Showing posts with label ಗುರುಗಳನುದಿನ ನೆನೆವೆ ankita pranesha vittala guruparampara stotra RM. Show all posts
Showing posts with label ಗುರುಗಳನುದಿನ ನೆನೆವೆ ankita pranesha vittala guruparampara stotra RM. Show all posts

Saturday 1 May 2021

ಗುರುಗಳನುದಿನ ನೆನೆವೆ ankita pranesha vittala and ಯತಿಗಳ ಸಂತತ ankita varadesha vittala guruparampara stotra rayara mutt

Guruparampara of Rayara Mutt - both pranesha vittala and (continued by) varadesha vittala are given below:

ಗುರುಗಳನುದಿನ ನೆನೆವೆ ನಾ ।

ದುರಿತ ದಟ್ಟಳಿ ಸಾರಿ 

ಬಂದೀತಿನ್ನೇನಾ ।। ಪಲ್ಲವಿ ।।


" ಶ್ರೀಮದಾನಂದತೀರ್ಥರು  ( ಕ್ರಿ ಶ 1238 - 1317 )  "

ಪಾರ್ಥ ಸೇವಾರ್ಥ 

ಖಳರ ಕೊಂದು ।

ಕೀರ್ತಿ ಪಡೆದ ಸುಖತೀರ್ಥ-

ರೆಂತೆಂಬ ।। ಚರಣ ।।            

" ಶ್ರೀ ಪದ್ಮನಾಭತೀರ್ಥರು ( ಕ್ರಿ. ಶ. 1317 - 1324 ) 

ನಾ ಪಾಲೀಸೆಂದೆ-

ನಲಾಪತ್ತು ಬಿಡಿಸುವ ।

ಮಾಪತಿ ನಿಜದೂತ ಶ್ರೀ -

ಪದ್ಮನಾಭತೀರ್ಥಾ ।। ಚರಣ ।।            

" ಶ್ರೀ ನರಹರಿತೀರ್ಥರು ( ಕ್ರಿ. ಶ. 1324 - 1333 ) "

ಕರಿಪತಿ ಬಳಿಬಂದ 

ಧರಿಜ ಪತಿಯ ತಂದು ।

ಗುರುಗಳಗಿತ್ತೀಹ 

ನರಹರಿತೀರ್ಥಾ ।। ಚರಣ ।।            

" ಶ್ರೀ ಮಾಧವತೀರ್ಥರು ( ಕ್ರಿ. ಶ. 1333 - 1350 ) "

ಬಾದರಾಯಣ ಪಾದ 

ಜಲಜ ಭೃಂಗ ।

ಭೂದೇವ ವಂದಿತ 

ಶ್ರೀ ಮಾಧವತೀರ್ಥಾ ।। ಚರಣ ।।            

" ಶ್ರೀ ಅಕ್ಷೋಭ್ಯತೀರ್ಥರು ( ಕ್ರಿ. ಶ. 1350 - 1365 ) 

ಇಕ್ಷುಚಾಪನ ಮಾಳ್ಪ 

ಲಕ್ಷ್ಮೀ ಇಲ್ಲದೆ ಬಲು ।

ಪೇಕ್ಷೆ ಮಾಡಿದ 

ಅಕ್ಷೋಭ್ಯ ಮುನಿಪಾ ।। ಚರಣ ।।            

" ಶ್ರೀ ಜಯತೀರ್ಥರು ( ಕ್ರಿ. ಶ. 1365 - 1388 ) "

ದಯ ಮಾಡಿದರೆಂದು 

ವಿನಯದಿಂದ ಭಜಿಪರ ।

ಬಯಕೀ ಪೂರೈಸುವ 

ಜಯತೀರ್ಥರೆಂಬ ।। ಚರಣ ।।            

" ಶ್ರೀ ವಿದ್ಯಾಧಿರಾಜ ತೀರ್ಥರು ( ಕ್ರಿ. ಶ. 1388 - 1392 ) "

ಅದ್ವೈತ ಗಜ ಸಿಂಹ 

ಮಧ್ವ ಮತೋದ್ಭವ ।

ಸದ್ವೈಷ್ಣವ ಪ್ರಿಯ 

ವಿದ್ಯಾಧಿರಾಜ ।। ಚರಣ ।।            

" ಶ್ರೀ ಕವೀಂದ್ರತೀರ್ಥರು ( ಕ್ರಿ. ಶ. 1392 - 1398 ) "

ಸಂದೇಹವಿಲ್ಲದೆ 

ವಂದಿಪ ಜನರಾಸೆ ।

ತಂದುಕೊಡುವ ದಯಾಸಿಂಧು 

ಕವೀಂದ್ರಾ ।। ಚರಣ ।।            

" ಶ್ರೀ ವಾಗೀಶತೀರ್ಥರು ( ಕ್ರಿ. ಶ. 1398 - 1406 ) "

ರಾಗ ವರ್ಜಿತ 

ಭಾಗವತರ ಪಾಲ ।

ಯೋಗಿ ಶಿರೋಮಣಿ 

ವಾಗೀಶ ಮುನಿಪಾ ।। ಚರಣ ।।            

" ಶ್ರೀ ರಾಮಚಂದ್ರತೀರ್ಥರು ( ಕ್ರಿ. ಶ. 1406 - 1435 ) "

ಸಾರಿದ ಭಕುತರ 

ಘೋರಿಪ ಅಘಗಳ ।

ದೂರ ಓಡಿಸುತಿಪ್ಪ 

ಶ್ರೀ ರಾಮಚಂದ್ರ ।। ಚರಣ ।।            

" ಶ್ರೀ ವಿಬುಧೇಂದ್ರತೀರ್ಥರು ( ಕ್ರಿ. ಶ. 1435 - 1490 ) "

ಕು ಭವದೊಳಿರುವಾರ 

ಸೊಬಗಿನಿಂದಲಿ ನೋಡಿ ।

ಅಭಯ ಕೊಡುತಿಪ್ಪ 

ವಿಬುಧೇಂದ್ರತೀರ್ಥಾ ।। ಚರಣ ।।            

" ಶ್ರೀ ಜಿತಾಮಿತ್ರತೀರ್ಥರು ( ಕ್ರಿ. ಶ. 1490 - 1492 ) "

ಭ್ರಾಮಕ ಜನ ಶಿಕ್ಷ 

ಧೀಮಂತ ಜನ ಪಕ್ಷ ।

ಹೇಮ ವರಣಾಂಗ 

ಜಿತಾಮಿತ್ರ ಮುನಿಪಾ ।। ಚರಣ ।।            

" ಶ್ರೀ ರಘುನಂದನತೀರ್ಥರು ( ಕ್ರಿ. ಶ. 1492 - 1504 ) "

ಬಗೆ ಬಗೆಯ ಭಜಿಸಲು 

ಇಗಡ ಜನರೊಲ್ಲ ।

ಬಗಿವಾನು ಸುಜನಾರ 

ರಘುನಂದನಾರ್ಯ ।। ಚರಣ ।।            

" ಶ್ರೀ ಸುರೇಂದ್ರತೀರ್ಥರು ( ಕ್ರಿ. ಶ. 1504 - 1575 ) "

ಪೊಂದಿದವರ ನೋಯ-

ದಂದದಿ ಸಲಹುವ ।

ಎಂದೆಂದು ಬಿಡದ ಸು-

ರೇಂದ್ರಾಖ್ಯ ಮುನಿಪಾ ।। ಚರಣ ।।           

 ।

" ಶ್ರೀ ವಿಜಯೀಂದ್ರತೀರ್ಥರು ( ಕ್ರಿ. ಶ. 1575 - 1614 ) "

ನಿಜ ಭಕ್ತಿಯಲಿ ಪಾದ 

ಭಜಿಸೂವ ಅಗಣಿತ ।

ಸುಜನರ ಸಲಹುವ 

ವಿಜಯೀಂದ್ರ ಮುನಿಪಾ ।। ಚರಣ ।।            

" ಶ್ರೀ ಸುಧೀಂದ್ರತೀರ್ಥರು ( ಕ್ರಿ. ಶ. 1614 - 1623 ) "

ವೀಂದ್ರ ವಾಹನ ಯಾದ-

ವೇಂದ್ರಾ೦ಘ್ರಿ ಭಜಿಸೂವ ।

ಸಾಂದ್ರ ಭಕ್ತಿಯಲಿ 

ಸುಧೀಂದ್ರಾಖ್ಯ ಮುನಿಪಾ ।। ಚರಣ ।।            

" ಶ್ರೀ ರಾಘವೇಂದ್ರತೀರ್ಥರು ( ಕ್ರಿ. ಶ. 1623 - 1671 ) "

ಧಾರುಣಿಯೊಳಗತಿ 

ಚಾರು ವೃಂದಾವನ ।

ದೀ ರಾಜಿಸುತಿಪ್ಪ 

ರಾಘವೇಂದ್ರಾ ।। ಚರಣ ।।

*****

" ಶ್ರೀ ಹರುಷ ಮುನಿ - 14/2 "

" ಶ್ರೀ ಯೋಗೀಂದ್ರತೀರ್ಥರು ( ಕ್ರಿ. ಶ. 1671 - 1688 ) "

ಶ್ಲಾಘೀನ ಗುಣನಿಧಿ 

ಮಾಗಧ ರಿಪು ದಾಸ ।

ರಾಘವೇಂದ್ರ ಪುತ್ರ 

ಯೋಗೀಂದ್ರತೀರ್ಥಾ ।। ಚರಣ ।।            

" ಶ್ರೀ ಸೂರೀಂದ್ರತೀರ್ಥರು ( ಕ್ರಿ. ಶ. 1688 - 1692 ) "

ವೈರಾಗ್ಯ ಗುಣದಿಂದ 

ಮಾರಾರಿಯಂದದಿ ।

ತೀರುವರನುದಿನ 

ಸೂರೀಂದ್ರತೀರ್ಥಾ ।। ಚರಣ ।।            

" ಶ್ರೀ ಸುಮತೀಂದ್ರತೀರ್ಥರು ( ಕ್ರಿ. ಶ. 1692 - 1725 ) "

ಕುಮತವೆಂಬಗಣೀತ 

ತಿಮಿರ ಓಡಿಸುವಲ್ಲಿ ।

ಕಮಲಾಪ್ತನಂತೀಹ 

ಸುಮತೀಂದ್ರತೀರ್ಥಾ ।। ಚರಣ ।।            

" ಶ್ರೀ ಉಪೇಂದ್ರತೀರ್ಥರು ( ಕ್ರಿ. ಶ. 1725 - 1728 ) "

ಸಲ್ಲಾದ ಸುಖಗಳ 

ನೆಲ್ಲಾವು ಜರಿದು । ಶ್ರೀ ।

ನಲ್ಲಾನ ಭಜಿಸಲು 

ಬಲ್ಲ ಉಪೇಂದ್ರತೀರ್ಥಾ ।। ಚರಣ ।।            

" ಶ್ರೀ ವಾದೀಂದ್ರತೀರ್ಥರು ( ಕ್ರಿ. ಶ. 1728 - 1750 ) "

ಮೋದಮುನಿ ಮತ 

ಮಹೋದಧಿ ಚಂದ್ರ । ವಿ ।

ದ್ಯಾದಿ ದಾನಾಸಕ್ತ 

ವಾದೀಂದ್ರತೀರ್ಥಾ ।। ಚರಣ ।।            

" ಶ್ರೀ ವಸುಧೇಂದ್ರತೀರ್ಥರು ( ಕ್ರಿ. ಶ. 1750 - 1761 ) "

ಬಿಸಜನಾಭನ ದೂತ 

ವಸುಧಿಯೊಳಗೆ ಖ್ಯಾತ ।

ಕಿಸಲಯೋಪಮ ಪಾದ 

ವಸುಧೇಂದ್ರತೀರ್ಥಾ ।। ಚರಣ ।।           

 ।

" ಶ್ರೀ ವರದೇಂದ್ರತೀರ್ಥರು ( ಕ್ರಿ. ಶ. 1761 - 1785 ) "

ಪರ ಮತೋರಗ ವೀಪ 

ಕರುಣಿ ವಿಗತ ಕೋಪ ।

ವರ ವೇದ ಸುಕಲಾಪ 

ವರದೇಂದ್ರ ಭೂಪ ।। ಚರಣ ।।

" ಶ್ರೀ ಧೀರೇಂದ್ರತೀರ್ಥರು ( ಕ್ರಿ. ಶ. 1775 - 1785 ) "

ತ್ವರದಿ ಭಕುತರ 

ದುರಿತವ ತರಿದತಿ ।

ತ್ವರದಿ ಪಾಲಿಪಾ 

ಧೀರೇಂದ್ರತೀರ್ಥಾ ।। ಚರಣ ।।

" ಶ್ರೀ ಭುವನೇಂದ್ರತೀರ್ಥರು ( ಕ್ರಿ. ಶ. 1785 - 1799 )

ಸುವಿವೇಕಿಗಳಿಗಿಷ್ಟ ತವಕದಿಂದಲಿ ಈವ ।

ಕವಿಭಿರೀಡಿತ ಪಾದ ಭುವನೇಂದ್ರತೀರ್ಥಾ ।। ಚರಣ ।।            

" ಶ್ರೀ ಸುಬೋಧೇಂದ್ರತೀರ್ಥರು ( ಕ್ರಿ. ಶ. 1799 - 1835 ) "

ಶಬರಿ ವಲ್ಲಭನಂಘ್ರಿ 

ಅಬುಜಾಳಿ ಸೂರ್ಯ । ಸ ।

ನ್ನಿಭ ವಾದಿ ಗಜ ಸಿಂಹ 

ಸುಬೋಧೇಂದ್ರತೀರ್ಥಾ ।। ಚರಣ ।।            

ಪ್ರಾಣೇಶವಿಠ್ಠಲನ 

ಕಾಣಬೇಕಾದರೆ ।

ನಮ್ಮ ಗುರುಗಳ 

ಧ್ಯಾನದೊಳಿಹದೂ ।। ಚರಣ ।। 

***           


ಶ್ರೀ ಪ್ರಾಣೇಶದಾಸರು ಶ್ರೀ ರಾಯರ ಮಠದ ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪರಂಪರಾ ಸ್ತೋತ್ರವನ್ನು ಶ್ರೀ ಪರಮಾತ್ಮನಿಂದ ಪ್ರಾರಂಭ ಮಾಡಿ ಶ್ರೀ ಸುಬೋಧೇಂದ್ರತೀರ್ಥರ ವರಗೆ ಸ್ತೋತ್ರ ಮಾಡಿದ್ದರು.

ಶ್ರೀ ಪ್ರಾಣೇಶದಾಸರ ದೌಹಿತ್ರ ಮೊಮ್ಮಕ್ಕಳಾದ ಶ್ರೀ ವರದೇಶವಿಠ್ಠಲರು - ಶ್ರೀ ಸುಬೋಧೇಂದ್ರತೀರ್ಥರಿಂದ ಶ್ರೀ ಸುಶೀಲೇಂದ್ರತೀರ್ಥರ ವರೆಗೆ ಶ್ರೀ ರಾಯರ ಮುಂದುವರೆದ ಪರಂಪರಾ ಯತಿಗಳ ಸ್ತೋತ್ರ ಮಾಡಿದ್ದಾರೆ!!

ರಾಗ : ಪೂರ್ವೀ ತಾಳ : ಅಟ್ಟ

ಯತಿಗಳ ಸಂತತ 

ಸಂಸ್ತುತಿಸುವೆ ।

ಅತಿ ತ್ವರದಲಿ ದು-

ರಿತಗಳ ತರಿವೆ ।। ಪಲ್ಲವಿ ।।


ಮೋದ ತೀರ್ಥಾದಿ ಸು-

ಬೋಧೇಂದ್ರ ಪರಿಯಂತ ।

ಮೋದದಿನ್ದಿವರ 

ಪಾದಕೆ ನಮಿಪೆ ।। ಚರಣ ।।


" ಶ್ರೀ ಸುಜನೇಂದ್ರತೀರ್ಥರು ( ಕ್ರಿ. ಶ. 1807 - 1836 ) "

ಅಜನ ಪಿತನ ಪಾದ 

ಭಜಿಸುವ ಭಕುತರ ।

ನಿಜವಾಗಿ ಪಾಲಿಪ 

ಸುಜನೇಂದ್ರತೀರ್ಥಾ ।। ಚರಣ ।।

" ಶ್ರೀ ಸುಜ್ಞಾನೇಂದ್ರತೀರ್ಥರು ( ಕ್ರಿ. ಶ. 1836 - 1861 ) "

ಆನತು ಜನ ಪಾಪ 

ಕಾನನ ದಹಿಪ । ಕೃ ।

ಶಾಂತನಂತಿಪ್ಪ ಸು-

ಜ್ಞಾನೇಂದ್ರತೀರ್ಥಾ ।। ಚರಣ ।।            

" ಶ್ರೀ ಸುಧರ್ಮೇಂದ್ರ ತೀರ್ಥರು ( ಕ್ರಿ. ಶ. 1861 - 1872 ) "

ದುರ್ಮತ ಧ್ವಂಸ 

ಸದ್ಧರ್ಮ ಸಂಸ್ಥಾಪಕ ।

ಕರ್ಮಂದಿವರ 

ಸುಧರ್ಮೇಂದ್ರತೀರ್ಥಾ ।। ಚರಣ ।।            

" ಶ್ರೀ ಸುಗುಣೇಂದ್ರತೀರ್ಥರು ( ಕ್ರಿ. ಶ. 1872 - 1884 ) "

ಅಗಣಿತ ಮಹಿಮ ಮೂ-

ಜಗದೊಳು ಪ್ರಖ್ಯಾತ ।

ನಿಗಮಾಗಮಜ್ಞ 

ಸುಗುಣೇಂದ್ರತೀರ್ಥಾ ।। ಚರಣ ।।            

" ಶ್ರೀ ಸುಪ್ರಜ್ಞೇಂದ್ರ ತೀರ್ಥರು ( ಕ್ರಿ. ಶ. 1884 - 1903 ) "

ಸುಪ್ರಸಿದ್ಧ ಮುನಿ 

ವಿಪ್ರ ಸಮೂಹವ ।

ಕ್ಷಿಪ್ರದಿ ಪಾಲಿಪ 

ಸುಪ್ರಜ್ಞೇಂದ್ರತೀರ್ಥಾ ।। ಚರಣ ।।            

" ಶ್ರೀ ಸುಕೃತೀಂದ್ರ ತೀರ್ಥರು ( ಕ್ರಿ. ಶ. 1903 - 1912 ) "

ದೋಷ ವರ್ಜಿತ ಹರಿ-

ದಾಸ ಜನರ ಪ್ರಿಯ ।

ಶ್ರೀಶ ಪದಾರ್ಚಕ 

ಸುಕೃತೀಂದ್ರತೀರ್ಥಾ ।। ಚರಣ ।।            

" ಶ್ರೀ ಸುಶೀಲೇಂದ್ರತೀರ್ಥರು ( ಕ್ರಿ. ಶ. 1912 - 1926 ) "

ಮೂಲೋಕ ವಿಖ್ಯಾತ 

ಶ್ರೀಲೋಲನಂಘ್ರಿ । ರೇ ।

ಲಾಲಜ ಮಧುಪಾ ಸು-

ಶೀಲೇಂದ್ರ ಮುನಿಪಾ ।। ಚರಣ ।।            

ವರದೇಶವಿಠ್ಠಲನ 

ಪರಿ ಪರಿ ಪೂಜಿಪ ।

ಪರಮಹಂಸ ಪಾದ-

ಕೆರಗಿ ಬಿನ್ನೈಪೆ ।। ಚರಣ ।।

(upto susheelendra teertharu)

inputs by acharya nagaraju haveri, Bengaluru

*****