Showing posts with label ಎಚ್ಚರಿಕೆ ಎಚ್ಚರಿಕೆ ಮನವೆ ಅಚ್ಯುತನ ಪಾದಾರವಿಂದ siripurandara vittala. Show all posts
Showing posts with label ಎಚ್ಚರಿಕೆ ಎಚ್ಚರಿಕೆ ಮನವೆ ಅಚ್ಯುತನ ಪಾದಾರವಿಂದ siripurandara vittala. Show all posts

Tuesday 1 June 2021

ಎಚ್ಚರಿಕೆ ಎಚ್ಚರಿಕೆ ಮನವೆ ಅಚ್ಯುತನ ಪಾದಾರವಿಂದ ankita siripurandara vittala

 ರಾಗ ಯದುಕುಲಕಾಂಭೋಜ ಅಟತಾಳ


ಎಚ್ಚರಿಕೆ ಎಚ್ಚರಿಕೆ ಮನವೆ ||ಪ||

ಅಚ್ಯುತನ ಪಾದಾರವಿಂದ ಧ್ಯಾನದಲಿ ||ಅ||


ತೊಗಲುಚೀಲೊಂಭತ್ತು ಹರಕು , ಬಹು

ಬಿಗಿದ ನರಗಳು ಎಲುವುಗಳ ಸಿಲುಕು

ಮಿಗೆ ರಕ್ತಮಾಂಸದ ಹೊಳಕು, ಒ-

ಳಗೆ ಕಫ ವಾತ ಪಿತ್ತದ ಸರಕು ||


ಆಶೆ ಪಾಶದೊಳಗೆ ಸಿಲುಕಿ, ಬಹು-

ಕ್ಲೇಶ ಪಟ್ಟೆ ತುಚ್ಛ ಸುಖಕೆ ಅಳುಕಿ

ಹೇಸಿ ಸಂಸಾರದಲಿ ಸಿಲುಕಿ , ಮಾಯ-

ಕ್ಲೇಶವೆಂಬುದು ಕೇಳಿ ಮೈಮರೆತು ಸೊಕ್ಕಿ ||


ಕಣ್ಣುಗಳಿಗವಕಾಶ ಕೊಟ್ಟು , ಪರ-

ಹೆಣ್ಣುಗಳ ನೀ ನೋಡಿ ಮೈಮರೆತು ಕೆಟ್ಟು

ಪುಣ್ಯದಾ ಹಾದಿಗಳ ಬಿಟ್ಟು , ಅಂತ-

ಕನ್ನ ಯಾತನದಿ ನೀ ಕಷ್ಟಪಟ್ಟು ||


ಕರಣಗಳಿಗವಕಾಶ ಕೊಟ್ಟು , ಹಾಳು

ಹರಟೆಗಳಿಗೆ ನೀ ಮೈಮರೆತು ಕೆಟ್ಟು

ಹರಿಯ ನಾಮಗಳನ್ನೆ ಬಿಟ್ಟು , ಮಹಾ

ನರಕಬಾಧೆಗೆ ನೀ ಮೈಯ ಕೊಟ್ಟು ||


ಹಣ ಹೆಣ್ಣು ಮಣ್ಣಾಸೆ ವ್ಯರ್ಥ , ಈ

ತನುವಿಗೆ ಯಮಪುರದ ಪಯಣವೆ ನಿತ್ಯ

ಉಣಿಸು ತೃಷಾದಿಗಳು ಮಿಥ್ಯ , ಅಂತ-

ಕನ ಯಾತನೆಗೆ ಹರಿನಾಮ ಪಥ್ಯ ||


ದುಷ್ಟರ ಸಹವಾಸಹೀನ , ಬಲು

ಶಿಷ್ಟರ ಸಂಗವೆ ಪರಕೆ ಬಹುಮಾನ

ಎಷ್ಟು ಓದಿದರಷ್ಟು ಜ್ಞಾನ , ಬರೆ

ಶ್ರೇಷ್ಠ ಭಕುತಿ ಮಾಡುವುದೆ ಸಾಧನ ||


ನಾಲಿಗೆ ಹರಿ ಬಿಡಬೇಡ , ತಿಂಡಿ

ಪಾಲಲೋಲ ರುಚಿಪಾಕಗಳೆಣಿಸಬೇಡ

ಹಾಳು ಮಾತುಗಳಾಡಬೇಡ

ಸಿರಿ ಪುರಂದರವಿಠಲನ ಬಿಡಬೇಡ ||

****