Showing posts with label ಕಂಸಧ್ವಂಸಿ ಪದಾಂಭೋಜ ಸಂಸಕ್ತೋ ಹಂಸಪುಂಗವಃ shree krishna brahmanya teertha stutih. Show all posts
Showing posts with label ಕಂಸಧ್ವಂಸಿ ಪದಾಂಭೋಜ ಸಂಸಕ್ತೋ ಹಂಸಪುಂಗವಃ shree krishna brahmanya teertha stutih. Show all posts

Saturday 1 May 2021

ಕಂಸಧ್ವಂಸಿ ಪದಾಂಭೋಜ ಸಂಸಕ್ತೋ ಹಂಸಪುಂಗವಃ ankita shree krishna brahmanya teertha stutih

ಶ್ರೀ ಬ್ರಹ್ಮಣ್ಯತೀರ್ಥ ವೃಂದಾವನ ಬಂಧಃ 

[ ಬಂಧ ಶ್ಲೋಕ ವ್ಯಾಖ್ಯಾನಮ್ ]


ಕಂಸಧ್ವಂಸಿ ಪದಾಂಭೋಜ 

ಸಂಸಕ್ತೋ ಹಂಸಪುಂಗವಃ ।

ಬ್ರಹ್ಮಣ್ಯ ಗುರುರಾಜಾಖ್ಯೋ 

ವರ್ತತಾಂ ಮಮ ಮಾನಸೇ ।।

" ಬಂಧ ಲಕ್ಷಣಂ ತು "

ಚತುರಸ್ರೇ ಮಧ್ಯಕೋಣೇ 

ವೀಥೀತ್ರ ಯಮಧೋನಯೇತ್ ।

ತಿರ್ಯಗ್ವೀಥೀತ್ರಯಂ ಚಾಪಿ 

ನವ ಕೊಣಾನ್ ಪ್ರಸಾದಯೇತ್ ।।

ತದಧಸ್ತ್ರ್ಯ೦ಶವತ್ಕೋಣಂ 

ತದಧಸ್ತಾದ್ಬೃಹತ್ತಥಾ ।

ಸೋಪಾನಮೇಕಂ ತದಧಸ್ತ-

ಥೋಪರ್ಯೇಕ ಕೋಣಕಮ್ ।।

ತ್ರ್ಯ೦ಶಂ ತದೂರ್ಧ್ವಂ ಶೃಂಗಂ 

ಚ ಚತುರಸ್ತ್ರಂ ಲಿಖೇತ್ತತಃ ।

ಊರ್ಧ್ವದ್ವಿತೀಯ ಕೋಣಾದ್ಯ-

ಭಾಗಮಾರಾಭ್ಯ ವೈ ಲಿಖೇತ್ ।।

ಏಕೈಕಮಕ್ಷರಂ ತತ್ರ 

ದ್ವಿತೀಯೋsಪಿ ಚತುರ್ಥತಃ ।

ಷಷ್ಟೋಷ್ಟಮೇನ ದಶಮೋ 

ದ್ವಾದಶೇನ ಚತುರ್ದಶಃ ।।

ಷೋಡಶೇನ ಚ ವಿಂಶೇನ 

ತಥಾಷ್ಟದಶ ಏಕತಾನ್ । 

ದ್ವಾವಿಂಶಸ್ತು ಚತುರ್ವಿಂಶಾ-

ದೇಕತ್ವಂ ಭಜತೇ ಯಥಾ ।।

ವರ್ಣಮೇಕಂ ತು ಸೋಪಾನೇ 

ಮಧ್ಯವೀಥೀ ಷಡಕ್ಷರೈ: ।

ಉಪೇತಂ ವರ್ಣಮೇಕಂ ಚ 

ಶೃಂಗೇ ತತ್ರಾಂತಿಮಂ ಲಿಖೇತ್ ।

ಶ್ರೀ ವೃಂದಾವನಬಂಧೋsಯ-

ಮುದ್ಧೃತೋsನುಷ್ಪಭಾ ಜಯೇತ್ ।।

ಖಿನ್ನವಿನ್ನಃ ಜಪದ್ವೀಪ 

ಪೂತವಾತಮತಸ್ಥಿತಃ ।

ಶ್ರೀ ಬ್ರಹ್ಮಣ್ಯವ್ರತಗಣ್ಯೋs-

ಗಯೋಗವ್ರತ ತಪನ್ನವ ।।

****

explanation by sri ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ 

" ಹೇ ಖಿನ್ನವಿನ್ನಃ "

ದುಃಖಿತರಾದವರಿಂದ ಅಥವಾ ರೋಗ ಪೀಡಿತರಾದವರಿಂದ ಅಥವಾ ಸಂಸಾರ ಖೇದವನ್ನೂ ಹೊಂದಿರುವವರಿಂದ ತದ್ದುಃಖ ನಿವಾರಣೆಗೋಸ್ಕರ ಆಶ್ರಿತರಾದವರೇ ಅಥವಾ ಖೇದ ನಾಶಕರೆಂದು ವಿಚಾರಿತರಾದವರೇ... 

" ಜಪದ್ವೀಪ "

ಜಪ ಮಾಡತಕ್ಕ ತಪಸ್ವಿಗಳಲ್ಲಿ ಶ್ರೇಷ್ಠರಾದವರೇ ಅಥವಾ ತಮ್ಮನ್ನು ಕುರಿತು ಜಪವನ್ನು ಆಚರಿಸುವವರಿಗೆ ಜ್ಞಾನ ಕೀರ್ತ್ಯಾದಿ ಪ್ರಕಾಶಕರೇ ಅಥವಾ ತಮ್ಮನ್ನು ಕೃತು ಜಪ ಮಾಡತಕ್ಕವರಿಗೆ ತಮ್ಮ ಸ್ವರೂಪವನ್ನು ತೋರಿಸತಕ್ಕವರೇ... 

" ಪೂತವಾತಮತಸ್ಥಿತಃ "

ಪರಮ ಪವಿತ್ರವಾದ ಶ್ರೀ ಮುಖ್ಯಪ್ರಾಣಾವ ಭೂತರಾದ ಶ್ರೀಮನ್ಮಧ್ವಾಚಾರ್ಯರ ಮತದಲ್ಲಿ ಸಂಸ್ಥಿತರಾದವರೇ... 

" ಶ್ರೀ ಬ್ರಹ್ಮಣ್ಯ ವ್ರತಗಣ್ಯ "

ಶ್ರೀದೇವಿ ಸಹಿತನಾದ ವಿಷ್ಣ್ವಾಖ್ಯ ಪರಬ್ರಹ್ಮನಿಗೆ ಪ್ರೀತಿಕರವಾದ ಏಕಾದಶ್ಯುಪವಾಸ - ಹರಿ ಸರ್ವೋತ್ತಮತ್ತ್ವ ಸಾಧನಾದಿ ವ್ರತಗಳಿಂದ ತಾವು ಗಣನೀಯರೂ ಅಥವಾ ತಾದೃಶ ವ್ರತಾಚರಣೆಗಳಲ್ಲಿ ತಾವು ಅಗ್ರಗಣ್ಯರು... 

" ಅಗಯೋಗವೃತ "

ಅಚಲವಾದ ಧ್ಯಾನಯೋಗವೆಂಬ ವ್ರತವನ್ನು ಕೈಕೊಂಡವರೇ ಅಥವಾ " ಅ " ಕಾರ ವಾಚ್ಯನಾದ ಪರಮಾತ್ಮ ಸಂಬಂಧಿ ಯೋಗವೇ ವ್ರತವಾಗುಳ್ಳವರೇ.... 

" ತಪನ್ "

ತಪಸ್ಸನ್ನು ಮಾಡುವವರಾಗಿ ಅಥವಾ ಶತ್ರುಗಳನ್ನು ಪರಿತಪಿಸುವವರಾಗಿ ಅಥವಾ ವಾದಿಗಳನ್ನು ವಾದದಿಂದ ಜಯಸುವವರಾಗಿ ಅಥವಾ ಭಕ್ತರ ಪಾಪಗಳನ್ನು ನಾಶ ಪಡಿಸುವವರಾಗಿ.... 

" ಅವ " = ರಕ್ಷಿಸಿರಿ. 

" ತಪನ್ನಿತಿ ವಿಶೇಷಣಾತ್ ಸೂರ್ಯಾಂಶ 

ಸಂಭೂತತ್ತ್ವಂ ಧ್ವನ್ಯತೇ "

ಈ ಶ್ಲೋಕದಲ್ಲಿ " ತಪನ್ " ಯೆಂಬ ವಿಶೇಷಣದಿಂದ ಶ್ರೀ ಬ್ರಹ್ಮಣ್ಯತೀರ್ಥರು ಸೂರ್ಯಾಂಶ ಸಂಭೂತರೆಂದು ಧ್ವನಿತವಾಗುತ್ತದೆ. 

ಶ್ರೀ ವ್ಯಾಸರಾಜ ಗುರುಸಾರ್ವಭೌಮರು " ನ್ಯಾಯಾಮೃತ " ದಲ್ಲಿ.... 

ಸಮುತ್ಸಾರ್ಯತಮ:ಸ್ತೋಮಂ 

ಸನ್ಮಾರ್ಗ ಸಂಪ್ರಕಾಶ್ಯಚ ।

ಸದಾ ವಿಷ್ಣುಪದಾಸಕ್ತಂ 

ಸೇವೇ ಬ್ರಹ್ಮಣ್ಯಭಾಸ್ಕರಮ್ ।।

****