Showing posts with label ವರಶಂಖಗದೆ ಪದ್ಮಕರದಿ ಚಕ್ರವ ಪಿಡಿದ gajendra moksha ಗಜೇಂದ್ರ ಮೋಕ್ಷ krishnavittala. Show all posts
Showing posts with label ವರಶಂಖಗದೆ ಪದ್ಮಕರದಿ ಚಕ್ರವ ಪಿಡಿದ gajendra moksha ಗಜೇಂದ್ರ ಮೋಕ್ಷ krishnavittala. Show all posts

Monday 2 August 2021

ವರಶಂಖಗದೆ ಪದ್ಮಕರದಿ ಚಕ್ರವ ಪಿಡಿದ gajendra moksha ಗಜೇಂದ್ರ ಮೋಕ್ಷ ankita krishnavittala

 ಗಜೇಂದ್ರ ಮೋಕ್ಷ

ವರಶಂಖಗದೆ ಪದ್ಮಕರದಿ ಚಕ್ರವ ಪಿಡಿದ

ಗರುಡಗಮನ ನಮ್ಮ ಕರಿವರದಹರಿಯನ್ನ

ನಿರುತ ನೆನೆನೆನೆದು ಬದಿಕಿರಯ್ಯಾ ಪ


ಹರಿಧ್ಯಾನ ಹರಿಸೇವೆ ಹರಿಭಕ್ತಿ ಹರಿಚರಿತೆ

ದುರಿತದುರ್ಗಕೆಕುಲಿಶ ವರಮುಕ್ತಿಸೋಪಾನ ಕಾಣಿರಯ್ಯಾ ಅ.ಪ.


ಕ್ಷೀರಸಾಗರ ಮಧ್ಯೆ ಗಿರಿತ್ರಿಕೂಟ ದೊಳಗೆ

ಇರುವುದೂ ಋತುಮಂತ ವರುಣನ ವರವನವು ಅಲ್ಲಿ

ಪರಿಪರಿಯ ಲತೆಬಳ್ಳಿ ಸರಸಸ್ಥಾನಗಳಲ್ಲಿ

ಮೆರೆವೋರು ಸುರಸಂಘ ನಾರಿಯರ ಸಹಿತಾ 1

ಪದ್ಮಗಾಶ್ರಯವಾದ ಪದ್ಮಕೊಳಾದೊಳಗೆ

ಮದಿಸಿದಾ ಗಜವೊಂದು ಐದಿತು ಪರಿವಾರ ಸಹಿತ

ವಿಧಿಯ ಬಲ್ಲವರಾರು ಮುದದಿರ್ದ ಆ ಗಜಕೆ

ವಿಧಿ ವಕ್ರಗತಿಯಿಂದ ಪಾದವನೆ ಪಿಡಿಯಿತು ನಕ್ರವೊಂದು 2

ಒಂದು ಸಾವಿರ ವರುಷ ಕುಂದದೆಲೆ ಕರಿಮಕರಿ

ನಿಂದು ಹೊರಾಡೆ ಸುರವೃಂದ ಬೆರಗಾಯಿತು

ಬಂಧು ಬಳಗವು ಮತ್ತೆ ಅಂದ ಹೆಂಡಿರು ಎಲ್ಲ

ಕುಂದು ಅಳಿಸದೆ ಇರಲು ಛಂದದಲಿ ಯೋಚಿಸಿತು ಗಜವೂ 3

ಏನಿದ್ದರೇನಯ್ಯ ಶ್ರೀನಿವಾಸನಕೃಪೆಯು

ಇನ್ನಿಲದಾಮೇಲೆ ಕುನ್ನಿಗೆ ಸರಿಎಂದು

ಹೀನ ಎನ್ನಯ ಜನ್ಮ ದೀನ ಭಾವದಿ ಹರಿಯ

ಮಾನವನು ಬದಿಗಿಟ್ಟು ಧ್ಯಾನಿಸಿ ಸ್ತುತಿಸಿದಾ 4

ಸತ್ಯಶಾಶ್ವತಭೋಕ್ತ ಸೃಷ್ಟ್ಯಾದಿಕರ್ಮವಿಗೆ

ನಿತ್ಯ ತೃಪ್ತನು ಆದ ಶಾಡ್ಗುಣ್ಯಪರಿಪೂರ್ಣನೆ ವಂದಿಸುವೆನೋ

ಓತಪ್ರೋತದಿ ಜಗದಿ ವ್ಯಾಪ್ತ ಆಪ್ತನು ಆದ

ಉತ್ಪತ್ತಿವರ್ಜಿತ ಅಚ್ಯುತಾನಂತನಿಗೆ ಎತ್ತಿ ಸೊಂಡಿಲನಾ

ಆರ್ತದಲಿ ಕರೆವೆನೋ 5

ಎಲ್ಲಕಡೆಯಲಿ ಇರ್ಪ ಎಲ್ಲರೂಪವ ತಾಳ್ವ

ಎಲ್ಲ ಪ್ರೇರಣೆಮಾಳ್ವ ಎಲ್ಲರಿಂ ಭಿನ್ನನಿಗೆ ವಂದಿಸುವೆನೋ

ಎಲ್ಲರಿಂ ಉತ್ತಮಗೆ ಎಲ್ಲರಾ ಬಿಂಬನಿಗೆ

ಎಲ್ಲರ ವಾಚ್ಯನಿಗೆ ನಲ್ಲನೆಂತೆಂದು ನಾಕರೆವೆನೋ 6

ಎಲ್ಲವಾ ತಿಳಿದವಗೆ ಎಲ್ಲ ಕಾಲಗಳಲ್ಲಿ

ಎಲ್ಲ ಕೆಲಸಗಳನ್ನು ನಿಲ್ಲದೆಲೆ

ಮಾಡುವಗೆ ವಂದಿಸುವೆನೋ

ಎಲ್ಲರನು ಗೆದ್ದವಗೆ ಎಲ್ಲರಾನಲ್ಲನಿಗೆ

ಎಲ್ಲ ದೋಷವಿಹೀನ ಒಳ್ಳೆ ಗುಣ ಪೂರ್ಣನ ಕರೆವೆನೋ 7

ನಿನ್ನ ತಿಳಿದವರಿಲ್ಲ ನಿನ್ನ ಮೀರಿದುದಿಲ್ಲ

ಜನನ ಮರಣಗಳಿಲ್ಲ ನಿನಗಿಲ್ಲ ಸಮ ಅಧಿಕ ವಂದಿಸುವೆನೋ

ನಿನ್ನನಾಮಕೆ ಗುಣಕೆ ನಿನ್ನ ಅವಯವಕೆ

ನಿನ್ನ ಕ್ರಿಯ ರೂಪಗಳಿಗೆ ಇನ್ನಿಲ್ಲವೊ ಭೇದಸಾರಿ ನಾಕರೆವೆನೋ 8

ವೇದಗಮ್ಯನುನೀನೆ ವೇದದಾಯಕ ನೀನೆ

ವೇದಾತೀತನು ನೀನೆ ಸಾಧು ಪ್ರಾಪ್ಯನುನೀನೆ ವಂದಿಸುವೆನೋ

ಖೇದವರ್ಜಿತನೀನೆ ಅಂದ ಸಾರವು ನೀನೆ

ಬಂಧನೀಡುವ ನೀನೆ ಅದ್ಭುತ ಅಚಿಂತ್ಯಶಕ್ತಿವಂತನ ಕರೆವೆನೋ 9

e್ಞÁನಿಗೋಚರನೀನೆ ಗುಣಾತೀತನು ನೀನೆ

ಗುಣಪ್ರವರ್ತಕನೀನೆ ಅನಾಥ ಸರ್ವಸಮ ವಂದಿಸುವೆನೋ

e್ಞÁನದಾಯಕನೀನೆ ಆನಂದಮಯನೀನೆ

ನೀನೇ ಸರ್ವಾಧಾರ ನೀನೆ ಏಕನು ಎಂದು ಕೂಗಿ ನಾಕರೆವೆನೋ 10

ಸಾಕಾರ ನಿರಾಕಾರ ಆಕಾರ ಅಹೇಯ

ಓಂಕಾರ ವಾಚ್ಯನೆ ಸಾಕಲ್ಯಸಿಗದವನೆ ಸ್ವೀಕಾರ ಮಾಡೋ

ವಿಕಾರ ವರ್ಜಿತನೆ ಲೋಕೈಕವೀರಾನೆ

ನೀ ಕೆವಲನು ಮುಕ್ತೇಶ ಸಲಹೋ 11

ಏನು ಕೊಡಲೊ ದೇವ ದೀನನು ನಾನಯ್ಯ

ನಿನ್ನದೇ ಈ ಭಾಗ್ಯ ಮನ್ನಿಸುತ ದಯಮಾಡಿ ಸಲಹೋ

ಘನ್ನಕರುಣಾಳುವೆ ಅನ್ಯರನು ನಾ ನೊಲ್ಲೆ

ನಿನ್ನವನು ನಿನ್ನವನೋ ನಿನ್ನ ಚರಣಕೆ ಶರಣು ಶರಣೂ 12

ಪರಿಪರಿಯಲಿ ಕರಿ ತಾನು ಮೊರೆಯಿಡುತ ಕೂಗಲು

ಸುರವೃಂದ ಯೋಚಿಸುತ ಹರಿಯಲ್ಲದನ್ಯತ್ರ

ಅರಿಯೆವೀಗುಣವೆಂದು ಅರಿತು ಸುಮ್ಮನಿರಲೂ

ಹರುಷದಿಂದಲಿ ಹರಿಯು ಗುರುಡನೇರುತ ಬರಲು

ತರಿದು ನಕ್ರನ ಭರದಿ ಕರಿಯಪೊರೆಯೆ ಆದ 13

ಏನೆಂದು ವರ್ಣಿಸಲಿ ಶ್ರೀನಿವಾಸನ ಕರುಣ

ದೀನ ಭಕ್ತರ ಮೇಲೆ ಸಾನುರಾಗದಿ ಕರಿಯ ಹಿಡಿದೆತ್ತಿದಾ

ಇನ್ಯಾಕೆ ಭಯವಯ್ಯ ಘನ್ನ ಇಂದ್ರದ್ಯುಮ್ನನೆ ಏಳು

ಮುನ್ನಿನಾ ದೋಷವಿದು ಇನ್ನು ನೀ ಧನ್ಯನಹುದೋ 14

ದೇವಲನ ಶಾಪದಲಿ ಆ ವರ ನಕ್ರನಾಗಿದ್ದ

ಶ್ರೀವರನ ಭಕ್ತ ಹೂಹೂ ಗಂಧರ್ವನೆರಗಿ ಬಿದ್ದನು ಹರಿಗೇ

ದೇವೇಶ ಹುಸಿನಗುತ ಈವೆ ವರವನು ಕೇಳಿ

ಯಾವಾತ ಈ ಕಥೆಯ ಭಾವಶುದ್ಧದಿ ಭಜಿಸೆ ಉದಯದಲಿ

ನಾ ಒಲಿವೆ ತವಕದಲಿ ಎಂದನೂ 15

ಹರಿಗೆ ಸಮರಾರಿಲ್ಲ ಹರಿಭಕ್ತ ಗೆಣೆಯಿಲ್ಲ

ಹರಿ ಹರೀಶ ಶರಣೆಂದು ಸುರರು ಮೊರೆಯಿಟ್ಟರಾಗ

ಹರಿವಾಯುಗುರುಗಳು ಕರುಣದಿಂದಲಿ ಇದನು

ಅರುಹಿ ಬರೆಯಿಸಿದರಿಂದು ಪೋರನನು

ಮನ್ನಿಪುದು ಬುಧರೂ 16

ಮುದ್ದುಜಯತೀರ್ಥರ ಹೃದಯದಲಿನಲಿಯುವ

ಮಧ್ವಾಂತಃಕರಣದಿ ಮುದ್ದಾಗಿ ಕುಣಿಯುವಂಥ

ಮಾಧವ ಶ್ರೀಕೃಷ್ಣವಿಠಲರಾಯನು ಬೇಗ

ಮುದ ಮೋದ ಸುರಿಸುವ ಈ ಪದವ ಪಠಿಸಲೂ 17

****