Showing posts with label ತೆರಳಿದರು ತೆರಳಿದರು ಹರಿಯ ಪುರಕೆ pranesha vittala suyameendra teertha stutih. Show all posts
Showing posts with label ತೆರಳಿದರು ತೆರಳಿದರು ಹರಿಯ ಪುರಕೆ pranesha vittala suyameendra teertha stutih. Show all posts

Saturday 1 May 2021

ತೆರಳಿದರು ತೆರಳಿದರು ಹರಿಯ ಪುರಕೆ ankita pranesha vittala suyameendra teertha stutih

 suyameendra teertha yati rayara mutt stutih

" ಶ್ರೀ ಅಭಿನವ ಪ್ರಾಣೇಶದಾಸರ " ಕಣ್ಣಲ್ಲಿ...

ರಾಗ : ಬಾಗೇಶ್ರೀ ತಾಳ : ಝಂಪೆ

ತೆರಳಿದರು ತೆರಳಿದರು

ಹರಿಯ ಪುರಕೆ ।

ವರ ಸುವ್ರತಿಗಳಾದ

ಸುಯಮೀಂದ್ರ ಗುರುವರರು ।। ಪಲ್ಲವಿ ।।


ಗುರು ರಾಘವೇಂದ್ರ

ರಾಯರ ದಿವ್ಯ ಪೀಠದಲಿ ।

ವರುಷ ವೇದಾಂತ

ಸಾಮ್ರಾಟರೆನಿಸಿ ।

ಮರುತ ಮತ ಸಿಂಧುವನು

ಧರೆಯೊಳೆಲ್ಲವ ಮೆರೆಸಿ ।

ಶರಣ ಜನ ಮಂದಾರ

ನೆನಿಸಿ ಶೋಭಿಸಿದವರು ।। ಚರಣ ।।


ಪ್ರಾಣ ಮತ ಶರಧಿಗೆ

ಯಾಮೀರರೆಂದೆನಿಪ ।

ಜ್ಞಾನಿ ವರ್ಯರು

ಹರಿಯ ಕರೆಯಾಲಿಸೀ ।

ಧೇನಿಸುತ ಗುರು ಚರಣ

ರಾಜ ನಗರವ ತ್ಯಜಿಸಿ ।

ಸಾನುರಾಗದಿ ಮಂತ್ರ

ಮಂದಿರಕೆ ಬಂದವರು ।। ಚರಣ ।।


ಪರಿಭವಾಬ್ಧಿದ ಪುಷ್ಯ

ಗುರುವಾರ ಸೀತ ದ್ವಿತೀಯಾ ।

ಪರಿಮಳಾಚಾರ್ಯರ

ಚರಣ ಸನ್ನಿಧಿಯಲ್ಲಿ ।

ಶರ ಧನುರ್ಧಾರಿ

ಶ್ರೀ ಮೂಲರಾಮನ ತುತಿಸಿ ।

ಶರಜಾಧವಭಿನವ

ಪ್ರಾಣೇಶವಿಠ್ಠಲೆನುತ ।। ಚರಣ ।।

******