Saturday 1 May 2021

ತೆರಳಿದರು ತೆರಳಿದರು ಹರಿಯ ಪುರಕೆ ankita pranesha vittala suyameendra teertha stutih

 suyameendra teertha yati rayara mutt stutih

" ಶ್ರೀ ಅಭಿನವ ಪ್ರಾಣೇಶದಾಸರ " ಕಣ್ಣಲ್ಲಿ...

ರಾಗ : ಬಾಗೇಶ್ರೀ ತಾಳ : ಝಂಪೆ

ತೆರಳಿದರು ತೆರಳಿದರು

ಹರಿಯ ಪುರಕೆ ।

ವರ ಸುವ್ರತಿಗಳಾದ

ಸುಯಮೀಂದ್ರ ಗುರುವರರು ।। ಪಲ್ಲವಿ ।।


ಗುರು ರಾಘವೇಂದ್ರ

ರಾಯರ ದಿವ್ಯ ಪೀಠದಲಿ ।

ವರುಷ ವೇದಾಂತ

ಸಾಮ್ರಾಟರೆನಿಸಿ ।

ಮರುತ ಮತ ಸಿಂಧುವನು

ಧರೆಯೊಳೆಲ್ಲವ ಮೆರೆಸಿ ।

ಶರಣ ಜನ ಮಂದಾರ

ನೆನಿಸಿ ಶೋಭಿಸಿದವರು ।। ಚರಣ ।।


ಪ್ರಾಣ ಮತ ಶರಧಿಗೆ

ಯಾಮೀರರೆಂದೆನಿಪ ।

ಜ್ಞಾನಿ ವರ್ಯರು

ಹರಿಯ ಕರೆಯಾಲಿಸೀ ।

ಧೇನಿಸುತ ಗುರು ಚರಣ

ರಾಜ ನಗರವ ತ್ಯಜಿಸಿ ।

ಸಾನುರಾಗದಿ ಮಂತ್ರ

ಮಂದಿರಕೆ ಬಂದವರು ।। ಚರಣ ।।


ಪರಿಭವಾಬ್ಧಿದ ಪುಷ್ಯ

ಗುರುವಾರ ಸೀತ ದ್ವಿತೀಯಾ ।

ಪರಿಮಳಾಚಾರ್ಯರ

ಚರಣ ಸನ್ನಿಧಿಯಲ್ಲಿ ।

ಶರ ಧನುರ್ಧಾರಿ

ಶ್ರೀ ಮೂಲರಾಮನ ತುತಿಸಿ ।

ಶರಜಾಧವಭಿನವ

ಪ್ರಾಣೇಶವಿಠ್ಠಲೆನುತ ।। ಚರಣ ।।

******

No comments:

Post a Comment