Showing posts with label ಶ್ರೀರಘುಪ್ರೇಮತೀರ್ಥರ ಚಾರು ಚರಣವ raghurama vittala. Show all posts
Showing posts with label ಶ್ರೀರಘುಪ್ರೇಮತೀರ್ಥರ ಚಾರು ಚರಣವ raghurama vittala. Show all posts

Wednesday 22 September 2021

ಶ್ರೀರಘುಪ್ರೇಮತೀರ್ಥರ ಚಾರು ಚರಣವ ankita raghurama vittala

 ಮುತ್ತಿಗಿ ಶ್ರೀ ಸ್ವಾಮಿರಾಯಾಚಾರ್ಯರ ಕೃತಿ

ಶ್ರೀ ರಘುಪ್ರೇಮ ತೀರ್ಥರ ಪೂರ್ವಾಶ್ರಮ ಪುತ್ರರು


ಶ್ರೀರಘುಪ್ರೇಮತೀರ್ಥರ ಚಾರು

 ಚರಣವ | 

ಬಾರಿಬಾರಿಗೆ ನಮಿಸಿ ಓಲೈಸುವೆ

|| ಪ. ||


ಮಾರಮಣನು ತನ್ನ ನಿಜದಾರಿ ತೋರೆಂದು | 

ಧಾರುಣಿಗೆ ಕಳುಹಿದನು ಮಹಿಮಹಿಮರ

|| ಅ. ಪ. ||


ಹಿಂದಿನಾಶ್ರಮದ ಸತ್ಕರ್ಮಗಳನ್ನು ಬಿಡದೆ | 

ಇಂದಿರೇಶನ ಧ್ಯಾನದಿಂದ ಮಾಡಿ ||

ಮಂದಮತಿಗಳ ಮನದ ಸಂದೇಹಗಳ್ಹರಿಸಿ | 

ಮುಂದೆ ಮಾರ್ಗವ ತೋರಿ ಬಂಧವ ಬಿಡಿಸುವ 

|| ೧ ||


ಹದಿನೆಂಟು ನೂರು ನಾಲ್ವತ್ತೆರಡನೇ ರೌದ್ರಿ | 

ಅಧಿಕ ಶ್ರಾವಣ ಕೃಷ್ಣ ಷಷ್ಟಿ ಶುಕ್ರವಾರ ||

ಮುದದಿ ತುರ್ಯಾಶ್ರಮ ಸ್ವೀಕರಿಸುತ ಮಠ | 

ಭೇದವಿಲ್ಲದಲೇ ತಪ್ತಮುದ್ರಾಗಳ್ಕೋಟ್ಟರೆಂಬೋ

|| ೨ ||


ದುಷ್ಟ ಮೋಹವ ತ್ಯಜಿಸಿ ವಿಷಯದಾಸೆಯ ಹಿರಿಸಿ | ಸೃಷ್ಟಿ ಸ್ಥಿತಿಗಾದಿ ಕಾರಣನಾದ ಜಗದೀ ||

ಶ್ರೇಷ್ಠ ಮೂರುತಿಯಾದ ರಘುರಾಮ ವಿಠಲ ನ | ನಿಷ್ಠೆಯಲಿ ಭಜಿಸಿ ಕರುಣವ ಪಡೆದಂಥಾ 

|| ೩ ||

***