Showing posts with label ಯತಿಕುಲತಿಲಕ ಶ್ರೀ ರಾಘವೇಂದ್ರರಿಗೆ garudavahana vittala. Show all posts
Showing posts with label ಯತಿಕುಲತಿಲಕ ಶ್ರೀ ರಾಘವೇಂದ್ರರಿಗೆ garudavahana vittala. Show all posts

Monday 6 September 2021

ಯತಿಕುಲತಿಲಕ ಶ್ರೀ ರಾಘವೇಂದ್ರರಿಗೆ ankita garudavahana vittala

 ರಾಗ: ಧನ್ಯಾಸಿ ತಾಳ: ಅಟ

ಯತಿಕುಲತಿಲಕ ಶ್ರೀ ರಾಘವೇಂದ್ರರಿಗೆ

ನುತಿಸಿ ಸದ್ಭಕ್ತಿಯಲಿ ಎರಗುವೆನು


ಕ್ಷಿತಿಯೊಳು ಆಶ್ರಿತರಿಗೆ ಕಲ್ಪತರುವಾಗಿ

ಪ್ರತಿಕ್ಷಣಕತಿಹಿತವನೀವ ಗುರು ಅ. ಪ


ಹೇಮಕಶಿಪು ತಾನು ಭೂಮಿಯೊಳುದುಭವಿಸಿ

ಭ್ರಾಮಕಬುದ್ಧಿಯಿಂದ ನೇಮಾದಿ ಸರ್ವೇಶ

ವ್ಯೋಮಕೇಶನೆಯೆಂದು ಯಾಮಯಾಮಕೆ ತುತಿಸೆ

ತಾಮಸಮತಿ ಕೇಳಿ ಶ್ರೀಮನೋಹರನ್ನಾಗ

ಪ್ರೇಮಾದಿಪ್ರಾರ್ಥಿಸಿ ಸ್ಥಂಬದಿತೋರ್ದ ಹರಿಯ 1

ಹರಿಸರ್ವೋತ್ತಮನೆಂದುಚ್ಚರಿಸುತ ಮೂಲಾವ-

ತಾರದಿ ಪ್ರಹ್ಲಾದರಿವರು ಧರೆಮ್ಯಾಲೆ ವ್ಯಾಸ-

ತೀರಥರಾಗಿ ಚರಿಸುತ್ತ ಮರುತಮತಾಭ್ಧಿಗಿವರು

ಶರಧಿಜನಂತೆ ಅಭಿವೃದ್ಧಿಗೋಸುಗವಾಗಿ

ವರಚಂದ್ರಿಕಾದಿತ್ರಯ ರಚಿಸಿ ಮೆರೆದ ಗುರು 2

ರಾಘವೇಂದ್ರನೆಂದು ಬಾಗಿಬೇಡಲು ದುರಿ-

ತೌಘ ನಾಶನಗೈಯ್ಯುತ ಭಾಗವತರಿಗನು-

ರಾಗದಿ ಪೊರೆಯುತ್ತ ಯೋಗಿಮಾರ್ಗವ ತೋರುತ

ಜಾಗುಮಾಡದೆ ದೋಷ ನೀಗಿಸಿ ಸಲಹುವ 

ಯೋಗೇಶ ಗರುಡವಾಹನವಿಠಲನ ದೂತ 3

***