Saturday 1 May 2021

ಕಂಸಧ್ವಂಸಿ ಪದಾಂಭೋಜ ಸಂಸಕ್ತೋ ಹಂಸಪುಂಗವಃ ankita shree krishna brahmanya teertha stutih

ಶ್ರೀ ಬ್ರಹ್ಮಣ್ಯತೀರ್ಥ ವೃಂದಾವನ ಬಂಧಃ 

[ ಬಂಧ ಶ್ಲೋಕ ವ್ಯಾಖ್ಯಾನಮ್ ]


ಕಂಸಧ್ವಂಸಿ ಪದಾಂಭೋಜ 

ಸಂಸಕ್ತೋ ಹಂಸಪುಂಗವಃ ।

ಬ್ರಹ್ಮಣ್ಯ ಗುರುರಾಜಾಖ್ಯೋ 

ವರ್ತತಾಂ ಮಮ ಮಾನಸೇ ।।

" ಬಂಧ ಲಕ್ಷಣಂ ತು "

ಚತುರಸ್ರೇ ಮಧ್ಯಕೋಣೇ 

ವೀಥೀತ್ರ ಯಮಧೋನಯೇತ್ ।

ತಿರ್ಯಗ್ವೀಥೀತ್ರಯಂ ಚಾಪಿ 

ನವ ಕೊಣಾನ್ ಪ್ರಸಾದಯೇತ್ ।।

ತದಧಸ್ತ್ರ್ಯ೦ಶವತ್ಕೋಣಂ 

ತದಧಸ್ತಾದ್ಬೃಹತ್ತಥಾ ।

ಸೋಪಾನಮೇಕಂ ತದಧಸ್ತ-

ಥೋಪರ್ಯೇಕ ಕೋಣಕಮ್ ।।

ತ್ರ್ಯ೦ಶಂ ತದೂರ್ಧ್ವಂ ಶೃಂಗಂ 

ಚ ಚತುರಸ್ತ್ರಂ ಲಿಖೇತ್ತತಃ ।

ಊರ್ಧ್ವದ್ವಿತೀಯ ಕೋಣಾದ್ಯ-

ಭಾಗಮಾರಾಭ್ಯ ವೈ ಲಿಖೇತ್ ।।

ಏಕೈಕಮಕ್ಷರಂ ತತ್ರ 

ದ್ವಿತೀಯೋsಪಿ ಚತುರ್ಥತಃ ।

ಷಷ್ಟೋಷ್ಟಮೇನ ದಶಮೋ 

ದ್ವಾದಶೇನ ಚತುರ್ದಶಃ ।।

ಷೋಡಶೇನ ಚ ವಿಂಶೇನ 

ತಥಾಷ್ಟದಶ ಏಕತಾನ್ । 

ದ್ವಾವಿಂಶಸ್ತು ಚತುರ್ವಿಂಶಾ-

ದೇಕತ್ವಂ ಭಜತೇ ಯಥಾ ।।

ವರ್ಣಮೇಕಂ ತು ಸೋಪಾನೇ 

ಮಧ್ಯವೀಥೀ ಷಡಕ್ಷರೈ: ।

ಉಪೇತಂ ವರ್ಣಮೇಕಂ ಚ 

ಶೃಂಗೇ ತತ್ರಾಂತಿಮಂ ಲಿಖೇತ್ ।

ಶ್ರೀ ವೃಂದಾವನಬಂಧೋsಯ-

ಮುದ್ಧೃತೋsನುಷ್ಪಭಾ ಜಯೇತ್ ।।

ಖಿನ್ನವಿನ್ನಃ ಜಪದ್ವೀಪ 

ಪೂತವಾತಮತಸ್ಥಿತಃ ।

ಶ್ರೀ ಬ್ರಹ್ಮಣ್ಯವ್ರತಗಣ್ಯೋs-

ಗಯೋಗವ್ರತ ತಪನ್ನವ ।।

****

explanation by sri ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ 

" ಹೇ ಖಿನ್ನವಿನ್ನಃ "

ದುಃಖಿತರಾದವರಿಂದ ಅಥವಾ ರೋಗ ಪೀಡಿತರಾದವರಿಂದ ಅಥವಾ ಸಂಸಾರ ಖೇದವನ್ನೂ ಹೊಂದಿರುವವರಿಂದ ತದ್ದುಃಖ ನಿವಾರಣೆಗೋಸ್ಕರ ಆಶ್ರಿತರಾದವರೇ ಅಥವಾ ಖೇದ ನಾಶಕರೆಂದು ವಿಚಾರಿತರಾದವರೇ... 

" ಜಪದ್ವೀಪ "

ಜಪ ಮಾಡತಕ್ಕ ತಪಸ್ವಿಗಳಲ್ಲಿ ಶ್ರೇಷ್ಠರಾದವರೇ ಅಥವಾ ತಮ್ಮನ್ನು ಕುರಿತು ಜಪವನ್ನು ಆಚರಿಸುವವರಿಗೆ ಜ್ಞಾನ ಕೀರ್ತ್ಯಾದಿ ಪ್ರಕಾಶಕರೇ ಅಥವಾ ತಮ್ಮನ್ನು ಕೃತು ಜಪ ಮಾಡತಕ್ಕವರಿಗೆ ತಮ್ಮ ಸ್ವರೂಪವನ್ನು ತೋರಿಸತಕ್ಕವರೇ... 

" ಪೂತವಾತಮತಸ್ಥಿತಃ "

ಪರಮ ಪವಿತ್ರವಾದ ಶ್ರೀ ಮುಖ್ಯಪ್ರಾಣಾವ ಭೂತರಾದ ಶ್ರೀಮನ್ಮಧ್ವಾಚಾರ್ಯರ ಮತದಲ್ಲಿ ಸಂಸ್ಥಿತರಾದವರೇ... 

" ಶ್ರೀ ಬ್ರಹ್ಮಣ್ಯ ವ್ರತಗಣ್ಯ "

ಶ್ರೀದೇವಿ ಸಹಿತನಾದ ವಿಷ್ಣ್ವಾಖ್ಯ ಪರಬ್ರಹ್ಮನಿಗೆ ಪ್ರೀತಿಕರವಾದ ಏಕಾದಶ್ಯುಪವಾಸ - ಹರಿ ಸರ್ವೋತ್ತಮತ್ತ್ವ ಸಾಧನಾದಿ ವ್ರತಗಳಿಂದ ತಾವು ಗಣನೀಯರೂ ಅಥವಾ ತಾದೃಶ ವ್ರತಾಚರಣೆಗಳಲ್ಲಿ ತಾವು ಅಗ್ರಗಣ್ಯರು... 

" ಅಗಯೋಗವೃತ "

ಅಚಲವಾದ ಧ್ಯಾನಯೋಗವೆಂಬ ವ್ರತವನ್ನು ಕೈಕೊಂಡವರೇ ಅಥವಾ " ಅ " ಕಾರ ವಾಚ್ಯನಾದ ಪರಮಾತ್ಮ ಸಂಬಂಧಿ ಯೋಗವೇ ವ್ರತವಾಗುಳ್ಳವರೇ.... 

" ತಪನ್ "

ತಪಸ್ಸನ್ನು ಮಾಡುವವರಾಗಿ ಅಥವಾ ಶತ್ರುಗಳನ್ನು ಪರಿತಪಿಸುವವರಾಗಿ ಅಥವಾ ವಾದಿಗಳನ್ನು ವಾದದಿಂದ ಜಯಸುವವರಾಗಿ ಅಥವಾ ಭಕ್ತರ ಪಾಪಗಳನ್ನು ನಾಶ ಪಡಿಸುವವರಾಗಿ.... 

" ಅವ " = ರಕ್ಷಿಸಿರಿ. 

" ತಪನ್ನಿತಿ ವಿಶೇಷಣಾತ್ ಸೂರ್ಯಾಂಶ 

ಸಂಭೂತತ್ತ್ವಂ ಧ್ವನ್ಯತೇ "

ಈ ಶ್ಲೋಕದಲ್ಲಿ " ತಪನ್ " ಯೆಂಬ ವಿಶೇಷಣದಿಂದ ಶ್ರೀ ಬ್ರಹ್ಮಣ್ಯತೀರ್ಥರು ಸೂರ್ಯಾಂಶ ಸಂಭೂತರೆಂದು ಧ್ವನಿತವಾಗುತ್ತದೆ. 

ಶ್ರೀ ವ್ಯಾಸರಾಜ ಗುರುಸಾರ್ವಭೌಮರು " ನ್ಯಾಯಾಮೃತ " ದಲ್ಲಿ.... 

ಸಮುತ್ಸಾರ್ಯತಮ:ಸ್ತೋಮಂ 

ಸನ್ಮಾರ್ಗ ಸಂಪ್ರಕಾಶ್ಯಚ ।

ಸದಾ ವಿಷ್ಣುಪದಾಸಕ್ತಂ 

ಸೇವೇ ಬ್ರಹ್ಮಣ್ಯಭಾಸ್ಕರಮ್ ।।

****

No comments:

Post a Comment