Showing posts with label ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ uragadrivasa vittala. Show all posts
Showing posts with label ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ uragadrivasa vittala. Show all posts

Friday 27 December 2019

ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ ankita uragadrivasa vittala

srinivasa kalyana
ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ ||pa||

ಪನ್ನಂಗಶಯನ ಪ್ರಸನ್ನರ ಪಾಲಿಪ
ಘನ್ನಮಹಿಮ ನೀನೆನ್ನನುದ್ಧರಿಸೂ||a.pa||

ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದ
ಪರಮಾದರದಿಂದಿರುವ ಸಮಯದಿ
ನಾರದ ಮುನಿ ಬಂದೊದಗಿ ನಿಂದ ಇ-
ದಾರಿಗರ್ಪಿತವೆಂದರುಹಿ ಮರಳೀ ತೆರಳಿದ
ಸುರಮುನಿವಚನದಿ ಭೃಗುಮುನಿವರ ಪೋಗಿ
ಹರವಿರಂಚಿಯರ ನೋಡಿದಾ ಉರುತರಕೋಪದಿ ನಿಲ್ಲುತ
ಪರಮಪುರುಷರಲ್ಲೆಂದೆನ್ನುತ ವೈಕುಂಠವನ್ನೇ ಸಾರುತ
ಹರುಷದಿ ಶ್ರೀಹರಿ ಉರಗಶಯನನಾಗಿ
ಪರಮಯೋಗನಿದ್ರೆ ಮಾಡುತಾ ಅರಿಯದಂತೆ ತಾ ನಟಿಸುತ
ಇರೆ ಮುನಿ ಪದದಿಂದೊದೆಯುತ ತ್ವರಿತದಿಂದ ತಾನೇಳುತ
ಹರುಷದಿ ಮುನಿಪಾದ ಕರದಲಿ ಒತ್ತುತ
ಕರುಣದಿ ಸಲಹಿದೆ ದುರಿತವ ಹರಿಸಿ
ಹರಿಭಕುತರ ಅಘಹರಿಸಿಕಾಯುವಂಥ
ಕರುಣಿಗಳುಂಟೇ ಶ್ರೀಹರಿ ಸರ್ವೋತ್ತುಮ ||1||

ಸ್ವಾಮಿ ನೀನಿಜಧಾಮವನೇ ತೊರೆದೂ
ಸ್ವಾಮಿಕಾಸಾರ ತೀರದಿ ನಿಂದೂ ಧಾಮವನರಸಿ
ವಲ್ಮೀಕವನೆ ನೋಡಿ
ವಿಮಲಸ್ಥಳವಿದೆಂದು ಮನದಲಿ ಆನಂದದಿಂದಲಿ ಬಂದು ನಿಂದೆ
ಸನ್ಮುದವನ್ನೇ ತೋರುತ
ಕಮಲ ಭವಶಿವ ತುರುಕರುರೂಪದಿ
ಈ ಮಹಗಿರಿಯನ್ನು ಅರಸುತ ಸ್ವಾಮಿ ನೀನಿಲ್ಲಹೆನೆಂದೆನ್ನುತ
ಕಾಮಧೇನು ಪಾಲ್ಗರೆಯುತಾ ಈ ಮಹಿಮೆಯನ್ನೇ ಬೀರುತಾ
ಭೂಮಿಗೊಡೆಯ ಚೋಳನೃಪಸೇವಕನು
ಧೇನುವನ್ನು ತಾ ಹೊಡೆಯಲು ಕಾಮನಯ್ಯ ನೀನೇಳಲು
ಭೀಮವಿಕ್ರಮವ ತೋರಲು ಕ್ಷಮಿಸಿದೆ ನೃಪನ ದಯಾಳು
ಅಮಿತ ಸುಗುಣಪೂರ್ಣ ಅಜರಾಮರಣ
ನೀ ಮಸ್ತಕಸ್ಪೋಟನ ವ್ಯಾಜವ ತೋರಿ
ಪ್ರೇಮದಿ ಗುರುಪೇಳ್ದೌಷಧಕಾಗಿ
ನೀ ಮೋಹವ ತೋರಿದೆ ವಿಡಂಬನಮೂರ್ತೇ||2||

ಮಾಯಾರಮಣನೆ ಜೀಯಾ ಕಾಯುವೆ ಜೀವನಿಕಾಯಾ
ತೋಯಜಾಂಬಕ ಹಯವನೇರಿ ಭರದಿ ತಿರುಗಿತಿರುಗೀ
ವನವನೆÀಲ್ಲ ಮೃಗನೆವನದಿ ನಿಂದು ನೋಡಿದೇ
ಪ್ರಿಯಸಖಿಯರ ಕೂಡಿ ಪದುಮಾವತಿಯು ತಾ
ಹಯದಿ ಕುಳಿತ ನಿನ್ನ ನೋಡಲು
ಪ್ರಿಯಳಿವಳೆನಗೆಂದು ಯೋಚಿಸಿ
ಕಾಯಜಪಿತ ನಿನ್ನ ಹಯವನೆ ಕಳಕೊಂಡು
ಮಾಯದಿಂದ ನೀ ಮಲಗಿದೆ
ತಾಯಿ ಬಕುಳೆಯೊಳು ಪೇಳಿದೆ
ತೋಯಜಮುಖಿಯಳ ಬೇಡಿದೇ
ಆ ಯುವತಿಯನ್ನೇ ಸ್ಮರಿಸುತಾ
ಶ್ರೀಯರಸನೆ ನೀನು ಸ್ತ್ರೀರೂಪದಿ ಹೋಗಿ
ಶ್ರೀಯಾಗಿಹಳಿನ್ನು ಶ್ರೀಹರಿಗೀಯಲು
ಶ್ರೇಯವೆಂದು ಆಕಾಶನನೊಪ್ಪಿಸಿ
ತಾಯಿಯಭೀಷ್ಟವನಿತ್ತೆ ಸ್ವರಮಣಾ ||3||

ಸಕಲಲೋಕೈಕನಾಥಾ ಭಕುತರಭೀಷ್ಟಪ್ರದಾತಾ
ಭಕುತನಾದ ಆಕಾಶನೃಪತಿಯು ಬಕುಳೆ ಮಾ-
ತ ಕೇಳಿ ಅಭಯವಿತ್ತು ಮನ್ನಿಸಿ ಪದುಮಾವತಿಯ ಪರಿಣಯ
ಶುಕರ ಸನ್ಮುಖಹಲ್ಲಿ ಅಕಳಂಕ ಮಹಿಮ-
ಗೆ ಕೊಟ್ಟನು ತಾ ಲಗ್ನಪತ್ರಿಕಾ
ಸ್ವೀಕರಿಸುವದೀ ಕನ್ನಿಕಾ ಈ ಕಾರ್ಯಕೆ ನೀವೆ ಪ್ರೇ
ರಕಾ ತಾ ಕಳುಹಿದ ಪುಣ್ಯಶ್ಲೋಕನು
ಶೋಕರಹಿತ ಜಗದೇಕವಂದ್ಯ ಅವಲೋಕಿಸಿ ಪತ್ರಿಕವನ್ನು
ಸಕಲಸಾಧನವಿಲ್ಲಿನ್ನು
ಲೋಕೇಶಗರುಹಬೇಕಿನ್ನು
ಏಕಾಂಗಿ ನಾನು ಎನ್ನಲು
ಲೋಕಪತಿಯೆ ಸುರಕೋಟಿಗಳಿಂದಲಿ
ಈ ಕುವಲಯದಿ ನಿನ್ನಯ ಪರಿಣಯವೆಸಗಲು
ಲೋಕಜನಕೆ ಕಲ್ಯಾಣವ ತೋರಿದೆ
ಭಕುತಜನಪ್ರಿಯ ಶ್ರೀವತ್ಸಾಂಕಿತ ||4||

ಖಗವರವಾಹನ ದೇವಾ
ತ್ರಿಗುಣರಹಿತ ಜಗಕಾವ
ಅಗಣಿತಮಹಿಮ ಗೋಮಯನೆನಿಸಿ
ಬಗೆಬಗೆ ರೂಪವ ಧರಿಸಿ ಪರಮಾದರದಲಿ
ಸುರರ ಪೊರೆಯುತಾ
ನಗಧÀರ ನೀನೀ ಗಿರಿಯೊಳು ನೆಲೆಸಿಹೆ
ಅಗಣಿತ ಸುರಗಣ ಕಿನ್ನರರು ಸಾಧ್ಯರು ತರು ಫಲ
ಖಗಮೃಗ ರೂಪವ ಬಗೆಬಗೆ ಇಹೆ
ಪೊಗಳಲಳವೇ ಗಿರಿವರವು
ಹಗಲು ಇರುಳು ಭಗವಂತನೆ ನಿನ್ನನ್ನು
ಪೊಗಳುತಿಹರು ನಿನ್ನ ಭಕುತರು
ನಿಗಮವ ಪಠಿಸುತ ನಡೆವರು ನಗೆ
ಮೊಗದಲಿ ನಿನ್ನ ದಾಸರು ಗೋವಿಂದ ಮುಕುಂದ ಎನ್ನುತಾ
ಯುಗ ಯುಗದೊಳು ನೀನಗದೊಳು ನೆಲಸಿಹೆ
ಜಗದ ದೇವ ರಾಜಿಸುವವನಾಗಿಹೆ
ಮಿಗಿಲೆನಿಸಿದ ಶ್ರೀ ವೆಂಕಟೇಶಾ
ಸದ್ಗುಣ ಸಚ್ಚಿದಾನಂದ ಮುಕುಂದ ಗೋವಿಂದಾ ||5||
*******