Showing posts with label ಶ್ರೀರಂಗದಲಿ ರಾಜಿಪ ಶ್ರೀ ಸುಮತೀಂದ್ರತೀರ್ಥರ lakumeesha sumateendra teertha stutih. Show all posts
Showing posts with label ಶ್ರೀರಂಗದಲಿ ರಾಜಿಪ ಶ್ರೀ ಸುಮತೀಂದ್ರತೀರ್ಥರ lakumeesha sumateendra teertha stutih. Show all posts

Saturday 1 May 2021

ಶ್ರೀರಂಗದಲಿ ರಾಜಿಪ ಶ್ರೀ ಸುಮತೀಂದ್ರತೀರ್ಥರ ankita lakumeesha sumateendra teertha stutih

sumateendra teertha rayara mutt yati stutih

ರಚನೆ : ಶ್ರೀ ಕುರುಡಿ ರಾಘವೇಂದ್ರಾಚಾರ್ಯರು 

ಅಂಕಿತ : ಶ್ರೀ ಪಂಚಮುಖಿ ಪ್ರಾಣದೇವರ ಪ್ರಸಾದಾಂಕಿತ " ಲಕುಮೀಶ "


ಶ್ರೀರಂಗದಲಿ ರಾಜಿಪ ಶ್ರೀ -

ಸುಮತೀಂದ್ರತೀರ್ಥರ ।

ವಾರಿಜಂಘ್ರಿಯ ಸ್ತುತಿಪೆ ।। ಪಲ್ಲವಿ ।।


ಸಾರಿದವರ ದುಷ್ಟ 

ಘೋರ ಪಾಪವ ಕಳೆದು ।

ನಾರಾಯಣನೂರ 

ದಾರಿಯ ತೋರುವ ।। ಅ ಪ ।।


ಮಾರುತ ಮಧ್ವಶಾಸ್ತ್ರ 

ವಾರಿಧಿ ಮೀನರೆನಿಸೆ ।

ಸೂರೀ೦ದ್ರ ಮುನಿವರರು ।

ಧಾರುಣಿ ಸುತ್ತೆ ವಲ್ಲಭಾಂಘ್ರಿಯ ।

ವಾರಿಜಂಗಳ ನೆನೆದು ಕೋವಿದ ।

ಸೇರ್ದ ಸಭೆಯೊಳು ಸುಮತೀಂ-

ದ್ರರೆಂದು ಚಾರು ಸಂನ್ಯಾಸ 

ನೀಡೆ ಮೆರೆದಂಥ  ।। ಚರಣ ।।


ಕಾಲಕಾಲದಿ ಶ್ರೀ ಮೂಲ-

ರಾಮನ ಅರ್ಚಿಸಿ ।

ಶೀಲ ಸದ್ಗುಣಿಯೆನಿಸಿ ।

ಆಲಿಸಿ ಮತ ತ್ರಯದ ಮೇಳ ।

ಜಾಲ ವೈಭವದಿಂದ ಮಧುರೆಲಿ ।

ಶೀಲೆ ರಾಣಿ ಮಂಗಮ್ಮನಿದಿರೊಳು ।

ಲೀಲೆಯಲಿ ವಾಕ್ಯಾರ್ಥ 

ಗೆದ್ದಿರ ।। ಚರಣ ।।


ಮಂಗಮ್ಮ ಇವರೀಗೆ ವೈಕುಂಠ 

ವಾಸುದೇವನ ।

ಶೃಂಗರದ ಕಲ್ಪವೃಕ್ಷ ।

ಸಂಗರದೊಳಾ 

ನೀಡೆ ಇವರಿಗೆ ।

ಇಂಗಿತಜ್ಞ ಉಪೇಂದ್ರತೀರ್ಥಗೆ ।

ರಂಗ ಶ್ರೀ ಲಕುಮೀಶ 

ಮೂಲರಾಮನ ।

ಮಂಗಳೋತ್ಸವ 

ದಿಂದ ಗೆದ್ದರ ।। ಚರಣ ।।

****


ಶ್ರೀರಂಗದಲಿ ರಾಜಿಪ ಶ್ರೀ -

ಸುಮತೀಂದ್ರತೀರ್ಥರ ।

ವಾರಿಜಂಘ್ರಿಯ ಸ್ತುತಿಪೆ ।। ಪಲ್ಲವಿ ।।


ಸಾರಿದವರ ದುಷ್ಟ 

ಘೋರ ಪಾಪವ ಕಳೆದು ।

ನಾರಾಯಣನೂರ 

ದಾರಿಯ ತೋರುವ ।। ಅ ಪ ।।


ಮಾರುತ ಮಧ್ವಶಾಸ್ತ್ರ 

ವಾರಿಧಿ ಮೀನರೆನಿಸೆ ।

ಸೂರೀ೦ದ್ರ ಮುನಿವರರು ।

ಧಾರುಣಿ ಸುತ್ತೆ ವಲ್ಲಭಾಂಘ್ರಿಯ ।

ವಾರಿಜಂಗಳ ನೆನೆದು ಕೋವಿದ ।

ಸೇರ್ದ ಸಭೆಯೊಳು ಸುಮತೀಂ-

ದ್ರರೆಂದು ಚಾರು ಸಂನ್ಯಾಸ 

ನೀಡೆ ಮೆರೆದಂಥ  ।। ಚರಣ ।।


ಕಾಲಕಾಲದಿ ಶ್ರೀ ಮೂಲ-

ರಾಮನ ಅರ್ಚಿಸಿ ।

ಶೀಲ ಸದ್ಗುಣಿಯೆನಿಸಿ ।

ಆಲಿಸಿ ಮತ ತ್ರಯದ ಮೇಳ ।

ಜಾಲ ವೈಭವದಿಂದ ಮಧುರೆಲಿ ।

ಶೀಲೆ ರಾಣಿ ಮಂಗಮ್ಮನಿದಿರೊಳು ।

ಲೀಲೆಯಲಿ ವಾಕ್ಯಾರ್ಥ 

ಗೆದ್ದಿರ ।। ಚರಣ ।।


ಮಂಗಮ್ಮ ಇವರೀಗೆ ವೈಕುಂಠ 

ವಾಸುದೇವನ ।

ಶೃಂಗರದ ಕಲ್ಪವೃಕ್ಷ ।

ಸಂಗರದೊಳಾ 

ನೀಡೆ ಇವರಿಗೆ ।

ಇಂಗಿತಜ್ಞ ಉಪೇಂದ್ರತೀರ್ಥಗೆ ।

ರಂಗ ಶ್ರೀ ಲಕುಮೀಶ 

ಮೂಲರಾಮನ ।

ಮಂಗಳೋತ್ಸವ 

ದಿಂದ ಗೆದ್ದರ ।। ಚರಣ ।।

*****