Showing posts with label ಸತ್ಯಧರ್ಮ ಸದ್ಗುರುವರ ರಕ್ಷಿಸು narahari P. Show all posts
Showing posts with label ಸತ್ಯಧರ್ಮ ಸದ್ಗುರುವರ ರಕ್ಷಿಸು narahari P. Show all posts

Thursday 5 August 2021

ಸತ್ಯಧರ್ಮ ಸದ್ಗುರುವರ ರಕ್ಷಿಸು ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು


ಸತ್ಯಧರ್ಮ ಸದ್ಗುರುವರ ರಕ್ಷಿಸು ಪ


ಭೃತ್ಯ ನೀನಾಗೆಂದು ಕೃತ್ಯ ವಿಪರ್ಯಯ ವೆತ್ತಣಿಸದೆ ಕೃತಕೃತ್ಯನ ಮಾಡಿಂದು ಅ.ಪ


ಸತ್ಯವರರ ವರ ಕುವರನೆ ನೀನತ್ಯುತ್ತಮ ಸುಖ ಚಿನ್ನ

ಯತ್ಯಾಶ್ರಮ ಸದ್ಧರ್ಮಾಚರಣದಿ ನಿತ್ಯಾರ್ಜಿತ ರಾಮ

ಭೃತ್ಯಜನಕೆ ಸದ್ಬುದ್ಧಿ ಬೋಧಿಸಿ ಕೃತಕೃತ್ಯರ ಮಾಡುತಲಿ

ಕೃತ್ಯದಿಂದ ಗುರುವಿದತ್ತ ಸುನಾಮ ಯಥಾರ್ಥಪಡಿಸಿ

ಕ್ಷಿತಿಗುತ್ತಮನೆಸಿದ 1


ಭದ್ರಾತೀರನೆ ಇತ್ತು ಸುಭದ್ರಗಳ್ ನಿದ್ರಾರಹಿತರಿಗೆ

ಆದ್ರಾಂತಃಕರುಣನೆ ಸೌಹಾರ್ದದಿ ಭದ್ರಾರಮಣನಲಿ

ಕಾದ್ರ್ರವೇಯ ಭೂಷಣನಂದದಿ ನೀ ಭದ್ರಾದೇವಿಯನು

ಛಿದ್ರರಹಿತ ಶಿಲೆ ಮಧ್ಯದಿ ಪಡೆದು ಸುಭದ್ರಾಪತಿ ಸಖ

ಮುದ್ರಾಧರನೆ 2

ಶ್ರೀ ನರಹರಿ ಪದ ನೀನನುದಿನದಲಿ ಧ್ಯಾನಮಾಡುತ ಬಾಹ್ಯ

ಜ್ಞಾನವಿಲ್ಲದೆ ಅನುಮಾನ ವಿಪರ್ಯಯ ಹೀನಗೈಸಿ ಸಾಕ್ಷಿ

ಮಾನದಿಂದ ಕೊಟ್ಯಾರ್ಭುದ ರವಿಪ್ರಭೆ ಕಾಣುತ

ಪ್ರತಿಮುಖವೋಲ್

ಏನು ಇದಕೆ ಅನುಮಾನವಿಲ್ಲ ಹಂ ಮನಿಯವನೆನ್ನುವೆ ನೀ

ಸರಿಲಿಂಗರೂಪಧರ3

***