Showing posts with label ಭೀಮಶೇನಾರ್ಯರು ಭೂಮಿತ್ಯಜಿಸಿ ಪರಂಧಾಮವ ಸೇರಿದರು shyamasundara. Show all posts
Showing posts with label ಭೀಮಶೇನಾರ್ಯರು ಭೂಮಿತ್ಯಜಿಸಿ ಪರಂಧಾಮವ ಸೇರಿದರು shyamasundara. Show all posts

Wednesday 1 September 2021

ಭೀಮಶೇನಾರ್ಯರು ಭೂಮಿತ್ಯಜಿಸಿ ಪರಂಧಾಮವ ಸೇರಿದರು ankita shyamasundara

 ..

ಭೀಮಶೇನಾರ್ಯರು | ಭೂಮಿತ್ಯಜಿಸಿ ಪರಂ

ಧಾಮವ ಸೇರಿದರು ||

ಶ್ರೀಮತ್ ಕಾರ್ಪರ ಕ್ಷೇತ್ರ | ಸ್ವಾಮಿಯ ಸಂಪೂರ್ಣ

ಪ್ರೇಮ ಪಡೆದವರು | ಕೇಳಿದವರು ಪ


ಪರಿಮಳ ಗಾತ್ರರ ಕರುಣ ಪ್ರಸಾದದಿ

ಧರೆ ಸುರಾಗ್ರಣಿ ಎನಿಪ

ವರ ಜಯಾರ್ಯರ ಪತ್ನಿ | ನರಸಾಂಬೆಯಗರ್ಭ

ಶರಧಿಗೆ ಹರಿಣಾಂಕರು ಸುಶಾಂತರು 1


ಎಡರೇಸು ಬಂದರೂ ಬಿಡದೆ ಸ್ವಧರ್ಮವ

ಕಡುಭಕ್ತಿ ಪೂರ್ವಕದಿ

ಹುಡುಗನ ಮಾತಿಗೆ | ಒಡೆದುಸ್ತಂಭದಿ ಬಂದ

ಒಡೆಯನರ್ಚಿಸಿದವರು | ಕೋವಿದರು 2


ಪಂಚಬಾಣನ ಗೆದ್ದು | ಪಂಚ ಭೇದವನರಿತು

ಪಂಚಾಸ್ಸನುತ ಮಾನವ

ಪಂಚಾಶ್ಯದಯದಿ ಪ್ರಪಂಚ ಸಾಗಿಸುವಂಥ

ಪಾಂಚಾಲಿಪತಿ ಪ್ರಿಯರು | ನಿಷ್ಕಿಂಚನರು 3


ಅರವತ್ತು ವತ್ಸರ ಪರಿಯಂತ ನಿಷ್ಟೆಯಲಿ

ನಿರುತ ತಪ ಚಳಿ ಮಳೆ ಸಹಿಸಿ

ತರುವರ ಮೂಲಸ್ಥ ಪರಮೇಷ್ಟಿ ಜನಕನ

ನಿರುತ ಸೇವಿಸಿದವರು | ನಿರ್ಮಮರು 4


ವಿನಯ ಸುಶೀಲ ಸದ್ಗುಣದಿ ಭೂಷಿತರಾದ

ತನಯರೀರ್ವರ ಕರೆದು ರಿಣವಿನು ತೀರಿತು ಎನುತ

ಪೇಳುತ ದ್ವಿಜಗಣಿಕೆ ದಕ್ಷಿಣೆ ನೀಡಿ ನಮನ ಮಾಡಿ 5


ಹರುಷ ಭರಿತರಾಗಿ ಸರ್ವಜಿತು ನಾಮದ ವರುಷದೊಳ್

ಯುಗ ಮಾಸದಿ | ಶರದಪಕ್ಷ ಪ್ರತಿಪದ ಪ್ರಥಮ

ಯಾಮದಿ | ಸ್ಮರಿ ಸಿಲಯ ಚಿಂತನೆಯ ತೊರೆದು ಕಾಯ 6


ವರುಷಂ ಪ್ರತಿ ತಪ್ಪದೆ | ಚರಿಸುತ ದೇಶದೋ

ಳಿರುವ ಸದ್ಭಕ್ತರಿಗೆ | ವರಶಾಮ ಸುಂದರ

ನರಹರಿದರುಶನ | ಗರೆದ ಪಾಲಿಸಿದವರು ಪಾವನ್ನರು 7

***