ಶ್ರೀಮೋದವಿಟ್ಠಲರ ಶಿಷ್ಯರಾದ ಗೌಡೂರು ರಾಘಪ್ಪನವರ ಕೃತಿ - ಅಂಕಿತ - ಸುಂದರವಿಟ್ಠಲ
ರಾಗ - : ತಾಳ -
ಬಾರೊ ನಮ್ಮ ಮನಿಗೆ ಶ್ರೀ ಸೀತಾರಾಮಣ ll ಪ ll
ನಿನ್ನ ಆಜ್ಞಾಕ ನಾನು ಅನ್ಯಥಾವಿಲ್ಲವೊ l
ಯನ್ನಾಪರಾಧವ ಮನ್ನೀಸಿ ನೀ ಬ್ಯಾಗ ll ಅ ಪ ll
ಜನಕನಾಜ್ಞಾವು ತಾಳಿ ವನವ ಪ್ರವೇಶಿಸಿ l
ದನುಜಾ ರಕ್ಕಸರ ಕೊಂದು ಮುನಿಗಾಳ ಪೊರೆದ ಸ್ವಾಮಿ ll ೧ ll
ಬಾಣಾವಟಿಯಲ್ಲಿ ಜಾಣ ನೀ ಪೋಗಿರಲು
ಏಣಾಗೋಸುಗ ಮಾನುನಿಯ ಕಳೆದ ಸ್ವಾಮಿ ll ೨ ll
ಕಾಂತಿಗೋಸುಗ ಮಾಲ್ಯವಂತಕ ಪೋಗಿ ನಿಜ l
ಮಾತ್ರಿಯ ನೋಡುದಾತಿ ಶಾಂತನಾದ ಸ್ವಾಮಿ ll ೩ ll
ಲೋಥೇಶನ ನಿಜ ಭ್ರಾತನ ಕೊಂದು ಕಪಿ l
ನಾಥರ ಕೂಡಿ ಅಬ್ಧಿಗೆ ಸೇತುವೆ ಕಟ್ಟಿದ ಸ್ವಾಮಿ ll ೪ ll
ತಡವು ಮಾಡದೆ ಅತಿಗಡನೆ ಶೇತುವಿ ದಾಟಿ l
ಜಡಜಾ ರಕ್ಕಸರನ್ನು ಹಿಡದು ಮಡುಹಿದ ಸ್ವಾಮಿ ll ೫ ll
(ಕೃತಿ ಅಪೂರ್ಣ. ಮುಂದಿನ ನುಡಿಗಳು ಸಿಕ್ಕಿಲ್ಲ)
***