Showing posts with label ಹರಿದಾಸ ಚತುಷ್ಟಯ abhinava pranesha vittala ankita ಗೋಪಾಲದಾಸರ ಚರಿತ್ರೆ ಸುಳಾದಿ HARIDASA CHATUSHTAYA GOPALADASA CHARITRE SULADI. Show all posts
Showing posts with label ಹರಿದಾಸ ಚತುಷ್ಟಯ abhinava pranesha vittala ankita ಗೋಪಾಲದಾಸರ ಚರಿತ್ರೆ ಸುಳಾದಿ HARIDASA CHATUSHTAYA GOPALADASA CHARITRE SULADI. Show all posts

Sunday 8 December 2019

ಹರಿದಾಸ ಚತುಷ್ಟಯ abhinava pranesha vittala ankita ಗೋಪಾಲದಾಸರ ಚರಿತ್ರೆ ಸುಳಾದಿ HARIDASA CHATUSHTAYA GOPALADASA CHARITRE SULADI


Audio by Mrs. Nandini Sripad

ಶ್ರೀ ಅಭಿನವ ಪ್ರಾಣೇಶದಾಸಾರ್ಯ ವಿರಚಿತ 

 ಶ್ರೀಗೋಪಾಲದಾಸರ ಸ್ತೋತ್ರ ಸುಳಾದಿ 

 ರಾಗ ಸಿಂಧುಭೈರವಿ 

 ಧ್ರುವತಾಳ 

ಹರಿದಾಸ ಚತುಷ್ಟಯ ಪುರುಷ ತೃತೀಯರಾದ
ತುರುಪಾಲ ದಾಸರ ಚರಿತೆ ತಿಳಿದಷ್ಟು
ಬರೆಯುವೆ ಶಿರಿ ಹರಿ ಮರುತರ ದಯದಿಂದ
ಗುರು ವರದೇಂದ್ರರ ಪರಮಾನುಗ್ರಹದಿಂದ
ವರದೇಶದಾಸರ ಕರುಣದಿಂದ
ಮುರಹರನಾಜ್ಞದಿ ಕರಿಕಂಧರಿಯೊಳು
ಪುರ ದಧಿಶಿಲೆಯಲ್ಲಿ ಪುಟ್ಟಿ ಪೆರೆ ಶುಕ್ಲನಂತೆ ಬೆಳೆದ ಭಾಗಣ್ಣನು
ದುರುಳ ಭಾಗದೇಯಾರು ಚರಚರಾಸ್ತಿಯನಪ -
ಹರಿಸಿ ದೂಡಲು ಬಂದು ಸಂಕಾಪುರದಿ
ಮರುತದೇವನ ಆಶ್ರಯದಲ್ಲಿ ನೆಲೆಸಿಹ
ಶಿರಿವರ ಅಭಿನವ ಪ್ರಾಣೇಶವಿಠಲನ ದಯದಿ ॥ 1 ॥ 

 ಮಟ್ಟತಾಳ 

ಗಾಯತ್ರೀ ಮಂತ್ರ ಪುರಶ್ಚರಣೆಯಲ್ಲಿ
ತಾಯಿಯ ಒಲಿಸಿದನು ಮೌನ ತಪಸಿನಲಿ
ಬೀಯ ಮಾಡುತಲೊಬ್ಬ ಮರಳುವ ನೀರೆರೆಯೆ
ಘಾಯಗೊಂಡು ತಾನೆ ಬಹುಪರಿ ಬಳಲಿದನು
ವಾಯುಭಕ್ಷನೊಮ್ಮೆ ಶಿರದಲಿ ಫಣವಿರಿಸೆ
ಕಾಯವ ಸುತ್ತಿರಲು ಕಂಡು ಜನರು ಬೆದರೆ
ತೋಯಜಾಕ್ಷ ಅಭಿನವ ಪ್ರಾಣೇಶವಿಠಲನ 
ಪ್ರೀಯ ದಾಸರಿಗುಂಟೆ ನೋವು ಭಯವು ॥ 2 ॥ 

 ತ್ರಿವಿಡಿತಾಳ 

ಪೃಥ್ವಿಪನರಿಕೆಯನಾಲಿಸಿ ಬೇಗನೆ
ಉತ್ತನೂರಿಗೆ ಬಂದು ನೆಲಸಿದನು
ಚಿತ್ತಜನಯ್ಯನ ಗಿರಿ ವೆಂಕಟೇಶನ
ತುತಿಸುತಾಕ್ಷಣ ಸೇವೆಗೈಯುತಲಿ
ನಿತ್ಯ ಜನರಿಗೆ ಭವಿಷ್ಯವ ಪೇಳುತ್ತ
ಸತ್ಯ ಕಥಾಮೃತ ಸುರಿಸುತಲಿ
ಭೃತ್ಯರಿಗುಣಿಸುತ್ತ ಅವರ ಮನ ತಣಿಸುತ್ತ
ನಿತ್ಯನೂತನ ಮಹಿಮೆ ತೋರುತಲಿ
ಹತ್ತಿ ಕುದುರೆಯ ಬಂದು 'ಅಲೆನಾಹಿ' ಎಂದು
ಕತ್ತುರಿ ಚಲುವನ ಅಣತಿಯಂತೆ
ತೆತ್ತಿಗರೊಡನೆ ಪಂಢರಪುರವ ಕಂಡು ಯಜಿಸಿ
ಉತ್ತರ ದೇಶದ ಯಾತ್ರೆಯ ಸಮಯದೀ
ಸೋತ್ತಮ ಗುರುಗಳ ಕಂಡು ನಮಿಸಿ
ಸೋತ್ತಮ ಭೃಗುಮುನಿ ವಿಜಯದಾಸರ ಒಲಿಸಿ
ತುತಿಸಿ ಉಪದೇಶಾಂತರವ ಗ್ರಹಿಸಿ
ಸತ್ಯ ಗೋಪಾಲವಿಠಲ ದಾಸರಾದರು
 ಸತ್ಯಾಭಿನವ ಪ್ರಾಣೇಶವಿಠಲನ ದಯದಿ ॥ 3 ॥ 

 ಅಟ್ಟತಾಳ 

ಹರಿದಾಸರು ನಿತ್ಯ ಹರಿ ಮತ ದರ್ಶನ
ಪ್ರಮೇಯ ಪ್ರಮಾಣ ವಾಕ್ಯಗಳೆಲ್ಲವ
ಸರಸವಾದ ಕನ್ನಡ ನುಡಿಯಲ್ಲಿ ಪದ್ಯ
ವರ ಸುಳಾದಿಗಳಿಂದ ಅರುಹುತ ಸಂತತ
ಪರಮ ಭಾಗವತ ಧರ್ಮವ ಬೀರುತ್ತ
ಹರಿದಾಸ್ಯ ಪಥವನ್ನು ತೋರುತ್ತ ಸಾರುತ್ತ
ಹರಿಕಥಾ ರಸ ಸುಧೆ ಸುರಿಸಿ ಭೂಸುರ ಪಾ -
ಮರ ಜನರಿಗೆ ಗೈದ ಉಪಕಾರಕ್ಕೆಣೆಗಾಣೆ
ಭರತ ಖಂಡವನೆಲ್ಲಾ ಚರಿಸಿ ಆನತರನು -
ದ್ಧರಿಸಿದ ಕರುಣಾಳು ಗೋಪಾಲದಾಸರೇ
ಶರಣೆಂಬೆ ಶರಣೆಂಬೆ ನಿಮ್ಮಯ ಚರಣಕ್ಕೆ
ತುರುಪಾಲ ದಾಸರ ಹರಿಕಥಾ ಸಮಯದಿ 
ಪರಿಸರದೇವನು ತರುಚರ ರೂಪದಿ
ವರ ರೌಪ್ಯಪೀಠದಿ ಶೋಭಿಪ ನಿತ್ಯದಿ
ಧರಿಸುರ ರೈಜಿಯರೊಮ್ಮೆ ಕಂಡಿರುವರು
ತಿರಲಿಂಗ ದೇಶದ ಮಾಯಿಯ ಜೈಸಿದ
ನರತುತಿ ಮಾಡದಿರೆಂದ್ಹೇಳಿ ಕಳಿಸಿದ
ಗುರುಗಳ ವಿಜಯರ ಚರಣಾರಾಧನೆಯಿಂದ
ಉರಗ ಪರ್ವತದಲ್ಲಿ ಧರಿನಾಥರಿಗೆ ತಮ್ಮ
ಶರಕರಿ ವತ್ಸರ ಆಯುಷ್ಯವೆರೆದರು
ಪರಮ ಸುತ್ಯಾಗಕ್ಕೆ ಕರ್ಣ ತಲೆ ಬಾಗಿದ
ತುರುಪಾಲದಾಸರ ಚರಿತೆಗೆ ನಮೋ ನಮೋ
 ತುರುಪಾಲಾಭಿನವ ಪ್ರಾಣೇಶವಿಠಲನ 
ಚರಣ ಕಿಂಕರನೆನಿಸಿ ಮೆರೆದ ಗುರುದೇವ ॥ 4 ॥ 

 ಆದಿತಾಳ 

ದಾಸರ ಮಾತಿನ ಮರ್ಮವನರಿಯುತ 
ಭೂಸುರ ರೈಜಿಯ ರಾಮಾಚಾರ್ಯರು
ಕಾಷಾಯಾಂಬರ ಧರಿಸುತ ಬಿಂಬೋ -
ಪಾಸನೆ ಗೈದಪರೋಕ್ಷವ ಪಡೆದರು
ದಾಸರ ಸಂಗಡ ನರ್ತಿಸಿ ನಲಿದರು
ವಾಸುದೇವ ವಿಟ್ಠಲನ ಭಜಿಸಿದರು
ವಾಸುದೇವ ಹರಿ ರೂಪವ ಕಂಡರು
ತೋಷದಿ ನಲಿದರು ತೃಪ್ತಿಯ ಪಡೆಯುತ
ಪಾಶಮಂಥಧರ ದೇವನ ಕಾಣಲು
ದಾಸರು ಹೊರಟರು ಉಡುಪಿಯ ಯಾತ್ರೆಗೆ
ದೋಷ ಮಂಡಗದ್ದಿ ತಸ್ಕರ ಭೀಮನು
ಆ ಸುಯಾತ್ರಿಕರ ಸುಲಿಯಲು ಬರೆ
ಪ್ರಾಣೇಶನ ದಯದಿಂದ ರಕ್ಷಿಸಿ ವುಳುಹಿದ
ಶೇಷಾನುಜ ಗೋಪಾಲಮೂರ್ತಿಯನು
ತೋಷದಿ ವಂದಿಸಿ ಸೇವೆಯ ಸಲ್ಲಿಸಿ
ದೇಶಿಕರಿಷ್ಟರ ದರ್ಶನ ಪಡೆಯುತ
ರಾಶಿ ಜಲದ ಸ್ನಾನ ಪೂರೈಸುತ
ವಾಸುದೇವ ಪುರ ಯಾತ್ರೆಯ ಗೈಯುತ
ಭಾಸುರ ಚರಿತರು ಮರಳುತ ಬಂದರು
ದೇಶಿಕ ವರ ಮಂತ್ರಾಲಯ ಪ್ರಭುಗಳ
ಮೀಸಲಪ್ಪಣೆಯ ಮೇರೆಗೆ ಗೌಡನ 
ವಾಸಕೆ ಬಂದರು ಲಕ್ಷ ಭೋಜನದ
ಆಸೆ ಸಲ್ಲಿಸಿದರು ತೋಷವಗರೆದರು
ಶೇಷಗಿರೀಶನ ಕಂಡು ತುತಿಸಿದರು
ವಾಸಕೆ ತಿರುಗುತರೆಲ್ಲರ ಕರೆಸುತ
ಆ ಸಮೀರಮತ ಮರ್ಮವ ತಿಳಿಸುತ
ಕಾಶ್ಯಪ ಚಿತ್ರಾ ಮಕರಾಷ್ಟಮಿ ಪರ -
ವಾಸರ ಮಂದದಿ ಲಯವನು ಚಿಂತಿಸಿ
ವಾಸುದೇವ ಮುರಮರ್ದನ ಕಳುಹಿದ
ಕಾ ಶಕಟನ್ನೇರುತ ನಡೆದರು
ಭೂಸುರ ಜನಗಣ ಜಯ ಘೋಷದವರ
ವಾಸವ ನಗರದ ದುಂದುಭಿ ಸುಸ್ವರ
ಆ ಸುಗಂಧ ಬೀರುವ ಸುಮ ವರ್ಷದಿ
ದಾಸರ ಮೇಳದ ಭಜನೆ ನರ್ತನದಿ
 ಶ್ರೀಶಾಭಿನವ ಪ್ರಾಣೇಶವಿಠಲನ ಪುರಕೆ ॥ 5 ॥ 

 ಜತೆ 

ಗೋಪಾಲದಾಸರ ಚರಿತೆ ಪಠಿಸೆ ನಿತ್ಯ
 ಗೋಪಾಭಿನವ ಪ್ರಾಣೇಶವಿಠಲ ಒಲಿವಾ ॥
*******

ಹರಿದಾಸ ಚತುಷ್ಟಯ ಪುರುಷ ತೃತೀಯರಾದ....
ಶ್ರೀ ಗೋಪಾಲದಾಸರ ಚರಿತ್ರೆ ಸುಳಾದಿ ,
ಶ್ರೀ ಅಭಿನವ ಪ್ರಾಣೇಶವಿಠಲ ದಾಸರ ರಚನೆ , ರಾಗ ಸಿಂಧುಭೈರವಿ


for lyrics please click

********