Showing posts with label ಸಿಂಧೂರ ವದನ ಸಿಂಧುಶಯನ ಪ್ರಿಯಾ ಸಿಂಧುಜಾತಗೆ ಶಾಪವನಿತ್ತ ಅಂಬಿಕಾ ತನಯಾ venkatanatha. Show all posts
Showing posts with label ಸಿಂಧೂರ ವದನ ಸಿಂಧುಶಯನ ಪ್ರಿಯಾ ಸಿಂಧುಜಾತಗೆ ಶಾಪವನಿತ್ತ ಅಂಬಿಕಾ ತನಯಾ venkatanatha. Show all posts

Wednesday 1 September 2021

ಸಿಂಧೂರ ವದನ ಸಿಂಧುಶಯನ ಪ್ರಿಯಾ ಸಿಂಧುಜಾತಗೆ ಶಾಪವನಿತ್ತ ಅಂಬಿಕಾ ತನಯಾ ankita venkatanatha

..

" ಶ್ರೀ ಗಣಪತಿ ಸ್ತೋತ್ರ "

ರಚನೆ : ಆಚಾರ್ಯ ನಾಗರಾಜು ಹಾವೇರಿ

ಮುದ್ರಿಕೆ : ವೇಂಕಟನಾಥ 


ಸಿಂಧೂರ ವದನ 

ಸಿಂಧುಶಯನ ಪ್ರಿಯಾ ।

ಸಿಂಧುಜಾತಗೆ ಶಾಪವನಿತ್ತ 

ಅಂಬಿಕಾ ತನಯಾ ।।

ಸಿಂಧು ವರದನ ದಯದಿ 

ಭಾರತ ಬರೆದ ವಿಜಿತಕಾಮ ।

ಸಿಂಧುಜಾ ಪತಿಯ 

ಕಾರುಣ್ಯಪಾತ್ರ ಭೂತಾಂಬರಾಧಿಪ ।।

ವಿಘ್ನಗಳ ಪರಿಹರಿಸೋ 

ದ್ವಿರದವರದನೆ  ।

ವಿಘ್ನಾಂಧಕಾರಕೆ ಶರಶ್ಚಂದಿರ 

ವಿಶ್ವಂಭರ ವೇಂಕಟನಾಥ ।।

" ವಿವರಣೆ "

ಸಿಂಧೂರ ವದನ = ಗಜಮುಖ

ಸಂಧುಶಯನ = ಶ್ರೀಮನ್ನಾರಾಯಣ

ಅಂಬಿಕಾ ತನಯ = ಪಾರ್ವತಿ ಪುತ್ರ

ಸಿಂಧು ವರದ = ಗಜೇಂದ್ರನ ಉದ್ಧರಿಸಿದ ಶ್ರೀಮನ್ನಾರಾಯಣ

ವಿಜಿತಕಾಮ = ಜಿತೇಂದ್ರಿಯನು

" ಸಿಂಧುಜಾ ಪತಿ "

ಸಮುದ್ರದಿಂದ ಉದಿಸಿದ ಶ್ರೀ ಮಹಾಲಕ್ಷ್ಮೀದೇವಿಯ ಪತಿ = ಶ್ರೀ ಹರಿ

ಭೂತಾಂಬರಾಧಿಪ = ಬ್ರಹ್ಮಾಂಡಗತ ಭೂತಾಕಾಶಕ್ಕೆ ಅಭಿಮಾನಿ

ದ್ವಿರದವದನನೆ = ಗಜಮುಖನೆ

" ವಿಘ್ನಾಂಧಕಾರಕೆ ಶರಶ್ಚಂದಿರ "

ವಿಘ್ನಗಳ ಸಮೂಹವೆಂಬ ಕತ್ತಲೆಗೆ ಶರತ್ಕಾಲದ ಚಂದಿರನಂತೆ ಇರುವವನು

" ವಿಶ್ವಂಭರ "

ಜಗತ್ತನ್ನು ಕಾಪಾಡುವವನು. 

ಜಗತ್ತನ್ನು ದೇಹದಲ್ಲಿ ಧರಿಸಿದವನು.

19 ಮುಖಗಳುಳ್ಳವನು.

ಎಡ ಭಾಗದಲ್ಲಿ - 9 ಮುಖಗಳು 

ಬಲ ಭಾಗದಲ್ಲಿ - 9 ಮುಖಗಳು 

ಮಧ್ಯದಲ್ಲಿ " ಗಜಮುಖ " ವುಳ್ಳವನು.

ಜೀವರ ಬಳಗಣ್ಣಿನಲ್ಲಿರುವ ಭಗವದ್ರೂಪ.

ಶ್ರೀ ವಿಘ್ನರಾಜನ ಉಪಾಸ್ಯ ಮೂರ್ತಿ ವಿಶ್ವಂಭರ  ನಾಮಕ ಪರಮಾತ್ಮ!!

****