Showing posts with label ಬಾರೊ ನಮ್ಮ ಮನಿಗೆ ಶ್ರೀ ಸೀತಾರಾಮಣ ankita sundaravittala. Show all posts
Showing posts with label ಬಾರೊ ನಮ್ಮ ಮನಿಗೆ ಶ್ರೀ ಸೀತಾರಾಮಣ ankita sundaravittala. Show all posts

Wednesday, 17 February 2021

ಬಾರೊ ನಮ್ಮ ಮನಿಗೆ ಶ್ರೀ ಸೀತಾರಾಮಣ ankita sundaravittala

ಶ್ರೀಮೋದವಿಟ್ಠಲರ ಶಿಷ್ಯರಾದ ಗೌಡೂರು ರಾಘಪ್ಪನವರ ಕೃತಿ - ಅಂಕಿತ - ಸುಂದರವಿಟ್ಠಲ 

ರಾಗ -  :  ತಾಳ -


ಬಾರೊ ನಮ್ಮ ಮನಿಗೆ ಶ್ರೀ ಸೀತಾರಾಮಣ ll ಪ ll


ನಿನ್ನ ಆಜ್ಞಾಕ ನಾನು ಅನ್ಯಥಾವಿಲ್ಲವೊ l

ಯನ್ನಾಪರಾಧವ ಮನ್ನೀಸಿ ನೀ ಬ್ಯಾಗ ll ಅ ಪ ll 


ಜನಕನಾಜ್ಞಾವು ತಾಳಿ ವನವ ಪ್ರವೇಶಿಸಿ l

ದನುಜಾ ರಕ್ಕಸರ ಕೊಂದು ಮುನಿಗಾಳ ಪೊರೆದ ಸ್ವಾಮಿ ll ೧ ll


ಬಾಣಾವಟಿಯಲ್ಲಿ ಜಾಣ ನೀ ಪೋಗಿರಲು

ಏಣಾಗೋಸುಗ ಮಾನುನಿಯ ಕಳೆದ ಸ್ವಾಮಿ ll ೨ ll


ಕಾಂತಿಗೋಸುಗ ಮಾಲ್ಯವಂತಕ ಪೋಗಿ ನಿಜ l

ಮಾತ್ರಿಯ ನೋಡುದಾತಿ ಶಾಂತನಾದ ಸ್ವಾಮಿ ll ೩ ll


ಲೋಥೇಶನ ನಿಜ ಭ್ರಾತನ ಕೊಂದು ಕಪಿ l

ನಾಥರ ಕೂಡಿ ಅಬ್ಧಿಗೆ ಸೇತುವೆ ಕಟ್ಟಿದ ಸ್ವಾಮಿ ll ೪ ll


ತಡವು ಮಾಡದೆ ಅತಿಗಡನೆ ಶೇತುವಿ ದಾಟಿ l

ಜಡಜಾ ರಕ್ಕಸರನ್ನು ಹಿಡದು ಮಡುಹಿದ ಸ್ವಾಮಿ ll ೫ ll


(ಕೃತಿ ಅಪೂರ್ಣ.  ಮುಂದಿನ ನುಡಿಗಳು ಸಿಕ್ಕಿಲ್ಲ)

***