ ಕೊಟ್ಟೆ |
ಹರಿಭಕ್ತರ ತೊರೆದು ಕೆಟ್ಟೆ |
ಹರಿಶ್ರವಣ ಬಚ್ಚಿಟ್ಟೆ |
ಪರಮ ವ್ರತವ ಮೆಟ್ಟೆ |
ಹರುಷದಲ್ಲಿಗೆ ಮನಮುಟ್ಟಿ |
ಬಟ್ಟೆ |
ವಿರಕುತಿಯನು ಬಿಟ್ಟೆ |
ದುರಿತಕ್ಕೆ ಗುರುತಿಟ್ಟೆ |
ಬಟ್ಟೆ 3
ಜ್ಞಾನವೆಂಬೋದೇ ಇಲ್ಲಾ |
ಏನು ಪೇಳಲಿ ಸೊಲ್ಲಾ |
ನೀನೆಂಬೋದಿಲ್ಲವಲ್ಲಾ |
ಹಾನಿ ವೃದ್ದಿಗಳೆಲ್ಲಾ |
ನಾನುಂಟೆ ಎಲ್ಲ ಸಲ್ಲಾ |
ದಾನಾದೆ ಸತತ ಖುಲ್ಲಾ |
ತಾ ನುಡಿಗೆ ಸೋತು ಚಿಲ್ಲಿ |
ರಾನಡತಿ ಸಿರಿನಲ್ಲಾ |
ನಾ ನಡದೆ ನೀ ಬಲ್ಲಾ |
ದೇ ನೋಡು ಪ್ರತಿ ಮಲ್ಲಾ 4
ಅಪರಾಧಿ ನಾನಯ್ಯ |
ಅಪವಾದದವನಯ್ಯ |
ಕೃಪಣದಿಂದೆನ್ನ ಕಾಯಾ |
ಉಪಜಯವಾಯಿತು ಪ್ರೀಯಾ |
ಸ್ವಪನದಿ ಪುಣ್ಯ ಸಹಾಯಾ |
ಲಪಮಾಡಲಿಲ್ಲ ಜೀಯಾ |
ಕೃಪೆಯಲ್ಲಿ ಪಿಡಿ ಕೈಯಾ |
ವಿಜಯವಿಠ್ಠಲರೇಯಾ |
ಗುಪುತವಾದುದುಪಾಯಾ |
ತಪಸಿಗಳ ಮನೋಜಯಾ 5
**********